ಬೆಂಗಳೂರು : ಪತಿಯ ಅದೃಷ್ಟದ ಕೀಲಿಕೈ ಹೆಂಡತಿಯ ಬಳಿ ಇರುತ್ತದೆ ಎಂದು ಹೇಳಲಾಗುತ್ತದೆ.ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ,ಮನೆಯ ಮಹಿಳೆಯರನ್ನು ತಾಯಿ ಲಕ್ಷ್ಮೀಯ ರೂಪವೆಂದು ಪರಿಗಣಿಸಲಾಗುತ್ತದೆ.ಪತಿಯ ಯಶಸ್ಸಿನ ಹಿಂದೆ ಪತ್ನಿಯ ಕೈವಾಡವಿರುತ್ತದೆ ಎಂದು ಹೇಳಲಾಗುತ್ತದೆ.ನಿಮ್ಮ ಪತಿಯು ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರ ಪ್ರಗತಿಯನ್ನು ಪಡೆಯಬೇಕೆಂದು ನೀವು ಕೂಡಾ  ಬಯಸುವುದಾದರೆ ಜ್ಯೋತಿಷ್ಯದಲ್ಲಿ ಹೇಳಲಾದ ಕೆಲವು ಪರಿಹಾರ ಕಾರ್ಯಗಳನ್ನು  ಅಳವಡಿಸಿಕೊಳ್ಳಬೇಕು.ಈ ಮೂಲಕ ಪತಿಯ ಅದೃಷ್ಟವನ್ನು ರಾತ್ರೋರಾತ್ರಿ ಬೆಳಗಿಸಬಹುದು. 


COMMERCIAL BREAK
SCROLL TO CONTINUE READING

ಪತಿಯ ಯಶಸ್ಸಿಗಾಗಿ ಈ ಕ್ರಮಗಳನ್ನು ಅನುಸರಿಸಿ : 
ನಿಮ್ಮ ಪತಿ ನಿಮ್ಮೊಂದಿಗೆ ಹೆಚ್ಚು ಮಾತನಾಡುತ್ತಿಲ್ಲ ಎಂದಾದರೆ ಅಥವಾ ಅಸಮಾಧಾನಗೊಂಡಿದ್ದರೆ, ಸ್ನಾನದ ನಂತರ ಮನೆಯ ಹೊಸ್ತಿಲನ್ನು ನಿಯಮಿತವಾಗಿ ತೊಳೆಯಬೇಕು.ಹೊಸ್ತಿಲು ತೊಳೆಯುವಾಗ,ನೀರಿನಲ್ಲಿ ಸ್ವಲ್ಪ ಹಾಲು ಮಿಶ್ರಣ ಮಾಡಬೇಕು. 


ಇದನ್ನೂ ಓದಿ : ವರ್ಷಕ್ಕೊಮ್ಮೆ ಮಾತ್ರ ವಿನಾಯಕನಿಗೆ ಈ ಎಲೆ ಅರ್ಪಣೆ: ಗರಿಕೆ ಜೊತೆ ಇಟ್ಟು ಪೂಜಿಸಿದರೆ ಅಂದುಕೊಂಡ ಕಾರ್ಯ ಕಿಂಚಿತ್ತೂ ವಿಘ್ನವಿಲ್ಲದೆ ನಡೆಯುವುದು


ಮನೆಯಲ್ಲಿ ಸಂತೋಷ ಮತ್ತು ಶಾಂತಿ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ನೆಲೆಯಾಗಬೇಕಾದರೆ ರಾತ್ರಿ ಮಲಗುವ ಮುನ್ನ ಎಂಜಲು ಪಾತ್ರೆಗಳನ್ನು ಸ್ವಚ್ಚ ಮಾಡಿಟ್ಟುಕೊಳ್ಳಬೇಕು. ಅಡುಗೆಮನೆಯಲ್ಲಿ ಯಾವುದೇ ಕಾರಣಕ್ಕೂ ಎಂಜಲು ಪಾತ್ರೆಗಳನ್ನು ಬಿಡಬಾರದು.ಇದರಿಂದ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆಯಂತೆ.  


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ನಿಮ್ಮ ಪತಿ ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಎದುರಿಸುತ್ತಿದ್ದರೆ ಅಥವಾ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಕೈಯಲ್ಲಿ ಮೂರು ಬೇವಿನ ಎಲೆಗಳನ್ನು ತೆಗೆದುಕೊಂಡು ನಿಮ್ಮ ಕುಲದೇವತೆಯ ಹೆಸರನ್ನು 108 ಬಾರಿ ಜಪಿಸಿ.ನಂತರ ಈ ಎಲೆಗಳನ್ನು ದೇವಿಯ ಪಾದಗಳಿಗೆ ಸ್ಪರ್ಶಿಸಿ ಗಂಡನ ಜೇಬಿನಲ್ಲಿ ಇರಿಸಬೇಕು.ಇದು ಹಣಕಾಸಿಗೆ  ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.


ಇದನ್ನೂ ಓದಿ : ಒಮ್ಮೆ ಗೌರಿ ಪೂಜೆ ಆರಂಭಿಸಿದರೆ ಸತತ ಇಷ್ಟು ವರ್ಷ ಅನುಸರಿಸಿಕೊಂಡು ಬರಲೇ ಬೇಕು ! ಪೂಜೆ ಮಾಡುವ ಮುನ್ನ ಈ ನಿಯಮ ತಿಳಿದುಕೊಳ್ಳಿ


ಪತಿಯ ಸಂಪತ್ತನ್ನು ಹೆಚ್ಚಿಸಲು, ಹಸುವಿಗೆ ಹಿಟ್ಟಿನ ಉಂಡೆಗಳನ್ನು ಪ್ರತಿದಿನ ಅಥವಾ ವಾರಕ್ಕೆ 2 ರಿಂದ 3 ಬಾರಿ ತಿನ್ನಬೇಕು. ಇದು ಸಾಧ್ಯವಾಗದಿದ್ದರೆ ತಿಂಗಳಿಗೊಮ್ಮೆ ಕಪ್ಪು ಹಸುವಿಗೆ ಜೋಳ ತಿನ್ನಿಸಿದರೂ ಪ್ರಯೋಜನವಾಗುವುದು. 


ನಿಮ್ಮ ಪತಿಗೆ ದುಷ್ಟ ಕಣ್ಣಿನಿಂದ ತೊಂದರೆಯಾಗಿದ್ದರೆ ಮತ್ತು ಅವರ ಆರೋಗ್ಯ ಸರಿಯಿಲ್ಲದಿದ್ದರೆ,ಪತ್ನಿ ಶುಕ್ರವಾರದಂದು ಕುಲದೇವಿಯ ಫೋಟೋ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು.ನಂತರ, ದೇವಿಯನ್ನು ಧ್ಯಾನಿಸಿ ಮಂತ್ರವನ್ನು 108 ಬಾರಿ ಜಪಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.


ರಾತ್ರಿ ಕೂದಲು ಬಿಟ್ಟು ಮಲಗುವ ಮಹಿಳೆಯರ ಹವ್ಯಾಸವೇ ಪತಿಯ ಏಳಿಗೆಗೆ ಮುಳ್ಳಾಗಬಹುದು.ಕೂದಲನ್ನು ತೆರೆದು ಮಲಗುವುದರಿಂದ ನಕಾರಾತ್ಮಕತೆ ಪ್ರವೇಶಿಸುತ್ತದೆ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.