Garlic remedies in Vastu Shastra: ಬೆಳ್ಳುಳ್ಳಿ ಪ್ರತಿ ಭಾರತೀಯರ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಅದು ಇಲ್ಲದೆ ಆಹಾರದ ರುಚಿ ಅಪೂರ್ಣ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರ ಜೊತೆಗೆ ಬೆಳ್ಳುಳ್ಳಿಯನ್ನು ಬಳಸಿ ಮಾಡುವ ಹಲವಾರು ಜ್ಯೋತಿಷ್ಯ ಪರಿಹಾರಗಳಿವೆ. ಇದನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನೀವು ತೊಡೆದುಹಾಕಬಹುದು. ವೃತ್ತಿಜೀವನದಿಂದ ಹಿಡಿದು ಆರ್ಥಿಕ ಸಮಸ್ಯೆಗಳನ್ನು ತೊಡೆದುಹಾಕಬಹುದು.


COMMERCIAL BREAK
SCROLL TO CONTINUE READING

ಬೆಳ್ಳುಳ್ಳಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ 


ನೀವು ಕಷ್ಟಪಟ್ಟು ಕೆಲಸ ಮಾಡಿದರೂ ಬಯಸಿದ ಫಲಿತಾಂಶವನ್ನು ಪಡೆಯದಿದ್ದರೆ, ಶನಿವಾರದಂದು ಪರ್ಸ್ ಅಥವಾ ಹಣದ ಚೀಲದಲ್ಲಿ ಬೆಳ್ಳುಳ್ಳಿಯ ಎಸಳನ್ನು ಇರಿಸಿ. ಈ ಉಪಾಯವನ್ನು ಮಾಡುವುದರಿಂದ, ನೀವು ಆರ್ಥಿಕ ಚೇತರಿಕೆ ಕಾಣುವಿರಿ.


ಇದನ್ನೂ ಓದಿ: Shukra Gochar: ಈ ರಾಶಿಯವರ ಹಣೆ ಬರಹವನ್ನೇ ಬದಲಿಸುವ ಶುಕ್ರ.. ಅಪಾರ ಧನಾಗಮನ, ವೈಭವದ ಜೀವನ


ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ 


ಸಂಸಾರದಲ್ಲಿ ಸದಾ ಜಗಳ ನಡೆಯುತ್ತಿದ್ದರೆ ಅದಕ್ಕೂ ಬೆಳ್ಳುಳ್ಳಿಯಲ್ಲಿ ಪರಿಹಾರವಿದೆ. ಪತಿ - ಪತ್ನಿಯರ ನಡುವೆ ಮನಸ್ತಾಪ ಉಂಟಾದರೆ ಏಳು ಬೆಳ್ಳುಳ್ಳಿ ಮೊಗ್ಗುಗಳನ್ನು ತೆಳ್ಳಗಿನ ಕಡ್ಡಿಯಲ್ಲಿ ಸಿಗಿಸಿ ಮನೆಯ ಛಾವಣಿಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕತೆ ದೂರವಾಗಿ, ಶಾಂತಿ ನೆಲೆಸುತ್ತದೆ.


ಉದ್ಯೋಗದಲ್ಲಿ ಬಡ್ತಿ ದೊರೆಯಲು 


ಸತತ ಪರಿಶ್ರಮದ ನಂತರವೂ ಯಶಸ್ಸನ್ನು ಸಾಧಿಸಲು ಆಗದಿದ್ದರೆ ಈ ಉಪಾಯವನ್ನು ಮಾಡಬೇಕು. ನಿಮ್ಮ ಕಚೇರಿ ಅಥವಾ ವ್ಯಾಪಾರದ ಸ್ಥಳದಲ್ಲಿ ಗೇಟ್‌ನಲ್ಲಿ ನೀವು ಐದುಬೆಳ್ಳುಳ್ಳಿ ಎಸಳನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ನೇತು ಹಾಕಬೇಕು. ಹೀಗೆ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.


ಇದನ್ನೂ ಓದಿ: Long hair tips: ಉದ್ದ, ದಪ್ಪ ಕೂದಲಿಗಾಗಿ ಈ ಎಣ್ಣೆಯನ್ನು ಬಳಸಿ, ಹೇರ್‌ ಫಾಲ್‌ ಕೂಡ ನಿಲ್ಲುತ್ತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.