Divya Wagukar: ಕೊಂಚ ವಿರಾಮದ ನಂತರ ಕಿರುತೆರೆಗೆ ಮರಳಿದ ನಟಿ ದಿವ್ಯ!

Fri, 26 Jan 2024-3:27 pm,

ಕಿರುತೆರೆ ನಟಿ ದಿವ್ಯ ವಾಗೂಕರ್ ಕಳೆದ ವರ್ಷ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಾಯಕಿ ಸ್ಪಂದನಾ ಆಗಿ  ನಟಿಸಿದ್ದರು. 

ನಟಿ ದಿವ್ಯ ವಾಗೂಕರ್ 'ಮರಳಿ ಮನಸಾಗಿದೆ' ಧಾರಾವಾಹಿಯು ಮುಗಿದ ನಂತರ, 'ಭೂಮಿಗೆ ಬಂದ ಭಗವಂತ' ಸೀರಿಯಲ್‌ನಲ್ಲಿ ಪಾರ್ವತಿ ದೇವಿಯಾಗಿ, ಅತಿಥಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದರು.

ಸೀರಿಯಲ್‌ ಸುಂದರಿ ದಿವ್ಯ 'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಮೂರು ನಾಲ್ಕು ಸಂಚಿಕೆಗಳಲ್ಲಿ ಅತಿಥಿಯಾಗಿ ಅಭಿನಯಿಸಿದ ಬಳಿಕ, ಇದೀಗ ಮತ್ತೊಮ್ಮೆ ಪೂರ್ಣ ಪ್ರಮಾಣದ ನಾಯಕಿಯಾಗಿ ಗಮನ ಸೆಳೆಯಲು ರೆಡಿಯಾಗಿದ್ದಾರೆ.

ಈಗಾಗಲೇ ದಿವ್ಯಾ ವಾಗೂಕರ್ 'ಗೌರಿಶಂಕರ' ಧಾರಾವಾಹಿಗೆ  ಆಗಮನವಾಗಿದ್ದು, ಇಷ್ಟು ದಿನ ಗೌರಿಯಾಗಿ ಅಭಿನಯಿಸುತ್ತಿದ್ದ ಕೌಸ್ತುಭಮಣಿ ಸೀರಿಯಲ್‌ನಿಂದ ಹೊರಬಂದ ಕಾರಣ, ಆ ಪ್ರಾತ್ರಕ್ಕೆ ಇನ್ಮುಂದೆ  ದಿವ್ಯಾ ಜೀವ ನೀಡಲಿದ್ದಾರೆ.

ದಿವ್ಯ ವಾಗೂಕರ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕಿ ಶ್ರಾವಣಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. 

ನಟಿ ದಿವ್ಯ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಧಾರಾವಾಹಿಯಲ್ಲಿ ದಾಸ್ವಾಳ ಎನ್ನುವ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದರು. 

ಕಿರುತೆರೆ ಸುಂದರಿ ದಿವ್ಯ ವಾಗೂಕರ್ ಸಣ್ಣ ಗ್ಯಾಪ್‌ನ ನಂತರ ಕಿರುತೆರೆಗೆ ಮರಳಿದ್ದು, ಮತ್ತೊಮ್ಮೆ ತಮ್ಮ ಅಭಿನಯದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link