`ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ.. ನನ್ನನ್ನು ಉಳಿಸಿಕೋ` ನಟಿ ಮಂಜುಳಾ ʼಆʼ ನಟನ ಬಳಿ ಅಂಗಾಲಾಚಿ ಬೇಡಿಕೊಂಡಿದ್ದಂತೆ!

Thu, 25 Apr 2024-10:50 am,

ಅದ್ಭುತ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸೆಳೆದ ನಟಿ ಮಂಜುಳಾ ತನಗೆ ಬೇಗ ಸಾಯಲು ಇಷ್ಟವಿಲ್ಲ.. ಕೈ ಮುಗಿತೀನಿ ನನ್ನನ್ನು ಉಳಿಸಿಕೋ ಎಂದು ಅಂಗಲಾಚಿ ಬೇಡಿಕೊಂಡಿದ್ದರಂತೆ.. ಹಾಗಾದ್ರೆ ಯಾರು ಆ ನಟ? ಯಾರಲ್ಲಿ ನಟಿ ಬೇಡಿಕೊಂಡಿದ್ದರು..   

 ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಜನಮನದಲ್ಲಿ ನೆಲೆಸಿದ್ದ ಮಂಜುಳಾ ಆ ನಟನೊಂದಿಗೆ ತೆರೆಹಂಚಿಕೊಂಡಿದ್ದಲ್ಲದೇ ತೆರೆಯಾಚೆಗೂ ಉತ್ತಮ ಭಾಂದವ್ಯ ಹೊಂದಿದ್ದರು.. ನಟಿ ಆ ನಟನನ್ನು ಬಾಯಿತುಂಬ ಅಣ್ಣ ಎಂದು ಕರೆಯುತ್ತಿದ್ದರು.. ಇಬ್ಬರ ನಡುವೆ ಅಮೂಲ್ಯ ಭಾಂದವ್ಯವಿಂದಿತ್ತು.. ಅಪಾರ ಕಾಳಜಿಯೂ ಇತ್ತು.. ನಟಿ ಮಂಜುಳಾ ಅವರ ಕೊನೆಯುಸಿರು ಇರುವವರೆಗೂ ಆ ನಟನೇ ಅವರನ್ನು ನೋಡಿಕೊಂಡಿದ್ದು...   

ಆ ನಟ ಬೇರೆ ಯಾರೂ ಅಲ್ಲ. ಆಗಿನ ಕಾಲದ ಟಾಪ್‌ ಹೀರೋ ಶ್ರೀನಾಥ್‌.. ಹೌದು ನಟ ಶ್ರೀನಾಥ್‌ ಹಾಗೂ ಮಂಜುಳಾ ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದರು.. ಇಬ್ಬರ ಮಧ್ಯೆ ಒಂದೊಳ್ಳೆ ಬಾಂಧವ್ಯವಿತ್ತು.. ಶ್ರೀನಾಥ್‌ ಅವರಿಗೆ ನಟಿ ಮಂಜುಳಾ ಎಂದರೇ ಎಲ್ಲಿಲ್ಲದ ಪ್ರೀತಿ.. ಯಾವ ನಿರ್ಧಾರ ತೆಗೆದುಕೊಂಡರು ಅವರನ್ನು ಕೇಳಿಯೇ ತೆಗೆದುಕೊಳ್ಳುತ್ತಿದ್ದರು... ಇಷ್ಟರ ಮಟ್ಟಿಗೆ ಪ್ರೀತಿ ಅವರಲ್ಲಿತ್ತು..   

ಆದರೆ ನಟಿ ಮಂಜುಳ ಅವರನ್ನು ಸುಟ್ಟ ಮೈಯಲ್ಲಿ ನೋಡುತ್ತೇವೆ ಎಂದು ಯಾರು ಊಹಿಸಿರಲಿಲ್ಲ.. ಆಕೆ ಇಷ್ಟು ಬೇಗೆ ನಮ್ಮನ್ನು ಅಗಲುತ್ತಾಳೆ ಎನ್ನುವ ಸಣ್ಣ ಸೂಚನೆಯೂ ಯಾರಿಗೂ ಇರಲಿಲ್ಲ.. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ..  

ಆಗ ನಟಿ ಮಂಜುಳಾ ಶ್ರೀನಾಥ್‌ ಅವರೊಂದಿಗೆ ಮಾತನಾಡಿ ನಾನು ಮೊದಲಿನ ಹಾಗೇ ಆಗುತ್ತೇನೆ ಅಥವಾ ಇಲ್ಲವಾ ಅಣ್ಣ? ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ ನನ್ನನ್ನು ಉಳಿಸಿಕೋ ಎಂದು ಬೇಡಿಕೊಂಡಿದ್ದರುಂತೆ.. ಆದರೆ ವಿಧಿಯಾಟವೇ ಬೇರೆಯಾಗಿತ್ತು..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link