Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಸೋಮವಾರ ಕೃತಿಕಾ ನಕ್ಷತ್ರ ವ್ಯಾಘಾತ ಯೋಗ ಇರಲಿದೆ. ಇಂದು ಕೃಷ್ಣಜನ್ಮಾಷ್ಟಮಿಯು ಯಾವ ರಾಶಿಗೆ ಶುಭ ಫಲಗಳನ್ನು ತರಲಿದೆ ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಮೇಷ ರಾಶಿಯವರ ಭವಿಷ್ಯ (Aries Horoscope):  
ಕೃಷ್ಣಜನ್ಮಾಷ್ಟಮಿಯು ಈ ರಾಶಿಯ ಜನರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ನಿಮ್ಮ ಕೆಲಸಗಳಲ್ಲಿ ಪೋಷಕರ ಬೆಂಬಲದಿದ್ನ ಯಶಸ್ಸು, ದೂರದ ಪ್ರಯಾಣದಿಂದ ಲಾಭ ಸಾಧ್ಯತೆ ಇದೆ. ಶುಭ ಸುದ್ದಿಗಳಿಂದ ಮನಸ್ಸಿಗೆ ನೆಮ್ಮದಿ. 


ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮ್ಮ ಕೆಲವು ತಪ್ಪುಗಳನ್ನು ಸರಿಪಡಿಸಿಕೊಂಡು ಹೋದರಷ್ಟೇ ಲಾಭ, ಇಲ್ಲವೇ ಭಾರೀ ನಷ್ಟವನ್ನು ಅನುಭವಿಸುವಿರಿ. ಅನಗತ್ಯವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ. ಯುವಕರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡುವರು. 


ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಕೃಷ್ಣಜನ್ಮಾಷ್ಟಮಿಯ ಈ ದಿನ ನಿಮ್ಮ ಮನಸ್ಸು ಕೊಂಚ ಒತ್ತಡದಿಂದ ಕೂಡಿರಬಹುದು. ಹೂಡಿಕೆ ಸಂಬಂಧಿತ ವಿಚಾರಗಳಲ್ಲಿ ದೂರವೇ ಉಳಿದರೆ ಒಳಿತು, ಇಲ್ಲವೇ ಭಾರೀ ನಷ್ಟ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಕಠಿಣ ಪರಿಶ್ರಮ ಅಗತ್ಯ. 


ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಕೆಲವು ಅನಿರೀಕ್ಷಿತ ಖರ್ಚುಗಳು ನಿಮ್ಮ ವೆಚ್ಚವನ್ನು ಹೆಚ್ಚಿಸಬಹುದು. ಕೆಲವರಿಗೆ ಕುಟುಂಬಕ್ಕೆ ಹೊಸ ಸದಸ್ಯರ ಆಗಮನದಿಂದ ಸಂತಸ. ಉದ್ಯೋಗದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯಲಿದೆ. 


ಇದನ್ನೂ ಓದಿ- Shasha Rajyog: ದೀಪಾವಳಿ ನಂತರ ಈ ರಾಶಿಯವರ ಜೀವನದಲ್ಲಿ ಒಳ್ಳೆ ದಿನಗಳು ಆರಂಬಹ್, ಕೈತುಂಬಾ ಹಣ


ಸಿಂಹ ರಾಶಿಯವರ ಭವಿಷ್ಯ (Leo Horoscope):  
ಯೋಚಿಸದೆ ಖರ್ಚು ಮಾಡುವ ನಿಮ್ಮ ಸ್ವಭಾವವು ಭವಿಷ್ಯದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ಕುಟುಂಬದಲ್ಲಿ ಧನಾತ್ಮಕ ಸುದ್ದಿಗಳು ನಿಮ್ಮ ಮನಸ್ಸಿಗೆ ಸಂತೋಷವನ್ನು ನೀಡಲಿವೆ. 


ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಆರೋಗ್ಯ ವಿಚಾರಗಳಲ್ಲಿ ಸುಧಾರಣೆಯನ್ನು ಕಾಣಬಹುದು. ನಿಮ್ಮಲ್ಲಿ ಕೆಲವರು ಭವ್ಯವಾದ ರಜೆಯನ್ನು ಆನಂದಿಸಲು ಸಿದ್ಧರಾಗಿರುವಿರಿ. ಇಂದು ಸಂಜೆ ವೇಳೆಗೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿಕೆಯು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸಲಿದೆ. 


ತುಲಾ ರಾಶಿಯವರ ಭವಿಷ್ಯ (Libra Horoscope): 
ಹಣಕಾಸಿನ ವಿಚಾರದಲ್ಲಿ ಕೊಂಚ ಎಚ್ಚರಿಕೆ ಅಗತ್ಯವಾಗಿದೆ. ದೂರದ ಊರಿಗೆ ಪ್ರಯಾಣವು ಲಾಭದಾಯಕವಾಗಿರುತ್ತದೆ. ಕೆಲವರು ಕ್ರೀಡಾ ಚಟುವಟಿಕೆ ಅಥವಾ ಹವ್ಯಾಸವನ್ನು ಮುಂದುವರಿಸುವುದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುತ್ತದೆ. 


ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವಿವೇಚನಾಯುಕ್ತ ಖರ್ಚು ಮಾಡುವ ಮೂಲಕ ಹಣದ ಕೊರತೆಯನ್ನು ನೀಗಿಸುವಿರಿ. ಇಂದು ನೀವು ಕೈ ಹಾಕುವ ಕೆಲಸಗಳಲ್ಲಿ ಕೃಷ್ಣನ ಕೃಪೆಯಿಂದ ಯಶಸ್ಸನ್ನು ಕಾಣುವಿರಿ. ಕೃಷ್ಣಜನ್ಮಾಷ್ಟಮಿಯ ಈ ದಿನ ಕೆಲಸಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳುವಿರಿ. 


ಇದನ್ನೂ ಓದಿ- ಕೃಷ್ಣ ಜನ್ಮಾಷ್ಟಮಿಯಿಂದ ಈ ರಾಶಿಯವರಿಗೆ ಸುವರ್ಣಯುಗ ಪ್ರಾರಂಭ..! ಸಂತೋಷ, ಆರ್ಥಿಕ ಬಲ..


ಧನು ರಾಶಿಯವರ ಭವಿಷ್ಯ (Sagittarius Horoscope):  
ಕೃಷ್ಣಜನ್ಮಾಷ್ಟಮಿಯಂದು ಭಗವಾನ್ ಶ್ರೀ ಕೃಷ್ಣನ ಕೃಪೆಯಿಂದ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ. ವೃತ್ತಿ ರಂಗದಲ್ಲಿನ ಅಭಿವೃದ್ಧಿಯಲ್ಲಿ ನೀವು ಅಪಾರವಾದ ತೃಪ್ತಿಯನ್ನು ಪಡೆಯುವ ಸಾಧ್ಯತೆಯಿದೆ. 


ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮಲ್ಲಿ ಕೆಲವರು ಇಂದು ವ್ಯಾಪಕವಾದ ಪ್ರಯಾಣ ಕೈಗೊಳ್ಳಬೇಕಾಗಬಹುದು. ಆದಾಗ್ಯೂ, ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಬಿಸಿನೆಸ್ ನಿಮಿತ್ತ ಬೇರೆಯವರ ಭೇಟಿ ಲಾಭದಾಯಕವಾಗಿದೆ. 


ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯ ಜನರಿಗೆ ಇಂದು ಹೂಡಿಕೆಯಿಂದ ಭರ್ಜರಿ ಲಾಭ ಸಾಧ್ಯತೆ ಇದೆ. ಸಂಜೆ ವೇಳೆಗೆ ಮನೆಗೆ ಅತಿಥಿಗಳ ಆಗಮನವಾಗಲಿದ್ದು, ಮನಸ್ಸಿನ ಸಂತೋಷವನ್ನು ಹೆಚ್ಚಿಸಲಿದ್ದಾರೆ. ಆರೋಗ್ಯ ವಿಚಾರದಲ್ಲೂ ಉತ್ತಮ ದಿನ. 


ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮ್ಮ ಸೋಮಾರಿತನವನ್ನು ಬಿಟ್ಟು ಮುಂದುವರೆದರಷ್ಟೇ ನಿಮಗೆ ಪ್ರಯೋಜನವಾಗಲಿದೆ. ಇಲ್ಲದಿದ್ದರೆ, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಇರುತ್ತದೆ. ವ್ಯಾಪಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರಲಿದೆ. 


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.