Lifestyle Tips: ನಮ್ಮ ಧರ್ಮ ಶಾಸ್ತ್ರಗಳಲ್ಲಿ ಗರುಡ ಪುರಾಣಕ್ಕೆ ಮಹಾಪುರಾಣದ (Garud Mahapuran) ಸ್ಥಾನಮಾನ ನೀಡಲಾಗಿದೆ. ಇದರಲ್ಲಿ ಜೀವನ-ಮೃತ್ಯುಗಳನ್ನು ಹೊರತುಪಡಿಸಿ ಸುಖಕರ-ಯಹಸ್ವಿ ಜೀವನವನ್ನು ನಡೆಸಲು ಹಲವು ಸಲಹೆಗಳನ್ನು ನೀಡಲಾಗಿದೆ. ಇದರ ಜೊತೆಗೆ ಕೆಲ ಕೆಲಸಗಳನ್ನು ಎಂದಿಗೂ ಕೂಡ ಮಾಡಬಾರದು ಎಂದು ಹೇಳಲಾಗಿದೆ. ಈ ತಪ್ಪುಗಳು ಮನುಷ್ಯನ ಜೀವನವನ್ನೇ ಹಾಳುಮಾಡುತ್ತವೆ. ಹೀಗಾಗಿ ಸಮಯ ಇರುವಾಗಲೇ ಈ ಕೆಲಸಗಳಿಂದ ಅಂತರ ಕಾಯ್ದುಕೊಳ್ಳಿ. ಇಲ್ಲದಿದ್ದರೆ ಭಾರಿ ದೊಡ್ಡ ಹಾನಿ ಸಂಭವಿಸಲಿದೆ. ಈ ತಪ್ಪುಗಳು ಯಾವುದೇ ಮನುಷ್ಯನನ್ನು ಕ್ಷಣಾರ್ಧದಲ್ಲಿ ಬೀದಿಗೆ ತರಬಹುದು. (Spiritual News In Kannada)

COMMERCIAL BREAK
SCROLL TO CONTINUE READING

ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ
ಕೊಳೆಯಾದ ಬಟ್ಟೆ ಧರಿಸುವುದು -  ಸಾಮಾನ್ಯವಾಗಿ ಶುಚಿಯಾಗಿರುವ ಹಾಗೂ ಸ್ವಚ್ಚವಾಗಿ ವಾಸಿಸುವ ಜನರ ಮೇಲೆ ತಾಯಿ ಲಕ್ಷ್ಮಿ ತನ್ನ ಕೃಪೆ ತೋರುತ್ತಾಳೆ. ಹೀಗಾಗಿ ಸ್ವಚ್ಚವಾದ ಬಟ್ಟೆಗಳನ್ನು ಧರಿಸಿ, ಉಗುರುಗಳನ್ನು ಶುಚಿಯಾಗಿಡಿ. ನಿತ್ಯ ಸ್ನಾನವನ್ನು ಮಾಡಿ. ಹಾಳಾದ ಜೀವನಶೈಲಿ ಹೊಂದಿದವರ ಬಳಿ ಲಕ್ಷ್ಮಿ ಎಂದಿಗೂ ಕೂಡ ಬರುವುದಿಲ್ಲ ಹಾಗೂ ದಾರಿದ್ರ್ಯ ಅವರನ್ನು ಸುತ್ತುವರೆಯಲು ಆರಂಭಿಸುತ್ತದೆ. 

ಅಡುಗೆ ಮನೆಯಲ್ಲಿ ಮುಸುರಿ ಪಾತ್ರೆಗಳು ಇಡುವುದು - ರಾತ್ರಿಯ ಹೊತ್ತು ಅಡುಗೆ ಮನೆಯನ್ನು ಕೊಳೆಯಾಗಿ ಇಡುವುದು. ಮುಸುರಿ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಹಾಗೆಯೇ ಬಿಡುವುದರಿಂದ ಅನ್ನಪೂರ್ಣೆ ಹಾಗೂ ತಾಯಿ ಲಕ್ಷ್ಮಿಯ ಮುನಿಸಿಗೆ ಕಾರಣವಾಗುತ್ತೆ. ಇಂತಹ ಮನೆಗಳ ಅಭಿವೃದ್ಧಿ ಎಂದಿಗೂ ಕೂಡ ಸಾಧ್ಯವಿಲ್ಲ ಹಾಗೂ ಸಂಕಷ್ಟಗಳ ಸರಮಾಲೆಯೇ ಎದುರಿಸಬೇಕಾಗುತ್ತದೆ. ಹೀಗಾಗಿ ಮಲಗುವ ಮುನ್ನ ಕಿಚನ್ ಅನ್ನು ಸ್ವಚ್ಛ ಮಾಡಲು ಮರೆಯಬೇಡಿ.


ಬೆಳಗ್ಗೆ ತಡವಾಗಿ ಏಳುವುದು - ಯಾವ ಮನೆಯಲ್ಲಿ ಜನರು ಬೆಳಗ್ಗೆ ದೀರ್ಘಕಾಲದವರೆಗೆ ಮಲಗುತ್ತಾರೋ, ಅಂತವರ ಮನೆಯಲ್ಲಿ ತಾಯಿ ಲಕ್ಷ್ಮಿಯ ಕೃಪೆ ಇರುವುದಿಲ್ಲ. ಇಂತಹ ಜನರು ಜೀವನದಲ್ಲಿ ಅಭಿವೃದ್ಧಿಯನ್ನು ಕೂಡ ಹೊಂದುವುದಿಲ್ಲ ಮತ್ತು ಅವರ ಕನಸುಗಳು ಕೂಡ ಈಡೇರುವುದಿಲ್ಲ. ಅಷ್ಟೇ ಅಲ್ಲ ಅವರಿಗೆ ಕಷ್ಟಕ್ಕೆ ತಕ್ಕಂತೆ ಫಲಗಳು ಕೂಡ ಸಿಗುವುದಿಲ್ಲ.


ಅಸಹಾಯಕರು ಮತ್ತು ನಿರ್ಗತಿಕರ ಶೋಷಣೆ - ಅಸಾಹಾಯಕ ಹಾಗೂ ನಿರ್ಗತಿಕರನ್ನು ಶೋಷಣೆಗೆ ಒಳಪಡಿಸುವವರು, ಇತರರ ಹಕ್ಕನ್ನು ಕಸಿದುಕೊಳ್ಳುವವರು, ಮೋಸದಿಂದ ಇತರರ ಆಸ್ತಿಪಾಸ್ತಿಯನ್ನು ಕಬಳಿಸುವವರು ಸ್ವಲ್ಪ ಸಮಯದವರೆಗೆ ಶ್ರೀಮಂತಿಕೆಯನ್ನು ಅನುಭವಿಸಿದರೂ ಕೂಡ ಶೀಘ್ರದಲ್ಲಿಯೇ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಕೆಟ್ಟ ಕೆಲಸಗಳಿಂದ ದೂರವಿರಿ.


ಇದನ್ನೂ ಓದಿ-Tips To Become Millionaire: ಬೆಳಗ್ಗೆ ಎದ್ದಾಕ್ಷಣ ನೀವು ಮಾಡುವ ಈ ಕೆಲಸಗಳು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿಸುತ್ತವೆ!


ಮಹಿಳೆಯರನ್ನು ಮತ್ತು ವೃದ್ಧರನ್ನು ಅವಮಾನಿಸುವವರು - ಮಹಿಳೆಯರನ್ನು ಹಾಗೂ ವೃದ್ಧರನ್ನು ಅವಮಾನಿಸುತ್ತಾರೋ, ದುರ್ಬಲರ ಜೊತೆಗೆ ಕೆಟ್ಟದಾಗಿ ವರ್ತಿಸುತ್ತಾರೋ ಅವರ ಮೇಲೆ ದುಃಖದ ಪರ್ವತವೆ ಕುಸಿದು ಬೀಳುತ್ತದೆ. ಅವರ ಬಳಿ ಇರುವ ಹಣ, ಘನತೆ-ಗೌರವ ಎಲ್ಲವೂ ಕೂಡ ಹೊರಟುಹೋಗುತ್ತದೆ. 


ಇದನ್ನೂ ಓದಿ-Kajal Remedies: ಕಣ್ಣಿನ ಕಾಡಿಗೆಗೆ ಸಂಬಂಧಿಸಿದ ಈ ಉಪಾಯಗಳು ನಿಮ್ಮ ಭಾಗ್ಯವನ್ನೇ ಬದಲಾಯಿಸುತ್ತವೆ!


(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ