ನವದೆಹಲಿ: ಟಿವಿ ಶೋವೊಂದರಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕ್ರಿಕೆಟ್ ಆಟಗಾರ ಕೆ.ಎಲ್ ರಾಹುಲ್ ಈಗ ಸ್ವ ವಿಮರ್ಶೆ ಮಾಡಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವದ ಬಗ್ಗೆ ತಮಗೆ ಸಂಶಯ ಮೂಡಿತ್ತು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಾರಂಭದ 10 ದಿನಗಳಲ್ಲಿ ಜನರು ನನ್ನನ್ನು ವಿರೋಧಿಸುತ್ತಿರುವುದರ ಬಗ್ಗೆ ಅವರನ್ನು ಎದುರಿಸುವುದು ಕಷ್ಟಕರವಾಗಿತ್ತು, ಆದರೆ ನಾನು ಅನಿವಾರ್ಯವಾಗಿ ನನ್ನನು ನಾನೇ ಸಂಶಯದಿಂದ ನೋಡಲು ಪ್ರಾರಂಭಿಸಬೇಕಾಯಿತು.ಅತಿ ಕಠಿಣ ಸಂಗತಿ ಎಂದರೆ ಹಲವು ಜನರು ನಿನ್ನ ಬಗ್ಗೆ ಬರೆಯುತ್ತಿರುವಾಗ ನಿಜವಾಗಲು ನಾನು ಕೆಟ್ಟ ವ್ಯಕ್ತಿಯೇ ಎನ್ನುವುದನ್ನು ತಿಳಿಯುವುದು ಕಷ್ಟಕರವಾಗಿತ್ತು ಎಂದು ಕೆ.ಎಲ್ ರಾಹುಲ್ ಖಾಸಗಿ ವಾಹಿನಿವೊಂದಕ್ಕೆ ತಿಳಿಸಿದ್ದಾರೆ.


ಇನ್ನು ಮುಂದುವರೆದು "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಯಾರಾದರು ಪ್ರಶ್ನೆ ಕೇಳಿದಾಗ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ ಆದ್ದರಿಂದ ನಾನು ಜನರನ್ನು ಎದುರಿಸಲು ಸಿದ್ದನಾಗಿರಲಿಲ್ಲ ಎಂದು ಹೇಳಿದರು. ಕ್ರಿಕೆಟ್ ಸುತ್ತುವರಿದ ಗ್ಲಾಮರ್ ತಮ್ಮ ಮೂಲ ನೆಲೆಯನ್ನು ಹಾಗೂ ಹಿತೈಸಿಗಳಿಂದ ದೂರವಿರುವಂತೆ ಮಾಡಿತ್ತು ಎಂದು ಕೆ.ಎಲ್.ರಾಹುಲ್ ತಿಳಿಸಿದರು.