Mangalavara Dina Bhavishya In Kannada: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07ನೇ ಮೇ 2024ರ ಮಂಗಳವಾರದಂದು ಚತುರ್ದಶಿ ತಿಥಿ ಬೆಳಗ್ಗೆ 11:41 ರಿಂದ ಅಮಾವಾಸ್ಯೆ ತಿಥಿ ಇರಲಿದೆ. ಮಂಗಳವಾರದ ದಿನ ಆಯುಷ್ಮಾನ್ ಯೋಗವು ಯಾರಿಗೆ ಪ್ರಯೋಜನಕಾರಿ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಮೇಷ ರಾಶಿ:  
ಇಂದು ಆಯುಷ್ಮಾನ್ ಯೋಗಾದ ಪರಿಣಾಮವಾಗಿ ಮೇಷ ರಾಶಿಯ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಉದ್ಯೋಗಸ್ಥರು ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಹೆಚ್ಚು ಗಮನಹಾರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. 


ವೃಷಭ ರಾಶಿ:  
ವೃಷಭ ರಾಶಿಯವರು ಇಂದು ನಿಮ್ಮ ಉದ್ಯೋಗ ಸ್ಥಳದಲ್ಲಿ ಸುಧಾರಣೆ ತರಲು ಸಂವಹನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಪರಿಗಣಿಸಿ. ವಿದೇಶಿ ಉತ್ಪನ್ನಗಳ ವ್ಯಾಪಾರ ಮಾಡುವವರು ಗುಣಮಟ್ಟದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. 
ವಿದ್ಯಾರ್ಥಿಗಳಿಗೆ ಅಧ್ಯಯನ ಸಂಬಂಧಿತ ಸಮಸ್ಯೆಗಳು ಕಾಡಬಹುದು. 


ಮಿಥುನ ರಾಶಿ:   
ಮಿಥುನ ರಾಶಿಯವರೇ ನೀವು ಕೆಲಸ ಮಾಡುವಾಗ ಮೇಲಧಿಕಾರಿಗಳು ಮತ್ತು ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿರಿ. ವ್ಯಾಪಾರಸ್ಥರು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ನಿಮ್ಮ ಹಣ ಬೇರೆಡೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅನಗತ್ಯವಾಗಿ ದುಬಾರಿ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. 


ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯ ಉದ್ಯಮಿಗಳು ತಮ್ಮ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಬದಲಿಗೆ ಆತ್ಮವಿಶ್ವಾಸದಿಂದ ಮುಂದುವರೆದರೆ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಲಿದೆ. ಇಂದು ಆಯುಷ್ಮಾನ್ ಯೋಗದ ಫಲದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸಮಯ. 


ಇದನ್ನೂ ಓದಿ- Shukraditya Yog: ದಶಕದ ಬಳಿಕ ಶುಕ್ರಾದಿತ್ಯ ರಾಜಯೋಗ, ಈ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭ


ಸಿಂಹ ರಾಶಿ:   
ಸಿಂಹ ರಾಶಿಯ ಉದ್ಯೋಗಸ್ಥರಿಗೆ ಲಾಭದಾಯಕ ದಿನ. ನಿಮ್ಮ ಜ್ಞಾನ ಮತ್ತು ನಡವಳಿಕೆಯಿಂದಾಗಿ ಅನೇಕ ಹೊಸ ಜನರು ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಾರೆ. ವ್ಯಾಪಾರಸ್ಥರು ದೀರ್ಘಸಮಯದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. 


ಕನ್ಯಾ ರಾಶಿ: 
ಕನ್ಯಾ ರಾಶಿಯ ಉದ್ಯೋಗಸ್ಥರು ತ್ವರಿತ ಯಶಸ್ಸನ್ನು ಸಾಧಿಸಲು ತಪ್ಪು ದಾರಿ ಹಿಡಿಯುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅದು ನಿಮ್ಮ ಇಮೇಜ್ ಮತ್ತು ವೃತ್ತಿಜೀವನ ಎರಡಕ್ಕೂ ಧಕ್ಕೆ ಉಂಟು ಮಾಡಲಿದೆ. ವ್ಯವಹಾರದ ದೃಷ್ಟಿಯಿಂದ ಸಮಯವು ಅನುಕೂಲಕರವಾಗಿಲ್ಲ. 


ತುಲಾ ರಾಶಿ:  
ತುಲಾ ರಾಶಿಯವರಿಗೆ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳು ಕೆಲಸದ ಸ್ಥಳದಲ್ಲಿ ನಿಮ್ಮ ಪ್ರೀತಿಯ ನಡವಳಿಕೆಯಿಂದ ಸಂತೋಷಪಡುತ್ತಾರೆ. ಆಯುಷ್ಮಾನ್ ಯೋಗಾದ ಫಲವಾಗಿ ಕನ್ಸಲ್ಟೆನ್ಸಿ ವ್ಯವಹಾರ ಮಾಡುವವರಿಗೆ ಹೊಸ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ. 


ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂದು ಶುಭ ದಿನ. ನಿಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡುವುದರಿಂದ ವೇತನ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಪ್ರವಾಸಕ್ಕೆ ಹೋಗುವ ಅವಕಾಶವನ್ನು  ಪಡೆಯಬಹುದು. 


ಇದನ್ನೂ ಓದಿ- ಒಳ್ಳೆಯ ಗಂಡ ಎಂದೆನಿಸಿಕೊಳ್ಳುತ್ತಾರೆ ಈ ರಾಶಿಯ ಹುಡುಗರು!ಪತ್ನಿಯ ಪ್ರತಿ ಆಸೆಯನ್ನು ಈಡೇರಿಸುತ್ತಾರೆಯಂತೆ ಇವರು  


ಧನು ರಾಶಿ:  
ಧನು ರಾಶಿಯವರೇ ಕೆಲಸದ ಸ್ಥಳದಲ್ಲಿ ಕೆಲವು ಅಪೂರ್ಣ ಕೆಲಸದ ಬಗ್ಗೆ ಬಾಸ್‌ನ ತೀಕ್ಷ್ಣವಾದ ಧ್ವನಿಯು ನಿಮ್ಮನ್ನು ವಿಚಲಿತಗೊಳಿಸಬಹುದು. ಉದ್ಯೋಗಸ್ಥರು ನಿಮ್ಮ ಜೀವನದ ಪ್ರತಿಯೊಂದು ಅಂಶದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕು, ಇದು ನಿಮ್ಮ ಯಶಸ್ಸಿನ ಸೂತ್ರವಾಗಿದೆ.


ಮಕರ ರಾಶಿ:  
ಮಕರ ರಾಶಿಯವರು ಕಚೇರಿಯಲ್ಲಿ ಯಾವುದೇ ಕೆಲಸವನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಿ. ನಿಮ್ಮ ಕೆಲಸವನ್ನು ಮರುಪರಿಶೀಲಿಸಬಹುದು. ಉದ್ಯಮಿಯು ವ್ಯವಹಾರದ ವಿಷಯಗಳಲ್ಲಿ ಚಿಂತನಶೀಲವಾಗಿ ಮುಂದುವರಿಯಬೇಕು. ಆಹಾರ ಮತ್ತು ಹಣ್ಣಿನ ವ್ಯಾಪಾರಸ್ಥರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 


ಕುಂಭ ರಾಶಿ:  
ಕುಂಭ ರಾಶಿಯವರೇ ಕೆಲಸದ ಸ್ಥಳದಲ್ಲಿ ಹಿರಿಯರು, ಕಿರಿಯರು ಮತ್ತು ಮೇಲಧಿಕಾರಿಗಳಿಂದ ಕೆಲವು ಹೊಸ ಕಾರ್ಯಗಳನ್ನು ಕಲಿಯುವ ಅವಕಾಶವನ್ನು ನೀವು ಪಡೆಯುತ್ತೀರಿ. ವ್ಯಾಪಾರ ವೆಚ್ಚಗಳಿಗಾಗಿ ನೀವು ಕೆಲವು ದಿನಗಳವರೆಗೆ ಕಾಯಬೇಕಾಗುತ್ತದೆ. 


ಮೀನ ರಾಶಿ:  
ಮೀನ ರಾಶಿಯವರೇ ನೀವು ಕೆಲಸದಲ್ಲಿ ಇತರರಿಗೆ ಸಹಾಯ ಮಾಡಬಹುದು, ಆದರೆ ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ಆಯುಷ್ಮಾನ್ ಯೋಗ ರಚನೆಯಿಂದ ಲಾಜಿಸ್ಟಿಕ್ಸ್, ಪ್ರವಾಸ ಮತ್ತು ಸಾರಿಗೆ ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.