ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲೇ ಈ ಪ್ರಮುಖ ಘೋಷಣೆ ಮಾಡಿದ ಶಾರುಖ್ ಖಾನ್ ! ವೈರಲ್ ಆಗುತ್ತಿದೆ ಕಿಂಗ್ ಖಾನ್ ಘೋಷಣಾ ಪತ್ರ

Mon, 30 Sep 2024-11:15 am,

ಸದ್ಯ ತಿರುಮಲ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.ಇದಲ್ಲದೇ ತಿರುಮಲ ಜೊತೆಗೆ ದೇಶದ ದೇವಾಲಯಗಳ ಪಾವಿತ್ರ್ಯತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.   

ಮತ್ತೊಂದೆಡೆ,ತಿರುಮಲ ಲಡ್ಡು ವಿಚಾರದಲ್ಲಿ ಅಂದಿನ ಸರ್ಕಾರದ ಅವ್ಯವಹಾರದಿಂದ ಲಡ್ಡು ಪ್ರಸಾದ ಅಪವಿತ್ರವಾಗಿದೆ ಎಂದು ಎಪಿ ಸಿಎಂ ಚಂದ್ರಬಾಬು ನಾಯ್ಡು ಸಾಕ್ಷ್ಯ ಸಮೇತ ಬಹಿರಂಗಪಡಿಸಿದ್ದಾರೆ.  

ತಾನು ನಿರಪರಾಧಿ ಎಂದು ಸಾಬೀತುಪಡಿಸಲು ತಿರುಮಲಕ್ಕೆ ಬರುವುದಾಗಿ ಜಗನ್ ಹೇಳಿಕೊಂಡಿದ್ದರು.ಆದರೆ,ಆಲಯಕ್ಕೆ ಬರುವುದಕ್ಕೆ ಮುನ್ನ ಚಂದ್ರಬಾಬು ತಿರುಮಲ  ಬಾಲಾಜಿ ಸ್ವಾಮಿ ಮೇಲೆ ನಂಬಿಕೆ ಮತ್ತು ವಿಶ್ವಾಸವಿದೆ ಎಂಬ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು ಎಂದು ನಾಯ್ಡು ನೇತೃತ್ವದ ಮೈತ್ರಿ ಕೂಟದ ಮುಖಂಡರು  ಒತ್ತಾಯಿಸಿದ್ದಾರೆ.  

ಈ ಮಧ್ಯೆ, ಶಾರುಖ್ ತಮ್ಮ ಜವಾನ್ ಚಿತ್ರದ ಪ್ರಚಾರದ ಭಾಗವಾಗಿ ತಮ್ಮ ತಂಡದ ಸದಸ್ಯರು ಮತ್ತು ಕುಟುಂಬದೊಂದಿಗೆ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಆಗಮಿಸಿದ್ದರು.  

ಆ ಸಂದರ್ಭದಲ್ಲಿ ದರ್ಶನಕ್ಕೂ ಮುನ್ನ ತಮಗೆ ತಿರುಪತಿ ಬಾಲಾಜಿ ಮೇಲೆ ಭಕ್ತಿ,ನಂಬಿಕೆ ಎಂದು ಸಹಿ ಮಾಡಿರುವ ದಾಖಲೆ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅನ್ಯ ಧರ್ಮಿಯರಾಗಿ ಶಾರುಖ್, ವೆಂಕಟರಾಮಣ ಸ್ವಾಮಿಯ ಮೇಲೆ ಅಚಲ ನಂಬಿಕೆ ಇದೆ ಎಂದು ಘೋಷಿಸಿಕೊಂಡಿರುವಾಗ, ಜಗನ್ ಈ ಬಗ್ಗೆ ಹಿಂದೇಟು ಹಾಕುತ್ತಿರುವುದು ಈಗ ರಾಜ್ಯದಲ್ಲಿ ಹಾಟ್ ಟಾಪಿಕ್ ಆಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link