ಶ್ರಾವಣದಲ್ಲಿ ಈ ಮೂರು ರಾಶಿಗಳ ಮೇಲಿರಲಿದೆ ಮಹಾದೇವನ ಕೃಪೆ..! ಮುಟ್ಟಿದ್ದೆಲ್ಲಾ ಚಿನ್ನ

Mon, 13 Jun 2022-3:08 pm,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸದಲ್ಲಿ ಪೂಜೆ ಮತ್ತು ಉಪವಾಸ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಈ ತಿಂಗಳು 3 ರಾಶಿಯವರಿಗೆ ಶಿವನ ಆಶೀರ್ವಾದ ಸಿಗಲಿದೆ.   ಈ ಸಮಯದಲ್ಲಿ, ಮೂರು ರಾಶಿಯವರ ಎಲ್ಲಾ ಕೆಲಸದಲ್ಲಿಯೂ ಸಾಕಷ್ಟು ಪ್ರಗತಿ ಸಿಗುತ್ತದೆ.  

ಮೇಷ ರಾಶಿ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶ್ರಾವಣ ಮಾಸವು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಭಗವಾನ್ ಶಂಕರನ ಕೃಪೆಯು ಅತಿಯಾಗಿರುತ್ತದೆ. ಬಹಳ ದಿನಗಳಿಂದ ನೆರವೇರದೇ ಇರುವ ಮನದ ಇಚ್ಛೆ ಈ ಸಮಯದಲ್ಲಿ, ಈಡೇರಲಿದೆ. 

ಕರ್ಕ ರಾಶಿ - ಶ್ರಾವಣ ಮಾಸದಲ್ಲಿ ಈ ರಾಶಿಯವರಿಗೆ ಶಿವನು ದಯೆ ತೋರಲಿದ್ದಾನೆ. ಈ ಸಮಯದಲ್ಲಿ ಕೆಲಸಗಳಲ್ಲಿ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆದಾಯದಲ್ಲಿ ಹಠಾತ್ ಹೆಚ್ಚಳವಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಿ ಉತ್ತಮ ಆದಾಯ ಕೈ ಸೇರಬಹುದು.    

ಕನ್ಯಾ - ಈ ರಾಶಿಯವರಿಗೆ ಶ್ರಾವಣ ಮಾಸವು ಸಂತಸದಿಂದ ಕೂಡಿರಲಿದೆ. ಈ ಅವಧಿಯಲ್ಲಿ,  ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನವನ್ನು ಪಡೆಯುವುದು ಸಾಧ್ಯವಾಗುತ್ತದೆ. ಹೂಡಿಕೆಗೆ ಈ ಸಮಯ ತುಂಬಾ ಅನುಕೂಲಕರವಾಗಿರಲಿದೆ.   (ಸೂಚನೆ : ಈ ಮೇಲಿನ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link