Lucky Zodiac Sign : ಗುರುವಾರ, ಗುರು ಮತ್ತು ಸೂರ್ಯ ಪರಸ್ಪರ ಒಂಬತ್ತನೇ ಮತ್ತು ಐದನೇ ಮನೆಗಳಲ್ಲಿ ಇರುತ್ತಾರೆ. ಇದರಿಂದಾಗಿ ನವಪಂಚಮ ಯೋಗವು ರೂಪುಗೊಳ್ಳುತ್ತದೆ. ಅಲ್ಲದೆ, ಚಂದ್ರನು ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಾನೆ.ಗುರುವಾರ ಅಂದರೆ ಇಂದು ಪೌಷ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ.ಈ ದಿನ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಸುಕರ್ಮ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಹಸ್ತಾ ನಕ್ಷತ್ರದ ಮಂಗಳಕರ ಸಂಯೋಜನೆ ರೂಪುಗೊಳ್ಳುತ್ತಿದೆ.ಈ ಕಾರಣದಿಂದಾಗಿ, ಇಂದು ಅನೇಕ ರಾಶಿಯವರಿಗೆ ಮಹತ್ವದ್ದಾಗಿದೆ. 


COMMERCIAL BREAK
SCROLL TO CONTINUE READING

ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ : 
ಮೇಷ ರಾಶಿ :

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮೀ ನಾರಾಯಣ ಯೋಗದಿಂದಾಗಿ ಈ ರಾಶಿಯವರಿಗೆ ಇಂದು ಅತ್ಯಂತ ಸಂತೋಷದಾಯಕ ದಿನವಾಗಲಿದೆ.ಅದೃಷ್ಟ ಇವರ ಪಾಲಿಗೆ ಇರುತ್ತದೆ. ಈ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರಲಿದೆ.ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಅದೃಷ್ಟದ ಸಹಯೋಗದೊಂದಿಗೆ ಪೂರ್ಣಗೊಳ್ಳುವುದು. ಈ ಅವಧಿಯಲ್ಲಿ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಕೈ ಹಿಡಿಯುವುದು. ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಆರೋಗ್ಯವು ಸುಧಾರಿಸುತ್ತದೆ. 


ಇದನ್ನೂ ಓದಿ ಈ ರಾಶಿಗಳಿಗೆ ರಾಜಯೋಗ ಕರುಣಿಸಲಿದ್ದಾನೆ ಶನಿ ಮಹಾತ್ಮ!ಕಷ್ಟದ ನೆರಳೂ ಬೀಳದಂತೆ ಕಾಯುತ್ತಾನೆ


ಕಟಕ ರಾಶಿ :
ಸುಕರ್ಮ ಯೋಗದ ಕಾರಣದಿಂದಾಗಿ, ಕರ್ಕ ರಾಶಿಯವರಿಗೆ ಇಂದು ಮಂಗಳಕರ ಮತ್ತು ಫಲಪ್ರದವಾಗಲಿದೆ. ವಿಷ್ಣುವಿನ ಕೃಪೆಯಿಂದ ಮನದ ಇಷ್ಟಾರ್ಥಗಳು ಈಡೇರುತ್ತವೆ. ಕೌಟುಂಬಿಕ ಜೀವನ ಶಾಂತಿಯುತವಾಗಿರುತ್ತದೆ.ಕರ್ಕಾಟಕ ರಾಶಿಯವರು ಆಸ್ತಿ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು.ವ್ಯಾಪಾರಸ್ಥರಿಗೆ ಇಂದು ಅತ್ಯಂತ ಶುಭ ದಿನವಾಗಿದೆ. ಪ್ರಭಾವಿ ವ್ಯಕ್ತಿಯಿಂದ ಲಾಭವಾಗುವುದು.ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರೆ, ಈ ದಿನವು ನಿಮಗೆ ಅನುಕೂಲಕರವಾಗಿರುತ್ತದೆ. 


ತುಲಾ ರಾಶಿ :
ತುಲಾ ರಾಶಿಯವರಿಗೆ ಇಂದು ಶುಭ ದಿನವಾಗಲಿದೆ. ತುಲಾ ರಾಶಿಯವರ ಅದೃಷ್ಟ ಸದಾ ಅವರ ಜೊತೆಗಿರುತ್ತದೆ. ಆಧ್ಯಾತ್ಮಿಕತೆಯ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ವೃತ್ತಿಯಲ್ಲಿ ಉನ್ನತಿಗೆ ಅವಕಾಶ ಸಿಗಲಿದೆ.ಉದ್ಯಮಿಗಳಿಗೆ ಯಶಸ್ಸು ಮತ್ತು ಲಾಭವಾಗುವ ಸಾಧ್ಯತೆಗಳಿವೆ. ಈ ಶುಭ ಯೋಗದಲ್ಲಿ ಯಾವುದೇ ಕೆಲಸ ಮಾಡಿದರೂ, ಧನಾತ್ಮಕ ಫಲಿತಾಂಶವೇ ಸಿಗುವುದು. ವಿದೇಶಕ್ಕೆ ಹೋಗಬೇಕು ಎಂದು ಕೊಂಡಿರುವವರ ಇಷ್ಟಾರ್ಥಗಳು ಈಡೇರುತ್ತವೆ.ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.


ಇದನ್ನೂ ಓದಿ : ಚಂದ್ರಪ್ರಿಯ ಆಯುಷ್ಮಾನ್ ರಾಜಯೋಗದಿಂದ 2024ರಲ್ಲಿ ಈ ರಾಶಿಯವರು ಲಕ್ಕಿಯಂತೆ… ಇವರ ಬಾಳಲ್ಲಿ ಕಷ್ಟವೆಲ್ಲಾ ಕಳೆದು ಅಮೃತ ಘಳಿಗೆ ಶುರು


ಧನು ರಾಶಿ :
ಧನು ರಾಶಿಯವರು ಹಸ್ತಾ ನಕ್ಷತ್ರದ ಕಾರಣ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ನಿಮ್ಮ ಕಡೆ ಅದೃಷ್ಟವಿದ್ದು, ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಈ ಅವಧಿಯಲ್ಲಿ, ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಆತ್ಮವಿಶ್ವಾಸ ಕೂಡಾ ಹೆಚ್ಚಾಗುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಸಿಗಲಿದೆ.ಉದ್ಯಮಿಗಳು ದೊಡ್ಡ ವ್ಯವಹಾರವನ್ನು ಪಡೆಯಬಹುದು. ವಿದ್ಯಾರ್ಥಿಗಳು ಕೆಲಸದಲ್ಲಿ ಗಮನಹರಿಸುವುದರಿಂದ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.