ಬಿಗ್‌ಬಾಸ್‌ ಮನೆಯಲ್ಲಿ ಮಾರಾಮಾರಿ... ಚಪ್ಪಲಿ ಎಸೆತ, ಜೀವ ಭಯ..! ದೊಡ್ಮನೆಯಿಂದ ಜಗದೀಶ್-ರಂಜಿತ್ ಹೊರಕ್ಕೆ... ಫೋಟೋ ವೈರಲ್

Wed, 16 Oct 2024-1:54 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಪ್ರತೀ ದಿನ ಸ್ಪರ್ಧಿಗಳು ರೂಲ್ಸ್‌ ಬ್ರೇಕ್‌ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು. ಇದರಲ್ಲಿ ಬಹುಪಾಲು ಲಾಯರ್‌ ಜಗದೀಶ್‌ ಅವರದ್ದೇ ಎಂದು ಸಹ ಸ್ಪರ್ಧಿಗಳು ದೂರುತ್ತಿದ್ದರು. ಆದರೆ ಈ ಬೆನ್ನಲ್ಲೇ ಜಗದೀಶ್‌ ಮನೆಯಿಂದ ಹೊರಬಂದಿದ್ದಾರೆ ಎಂಬ ಶಾಕಿಂಗ್‌ ಸಂಗತಿ ರಿವೀಲ್‌ ಆಗಿದೆ.

ದಿನೇ ದಿನೇ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಜಗದೀಶ್‌ ಅವರ ವರ್ತನೆ ಅತಿಯಾಗುತ್ತಿದೆ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಇದೀಗ ಜಗದೀಶ್‌ ಹಾಗೂ ರಂಜಿತ್‌ ನಡುವೆ ಮಾರಾಮಾರಿ ನಡೆದಿದ್ದು, ಈ ಕಾರಣದಿಂದ ಇವರಿಬ್ಬರನ್ನು ಹೊರಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

 

ಜಗದೀಶ್‌ ಹಾಗೂ ರಂಜಿತ್‌ ನಡುವೆ ಜಗಳ ತಾರಕ್ಕೇರಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಕಾರಣದಿಣದ ಇಬ್ಬರನ್ನೂ ಮನೆಯಿಂದ ಆಚೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

 

ಕಳೆದ ದಿನ ಬಿಗ್ ಬಾಸ್’ ಶೋ ಬಗ್ಗೆ ಜಗದೀಶ್‌ ಅವಹೇಳನ ಮಾಡಿದ್ದರು, ಇದರಿಂದ ಕೆಂಡಾಮಂಡಲಾಗಿದ್ದ ಉಗ್ರಂ ಮಂಜು ಮಂಜು ಚಪ್ಪಲಿಯನ್ನ ಸಹ ಎಸೆದಿದ್ದರು. ಇದರ ಬೆನ್ನಲ್ಲೇ ಮತ್ತೆ ಜಗದೀಶ್‌ ಗಲಾಟೆ ಮಾಡಿದ್ದಾರೆ.

 

"ಬಿಗ್ ಬಾಸ್‌ನಲ್ಲಿ ನಾನು ಹೀರೋ ಆಗಬೇಕಿಲ್ಲ...ಯಾಕೆಂದ್ರೆ ರಿಯಲ್ ಲೈಫ್‌ನಲ್ಲಿ ನಾನು ಹೀರೋ. ವಿನ್ನರ್ ಆಗೋದು ಬೇಡ. 50 ಲಕ್ಷವೂ ಬೇಡ, ಅವರೇ ತೆಗೆದುಕೊಳ್ಳಲಿ. ಆ ಕಪ್‌ ತಗೊಂಡು ಮಾಡಬೇಕಾಗಿದ್ದು ಏನೂ ಇಲ್ಲ" ಎಂದು ಜಗದೀಶ್‌ ಅವಹೇಳನ ಮಾಡಿದ್ದರು.

 

ಇನ್ನೊಂದೆಡೆ ಬಿಗ್ ಬಾಸ್ ಮನೆಯಲ್ಲಿ ಗಲಾಟೆ ತಾರಕಕ್ಕೇರಿದ್ದು, ನಿನ್ನೆ ಎಪಿಸೋಡ್‌ನಲ್ಲಿ ಜಗದೀಶ್‌ ಅವರನ್ನು ಕನ್‌ಫೆಶನ್ ರೂಂಗೆ ಕರೆದಿದ್ದರು. ಆ ಸಂದರ್ಭದಲ್ಲಿ ರಂಜಿತ್‌, ಅವನಿಗೆ"ಆಚೆ ಬರಬೇಡ ಅಂತ ಹೇಳು ಬೆಳಗ್ಗೆವರೆಗು... ಬಂದ್ರೆ ಯಾರಾದ್ರು ಒಬ್ರಿಂದ ಒದೆ ತಿಂತಾನೆ" ಅಂತ ಹೇಳಿದ್ದರು.

 

ಅದಾದ ನಂತರ ಇವರಿಬ್ಬರ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ವ್ಯಕ್ತಿಯೊಬ್ಬರ ಜೊತೆ ತೆಗೆಸಿಕೊಂಡಿರುವ ಫೋಟೋ ವೈರಲ್‌ ಆಗುತ್ತಿದ್ದು, ಇದು ಬಿಗ್‌ ಬಾಸ್‌ನಿಂದ ಹೊರ ಬಂದ ಬಳಿಕ ತೆಗೆಸಿಕೊಂಡ ಫೋಟೋ ಎನ್ನಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link