ನವದೆಹಲಿ: ಜೀವನದಲ್ಲಿ ಪ್ರಗತಿ ಹೊಂದಲು ಪ್ರತಿಯೊಬ್ಬರು ಕೆಲವು ವಾಸ್ತು ಕ್ರಮಗಳನ್ನು ಪಾಲಿಸಬೇಕು. ಇಲ್ಲವಾದರೆ ಸಮಸ್ಯೆಗಳು ಬೆನ್ನು ಬಿಡದ ಬೇತಾಳನಂತೆ ಕಾಡುತ್ತದೆ. ವಾಸ್ತು ಪ್ರಕಾರ ಬೆಳಗ್ಗೆ ಮನೆಯಲ್ಲಿ ಮಾಡುವಂತಹ ಕೆಲವು ಕೆಲಸಗಳು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಸ್ನಾನದ ನಂತರ ಕೆಲವು ಕೆಲಸಗಳನ್ನು ಮಾಡಿದರೆ ನೀವು ಜೀವನದಲ್ಲಿ ಆರ್ಥಿಕ ಪ್ರಗತಿ ಕಾಣುತ್ತೀರಿ.


COMMERCIAL BREAK
SCROLL TO CONTINUE READING

ಹಿಂದೂಧರ್ಮದ ಪ್ರಕಾರ ಬೆಳಗ್ಗೆ ಸ್ನಾನ ಮಾಡಿದ ನಂತರ ಮೊದಲು ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಿ.


ಇದನ್ನೂ ಓದಿ: Venus Transit 2024 March: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಶುಕ್ರನ ರಾಶಿ ಪರಿವರ್ತನೆ, ಈ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!


ಅದೇ ರೀತಿ ಬೆಳಗ್ಗೆ ಸ್ನಾನ ಮಾಡಿದ ನಂತರ ಗಂಗಾಜಲವನ್ನು ಮನೆಯ ಮೂಲೆ ಮುಲೆಗೂ ಸಿಂಪಡಿಸಬೇಕು. ಮನೆಯ ಮುಖ್ಯದ್ವಾರಕ್ಕೂ ಸಿಂಪಡಿಬೇಕು. ಜೊತೆಗೆ ನೀವು ಅದನ್ನು ಸೇವಿಸಬೇಕಂತೆ. ಇದರಿಂದ ನೀವು ಮಂಗಳಕರ ಫಲಿತಾಂಶವನ್ನು ಪಡೆಯುತ್ತೀರಿ.  


ಸ್ನಾನದ ಮಾಡಿದ ನಂತರ ಮನೆಯ ಮುಖ್ಯದ್ವಾರಕ್ಕೆ ಅರಿಶಿನವನ್ನು ಹಚ್ಚಿ ಪೂಜೆ ಮಾಡಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಬರುವುದಿಲ್ಲವೆಂದು ಹೇಳಲಾಗಿದೆ. ಸ್ನಾನವಾದ ನಂತರ ಗಂಗಾಜಲವಿಲ್ಲದಿದ್ದರೆ ಉಪ್ಪು ನೀರನ್ನು ಮನೆಯೊಳಗೆ ಸಿಂಪಡಿಸಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯಿಂದ ಹೊರಗೆ ಹೋಗುತ್ತದೆ ಅಂತಾ ನಂಬಲಾಗಿದೆ. ನೀವು ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಭಕ್ತಿಯಿಂದ ದೇವರನ್ನು ಪೂಜಿಸಿ. ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. 


ಇದನ್ನೂ ಓದಿ: Shukra Gochar 2024: ಶನಿ ರಾಶಿಗೆ ಶುಕ್ರನ ಪ್ರವೇಶ, ಈ 3 ರಾಶಿಯ ಜನರು ರಾಜನಂತೆ ಜೀವನ ನಡೆಸುತ್ತಾರೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.