ನವದೆಹಲಿ: ಪ್ರತಿಯೊಬ್ಬರೂ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಹೋಗುತ್ತಾರೆ. ದೇವರ ಮುಂದೆ ನಿಂತು ಭಕ್ತಿಯಿಂದ ಪ್ರಾರ್ಥಿಸುವ ಅನೇಕರು ತಮ್ಮ ಮನಸ್ಸಿನಲ್ಲಿ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳುತ್ತಾರೆ. ತಮ್ಮ ಆಸೆಗಳನ್ನು ನೆರವೇರಿಸಿದರೆ ಹರಕೆ ತೀರಿಸುವುದಾಗಿ ಹೇಳಿರುತ್ತಾರೆ. ಹೀಗೆ ದೇವರ ಬಳಿ ಹರಕೆ ಹೊತ್ತವರು ಮರೆತುಬೀಡುತ್ತಾರೆ. ದೇವರ ಬಳಿ ಹರಕೆ ಹೊತ್ತು ಅದನ್ನು ತೀರಿಸದಿದ್ದರೆ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಯಾವುದೇ ಒಬ್ಬ ಮನುಷ್ಯನಿಗೆ ಕೆಟ್ಟ ಸಮಯ ಬಂದಾಗ, ಅವನು ದೇವರನ್ನು ಸ್ಮರಿಸುತ್ತಾನೆ. ನಂತರ ತನ್ನ ಮತ್ತು ಕುಟುಂಬದ ರಕ್ಷಣೆಗಾಗಿ ಪ್ರಾರ್ಥಿಸಿ ದೇವರಲ್ಲಿ ಹರಕೆ ತೀರಿಸುವುದಾಗಿ ಹೇಳುತ್ತಾರೆ. ಹೀಗೆ ಪ್ರತಿಜ್ಞೆ ಮಾಡಿ ಮರೆತುಬಿಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ನೀವು ದೇವರಿಗೆ ಕೃತಜ್ಞತೆ ಹೇಳಲು ಮರೆತರೆ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  


ಇದನ್ನೂ ಓದಿ: ʼಬಾಬ್ರಿ ಮಸೀದ್‌ ಜೀವಂತವಾಗಿದೆʼ ಭಾರತದಲ್ಲಿ ಕೋಮುಗಲಭೆ ಎಬ್ಬಿಸಲು ʼಪಾಕ್‌ʼ ಸಂಚು.!


ನೀವು ಮನಸ್ಸಿನಲ್ಲಿ ಇಚ್ಛೆಯೊಂದಿಗೆ ದೇವರನ್ನು ಪ್ರಾರ್ಥಿಸಿದರೆ ಮತ್ತು ಅದು ನೆರವೇರಿದರೆ, ನೀವು ಆ ದೇವ-ದೇವತೆಗಳಿಗೆ ಕೃತಜ್ಞತೆ ಸಲ್ಲಿಸಬೇಕು ಮತ್ತು ಸರಿಯಾದ ಮಾರ್ಗದಲ್ಲಿ ಭಕ್ತಿಯಿಂದ ಪೂಜಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಸೆ ಈಡೇರಿದರೆ, ಮೊದಲು ದೇವರಿಗೆ ಧನ್ಯವಾದ ತಿಳಿಸಬೇಕು. ನಂತರ ಬ್ರಾಹ್ಮಣರಿಗೆ ಆಹಾರ ನೀಡಿ, ಅವರಿಗೆ ದೇಣಿಗೆ ನೀಡಿ ಉಪಚರಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.


ದೇವರಿಗೆ ಕೃತಜ್ಞತೆ ಸಲ್ಲಿಸಲು ಮನೆಯಲ್ಲಿ ಭಜನೆ, ಕೀರ್ತನೆ ಕಾರ್ಯಕ್ರಮ ಆಯೋಜಿಸಬೇಕು. ಇಂತಹ ಶುಭ ಕಾರ್ಯಗಳಿಂದ ನಿಮ್ಮ ಕೆಲಸಗಳಿಗೆ ಯಾವುದೇ ಅಡ್ಡಿಯಿರಲ್ಲ.  ಇಂತಹ ಪರಿಸ್ಥಿತಿಯಲ್ಲಿ ತೆಂಗಿನಕಾಯಿಯನ್ನು ಒಡೆಯುವುದನ್ನು ಸಹ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ದೇವರನ್ನು ಮೆಚ್ಚಿಸಲು ಇದು ಒಂದು ವಿಶೇಷ ಮಾರ್ಗವಾಗಿದೆ. ಇದರಿಂದ ಜೀವನದಲ್ಲಿ ಸುಖ ಶಾಂತಿ ಸಿಗುತ್ತದೆ. ಅದೇ ರೀತಿ ಪ್ರತಿಜ್ಞೆಯ ನೆರವೇರಿಕೆಯ ನಂತರ ದೇವರನ್ನು ಭಕ್ತಿಯಿಂದ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು. ಇದಲ್ಲದೆ, ಭಗವಾನ್ ಶಿವನನ್ನು ಲಕ್ಷ್ಮಿದೇವಿ ಮತ್ತು ಭಗವಾನ್ ವಿಷ್ಣುವಿನ ಜೊತೆಗೆ ಪೂಜಿಸಬೇಕು.  


ಇದನ್ನೂ ಓದಿ: India's Richest Temple: ಭಾರತದ ಶ್ರೀಮಂತ ದೇವಾಲಯಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.