Lucky Zodiac: ಕುಬೇರಪ್ರಿಯ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ: ಇನ್ಮುಂದೆ ಇರಲ್ಲ ಹಣದ ಕೊರತೆ, ಐಷಾರಾಮಿ ಬದುಕು ಖಂಡಿತ!

Sat, 06 May 2023-8:54 am,

ಕೆಲವು ರಾಶಿಗಳ ಮೇಲೆ ಸಂಪತ್ತಿನ ದೇವರಾದ ಕುಬೇರನ ಆಶೀರ್ವಾದ ಯಾವಾಗಲೂ ಇರುತ್ತದೆ. ಜೊತೆಗೆ ಈ ಜನರು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ. ಎಲ್ಲದರಲ್ಲೂ ಯಶಸ್ವಿಯಾಗುತ್ತಾರೆ. ಅಂತಹ ಮೂರು ರಾಶಿಗಳನ್ನು ತಿಳಿಯೋಣ.

ಕಟಕ: ಈ ರಾಶಿಯವರನ್ನು ಆಳುವ ಗ್ರಹ ಚಂದ್ರ. ಈ ರಾಶಿಯ ಜನರು ತುಂಬಾ ಬುದ್ಧಿವಂತರು, ಶ್ರಮಶೀಲರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ಇವರು ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡುತ್ತಾರೆ. ಅದಕ್ಕಾಗಿಯೇ ಕುಬೇರ ದೇವ ಇವರ ಮೇಲೆ ವಿಶೇಷ ಕೃಪೆ ತೋರುತ್ತಾನೆ. ಕುಬೇರ ದೇವನ ಅನುಗ್ರಹದಿಂದ, ಇವರು ತುಂಬಾ ಅದೃಷ್ಟವಂತರಾಗುತ್ತಾರೆ. ಈ ಜನರು ತಾವು ಕೆಲಸ ಮಾಡುವ ಯಾವುದೇ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸುತ್ತಾರೆ. ಅಂಥವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ

ವೃಶ್ಚಿಕ: ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ರಾಶಿಯ ಜನರು ಶ್ರಮಶೀಲರು ಮತ್ತು ತಮ್ಮ ಕೆಲಸದ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ಈ ಜನರು ಯಾವುದೇ ಕೆಲಸದಿಂದ ಸುಲಭವಾಗಿ ತೃಪ್ತರಾಗುವುದಿಲ್ಲ. ವೃಶ್ಚಿಕ ರಾಶಿಯವರು ತಮ್ಮ ಕೆಲಸವನ್ನು ಸಂಪೂರ್ಣ ಸಮರ್ಪಣೆಯಿಂದ ಮಾಡುತ್ತಾರೆ. ಅವರು ಯಶಸ್ಸನ್ನು ಮಾತ್ರ ಪಡೆಯುತ್ತಾರೆ. ಈ ಜನರು ತಮಗೆ ಬೇಕಾದ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಮಾಡುತ್ತಾರೆ. ಕುಬೇರ ದೇವ ಈ ರಾಶಿತ ಮೇಲೆ ವಿಶೇಷ ಆಶೀರ್ವಾದವನ್ನು ನೀಡುತ್ತಾನೆ. ಇದರಿಂದಾಗಿ ಇವರ ಜೀವನದಲ್ಲಿ ಹಣಕ್ಕೆ ಎಂದಿಗೂ ಕೊರತೆ ಕಾಣುವುದಿಲ್ಲ.

ತುಲಾ: ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಎಲ್ಲವನ್ನೂ ಸಂಪೂರ್ಣವಾಗಿ ಮಾಡುತ್ತಾರೆ. ಪ್ರತೀ ಕೆಲಸದಲ್ಲಿ ಅವರು ಖಂಡಿತವಾಗಿಯೂ ಯಶಸ್ವಿಯಾಗುತ್ತಾರೆ. ಈ ರಾಶಿಯ ಜನರು ಸಂಪತ್ತಿನ ದೇವರಾದ ಕುಬೇರನ ವಿಶೇಷ ಅನುಗ್ರಹವನ್ನು ಹೊಂದಿದ್ದಾರೆ. ಅವರು ಜೀವನದಲ್ಲಿ ಹಣದ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link