ನವದೆಹಲಿ: ಭಾನುವಾರ ಧರ್ಮಶಾಲಾದಲ್ಲಿ ಸತತ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯ ರದ್ದಾಗಿದೆ. 



COMMERCIAL BREAK
SCROLL TO CONTINUE READING

ಮಳೆಯಿಂದಾಗಿ ಅಧಿಕಾರಿಗಳು ಅಧಿಕೃತ ಕಟ್ ಆಫ್ ಸಮಯವನ್ನು 9.46ಕ್ಕೆ ನಿಗಧಿ ಪಡಿಸಿದ್ದರು, ಆದಾಗ್ಯೂ ಮಳೆ ಮುಂದುವರೆದಿದ್ದರಿಂದಾಗಿ ಅನಿವಾರ್ಯವಾಗಿ ಪಂದ್ಯವನ್ನು ರದ್ದು ಮಾಡಲಾಯಿತು.



ನಿರಂತರ ಮಳೆ ಸುರಿದಿದ್ದರಿಂದಾಗಿ ಟ್ವೀಟ್ ಮಾಡಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಶಾನ್ ಪೊಲ್ಲಾಕ್ ' ಇವತ್ತು ರಾತ್ರಿ ಯಾವುದೇ ರೀತಿ ಪಂದ್ಯ ನಡೆಯುವ ಹಾಗೆ ಕಾಣುತ್ತಿಲ್ಲ ' ಎಂದು ಟ್ವೀಟ್ ಮಾಡಿದ್ದರು.



ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದು ಹುಮ್ಮಸ್ಸಿನಲ್ಲಿ ಬಿಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಹುರುಪನ್ನು ಹೊಂದಿದೆ.ಮೂರು ಪಂದ್ಯಗಳ ಈ ಟ್ವೆಂಟಿ ಸರಣಿಯಲ್ಲಿ ಈಗ ಧರ್ಮಶಾಲಾ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡನೇ ಪಂದ್ಯ ಸೆಪ್ಟಂಬರ್ 18 ರಂದು ಮೊಹಾಲಿಯಲ್ಲಿ ನಡೆಯಲಿದೆ.