Ram Mandir Prana Pratishtha: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ರೀಡಾ ಜಗತ್ತಿನ ತಾರೆಯರು

Tue, 23 Jan 2024-1:19 pm,

ನಿನ್ನೆ (ಜನವರಿ 22, 2024) ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ವಿಜೃಂಭಣೆಯಿಂದ ಜರುಗಿದೆ. ಈ ವಿಶೇಷ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಕ್ರೀಡಾ ಜಗತ್ತಿನ ಹಲವು ತಾರೆಯರು ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಹಾಜರಿದ್ದ ಕೆಲವು ಕ್ರೀಡಾ ಬಂಧುಗಳ ಫೋಟೋಗಳು ಇಲ್ಲಿವೆ...  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X

ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ರಾಮತೀರ್ಥ ಅವರೊಂದಿಗೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ  ಈ ರೀತಿ ಕಾಣಿಸಿಕೊಂಡರು.  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X) 

ಪ್ರಸಿದ್ಧ ಕ್ರೀಡಾಪಟು ವೆಂಕಟೇಶ್ ಪ್ರಸಾದ್ ಕೂಡ ಕುಟುಂಬ ಸಮೇತ ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X) 

ಮಿಥಾಲಿ ರಾಜ್ ಮತ್ತು ಸೈನಾ ನೆಹ್ವಾಲ್ ಇಬ್ಬರೂ ಕೂಡ ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X) 

ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X) 

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತಮ್ಮ ತಾಯಿಯೊಂದಿಗೆ ಅಯೋಧ್ಯೆಯಲ್ಲಿ ಕಾಣಿಸಿಕೊಂಡ ಫೋಟೋ.  (ಫೋಟೋ ಕೃಪೆ- ಟ್ವಿಟ್ಟರ್ ಪ್ರಸ್ತುತ X) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link