ಮಂತ್ರಾಲಯದ ರಾಯರ ಹುಂಡಿ ಹಣ ಎಣಿಕೆ: 2.12 ಕೋಟಿ ರೂ. ಸಂಗ್ರಹ

Wed, 29 Mar 2023-10:44 am,

ರಾಯರ ಹುಂಡಿ ಎಣಿಕೆ ಕಾರ್ಯ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ಸಾವಿರಾರು ಭಕ್ತರಿಂದ ಹುಂಡಿ ಎಣಿಕೆ ನಡೆದಿದೆ.

ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ 27 ದಿನಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.

ಕೇವಲ 27 ದಿನಗಳಲ್ಲಿ ಭಕ್ತರಿಂದ ಗುರು ರಾಯರ ಸನ್ನಿಧಿಗೆ ಕೋಟಿ ಕೋಟಿ ರೂ. ದೇಣಿಗೆ ಹರಿದು ಬಂದಿದೆ.

ಹುಂಡಿಗಳಿಗೆ ಕಳೆದ 27 ದಿನಗಳಿಂದ ಸಲ್ಲಿಕೆಯಾದ ಕಾಣಿಕೆಯನ್ನು ಎಣಿಕೆ ಮಾಡಲಾಗಿದೆ. ಒಟ್ಟು 2 ಕೋಟಿ 11 ಲಕ್ಷ 96 ಸಾವಿರ ರೂ., 7 ಗ್ರಾಂ ಚಿನ್ನ ಮತ್ತು 571 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಬೇಸಿಗೆ ರಜೆ ಶುರುವಾದ ಹಿನ್ನೆಲೆ ರಾಯರ ಮಠಕ್ಕೆ ದೇಶ-ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link