ಶಾಂತಿ ಹುಡುಕುತ್ತಾ ಸದ್ಗುರು ಸನ್ನಿಧಿ ಸೇರಿದ ಸಮಂತಾ..! ಫೋಟೋಸ್ ನೋಡಿ

Wed, 19 Jul 2023-7:26 pm,

ನಟಿ ಸಮಂತಾ ರುತ್ ಪ್ರಭು ನಟನೆಯಿಂದ ದೂರ ಉಳಿದಿದ್ದು, ಇಂದು ಸದ್ಗುರು ಇಶಾ ಫೌಂಡೇಶನ್‌ಗೆ ಭೇಟಿ ನೀಡಿದ್ದಾರೆ.  

ಸಮಂತಾ ಆರೋಗ್ಯ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗಲು ಬಯಸಿದ್ದು ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿಯುವುದಾಗಿ ತಿಳಿಸಿದ್ದರು. ಅದರ ಹಿನ್ನೆಲೆ ಸದ್ಗುರು ಆಶ್ರಮಕ್ಕೆ ಭೇಟಿ ನೀಡಿದ್ದಾರೆ.  

ಸದ್ಗುರು ಸನ್ನಿದಾನದಲ್ಲಿ ಧ್ಯಾನ ಮಾಡುತ್ತಿರುವ ಕೆಲವೊಂದಿಷ್ಟು ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  

ಸರಳವಾದ ಬಿಳಿ ಬಟ್ಟೆ ಧರಿಸಿ, ಕೊರಳಲ್ಲಿ ಮಾಲೆ ಹಾಕಿಕೊಂಡು ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡುತ್ತಿರುವ ದೃಶ್ಯ ಫೋಟೋದಲ್ಲಿದೆ.  

ತನ್ನ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಶಾಂತವಾಗಿರಲು ಮತ್ತು ಶಕ್ತಿಯನ್ನು ಪಡೆಯಲು ಧ್ಯಾನವು ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ಸಮಂತಾ ಉಲ್ಲೇಖಿಸಿದ್ದಾರೆ.  

ಸದ್ಯ ಸಮಂತಾ ಅಭಿಮಾನಿಗಳು ಅವರ ಮುಂಬರುವ ಸಿನಿಮಾ 'ಕುಷಿ' ಗಾಗಿ ಕಾತುರದಿಂದ ಕಾಯುತ್ತಿದ್ದಾರೆ, ಇದರಲ್ಲಿ ಅವರು ವಿಜಯ್ ದೇವರಕೊಂಡ ಜೊತೆ ನಟಿಸಿದ್ದಾರೆ.  

ಕಳೆದ ವಾರವಷ್ಟೇ ಸಮಂತಾ ರುತ್ ಪ್ರಭು ಅವರು ಸಿಟಾಡೆಲ್ ಇಂಡಿಯಾ ಸಿನಿಮಾ ಶೂಟಿಂಗ್‌ ಪೂರ್ಣಗೊಳಿಸಿ, ಇದೀಗ ರಜೆಯಲ್ಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link