Lucky Zodiac: ಕುಬೇರಪ್ರಿಯ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ: ಇನ್ಮುಂದೆ ಇರಲ್ಲ ಹಣದ ಕೊರತೆ, ಐಷಾರಾಮಿ ಬದುಕು ಖಂಡಿತ!
ಕೆಲವು ರಾಶಿಗಳ ಮೇಲೆ ಸಂಪತ್ತಿನ ದೇವರಾದ ಕುಬೇರನ ಆಶೀರ್ವಾದ ಯಾವಾಗಲೂ ಇರುತ್ತದೆ. ಜೊತೆಗೆ ಈ ಜನರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಅಂತಹ ಮೂರು ರಾಶಿಗಳನ್ನು ತಿಳಿಯೋಣ.
ಕಟಕ: ಈ ರಾಶಿಯವರನ್ನು ಆಳುವ ಗ್ರಹ ಚಂದ್ರ. ಈ ರಾಶಿಯ ಜನರು ತುಂಬಾ ಬುದ್ಧಿವಂತರು, ಶ್ರಮಶೀಲರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡುತ್ತಾರೆ. ಅದಕ್ಕಾಗಿಯೇ ಕುಬೇರ ದೇವ ಇವರ ಮೇಲೆ ವಿಶೇಷ ಕೃಪೆ ತೋರುತ್ತಾನೆ. ಕುಬೇರ ದೇವನ ಅನುಗ್ರಹದಿಂದ, ಇವರು ತುಂಬಾ ಅದೃಷ್ಟವಂತರಾಗುತ್ತಾರೆ. ಈ ಜನರು ತಾವು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಅಂಥವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
ವೃಶ್ಚಿಕ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ರಾಶಿಯ ಜನರು ಶ್ರಮಶೀಲರು ಮತ್ತು ತಮ್ಮ ಕೆಲಸದ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಈ ಜನರು ಯಾವುದೇ ಕೆಲಸದಿಂದ ಸುಲಭವಾಗಿ ತೃಪ್ತರಾಗುವುದಿಲ್ಲ. ವೃಶ್ಚಿಕ ರಾಶಿಯವರು ತಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡುತ್ತಾರೆ. ಅವರು ಯಶಸ್ಸನ್ನು ಮಾತ್ರ ಪಡೆಯುತ್ತಾರೆ. ಈ ಜನರು ತಮಗೆ ಬೇಕಾದ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಮಾಡುತ್ತಾರೆ. ಕುಬೇರ ದೇವ ಈ ರಾಶಿತ ಮೇಲೆ ವಿಶೇಷ ಆಶೀರ್ವಾದವನ್ನು ನೀಡುತ್ತಾನೆ. ಇದರಿಂದಾಗಿ ಇವರ ಜೀವನದಲ್ಲಿ ಹಣಕ್ಕೆ ಎಂದಿಗೂ ಕೊರತೆ ಕಾಣುವುದಿಲ್ಲ.
ತುಲಾ: ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಎಲ್ಲವನ್ನೂ ಸಂಪೂರ್ಣವಾಗಿ ಮಾಡುತ್ತಾರೆ. ಪ್ರತೀ ಕೆಲಸದಲ್ಲಿ ಅವರು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ. ಈ ರಾಶಿಯ ಜನರು ಸಂಪತ್ತಿನ ದೇವರಾದ ಕುಬೇರನ ವಿಶೇಷ ಅನುಗ್ರಹವನ್ನು ಹೊಂದಿದ್ದಾರೆ. ಅವರು ಜೀವನದಲ್ಲಿ ಹಣದ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)