ಬೆಳಗ್ಗೆ ಎದ್ದ ತಕ್ಷಣ ʼಈʼ ಒಂದು ಕೆಲಸ ಮಾಡಿದ್ರೆ ಆರ್ಥಿಕ ಬಿಕ್ಕಟ್ಟು ಮಾಯವಾಗಿ.. ಕೈತುಂಬ ಹಣವಾಡೋದಂತೂ ಫಿಕ್ಸ್!

Fri, 13 Sep 2024-10:34 am,

ವಾಸ್ತು ಶಾಸ್ತ್ರ ದಲ್ಲಿ ವಿವರಿಸಿರುವ ಕೆಲವು ಸುಲಭ ಕ್ರಮಗಳು ಅಥವಾ ನಿಯಮಗಳನ್ನು ಅನುಸರಿಸುವ ಮೂಲಕ ಆರ್ಥಿಕ ಸ್ಥಿರತೆ ಅಥವಾ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು. ವಾಸ್ತು ಶಾಸ್ತ್ರವು ಪುರಾತನ ವಿಜ್ಞಾನವಾಗಿದ್ದು  ಒಬ್ಬ ಕಡುಬಡವನನ್ನು ಶ್ರೀಮಂತನನ್ನಾಗಿಸುವ ಶಕ್ತಿಯನ್ನು ಇದು ಹೊಂದಿದೆ.. ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಈ ಕೆಲವು ನಿಯಮಗಳನ್ನು ಪಾಲಿಸಿ.   

ಮನೆಯಲ್ಲಿ ಯಾವುದಾದರೊಂದು ಗಿಡವನ್ನು ನೆಟ್ಟು ಆರೈಕೆಮಾಡಿ. ಅದನ್ನು ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಿ. ಅದು ಬೆಳೆದಂತೆ ನಿಮಗೆ ಲಾಭವಾಗುತ್ತದೆ. ಮನೆಯಲ್ಲಿ ಒಂದು ಕುಂಡದಲ್ಲಿ ಆಲೂಗಡ್ಡೆ ಗಿಡವನ್ನು ನೆಡುವುದು ತುಂಬಾ ಒಳ್ಳೆಯದು..   

 ಪ್ರತಿದಿನ ನಿಮ್ಮ ಮನೆಯಹೊಸ್ತಿಲು ಮತ್ತು ಮುಖ್ಯ ಬಾಗಿಲನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಿ. ಮನೆಯಲ್ಲಿ ಯಾವುದೇ ಧೂಳು ಸಂಗ್ರಹವಾಗಂದತೆ ನೋಡಿಕೊಳ್ಳಿ.. ಆಗ್ನೇಯ ದಿಕ್ಕಿನಲ್ಲಿ ಕಮಲದ ಮೇಲೆ ಕುಳಿತಿರುವ ಲಕ್ಷ್ಮೀ ಪೋಟೋ ಹಾಕಿ.   

ಬೆಳಗ್ಗೆ ಎದ್ದ ನಂತರ ನಿಮ್ಮ ಎರಡೂಅಂಗೈಗಳನ್ನು ನೋಡಿಮುತ್ತಿಡಿ. ಎಡಗೈಯಲ್ಲಿ ಹೆಬ್ಬೆರಳಿನ ಕೆಳಗೆ ಪ್ರತಿದಿನ ಸ್ವಲ್ಪ ತುಪ್ಪ ಹಚ್ಚಿ ಎರಡೂ ಅಂಗೈಗಳನ್ನು ಒಟ್ಟಿಗೆ ಉಜ್ಜಿ.. ಅಲ್ಲದೇ ನಿಮ್ಮ ಜೇಬಿನಲ್ಲಿ ಹಳದಿ ಬಟ್ಟೆಯಲ್ಲಿ ಕೇಸರಿ ಇರುವ ಬೆಳ್ಳಿಯ ಗುಂಡನ್ನು ಇಟ್ಟುಕೊಳ್ಳಿ..   

ತಾಮ್ರದ ಸ್ವಸ್ತಿಕವನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿ ನಲ್ಲಿ ಅಳವಡಿಸಬೇಕು. ಹೀಗೆಮಾಡುವುದರಿಂದ ಹಣದ ಹರಿವು ಹೆಚ್ಚಾಗುತ್ತದೆ ಮತ್ತು ಎಲ್ಲಾ ಸಮಸ್ಯೆಗಳುದೂರವಾಗುತ್ತವೆ ಎಂದು ಹೇಳಲಾಗುತ್ತದೆ.  

ಹಣಕಾಸಿನ ಸಮಸ್ಯೆಗಳಿಂದಮುಕ್ತಿ ಹೊಂದಲು ಪ್ರತಿದಿನ ಸ್ನಾ ನದ ನಂತರ ನಿಮ್ಮ ಹೊಕ್ಕುಳಕ್ಕೆ ಅರಿಶಿನವನ್ನು ಹಚ್ಚಿ.. ಹೀಗೆಮಾಡುವುದರಿಂದ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link