ನವದೆಹಲಿ: ವಿರಾಟ್ ಕೊಹ್ಲಿ ಪ್ರಸ್ತುತ ಭಾರತೀಯ ತಂಡದಲ್ಲಿ ಹೋರಾಟದ ಮನೋಭಾವವನ್ನು ಹುಟ್ಟುಹಾಕಿದ್ದಾರೆ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಗಾಯದಿಂದಾಗಿ ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿದ್ದು ಮತ್ತು ಪಿತೃತ್ವ ರಜೆ ಹಿನ್ನಲೆಯಲ್ಲಿ ಕೊಹ್ಲಿ (Virat Kohli) ತವರಿಗೆ ಮರಳಿದ ನಂತರವೂ ಅಜಿಂಕ್ಯ ರಹಾನೆ ನೇತೃತ್ವದ ಅನನುಭವಿ ಭಾರತೀಯ ತಂಡ, ಆಸ್ಟ್ರೇಲಿಯಾ ವಿರುದ್ಧ 2-1 ಸರಣಿಯ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರ ಬಗ್ಗೆ ನಾಸಿರ್ ಹುಸೇನ್ ಸುದೀರ್ಘವಾಗಿ ಮಾತನಾಡಿದ್ದಾರೆ.


ಇದನ್ನೂ ಓದಿ: 'ಕುಟುಂಬಗಳನ್ನು ಅನುಮತಿಸದಿದ್ದರೆ ಭಾರತ ಆಸ್ಟ್ರೇಲಿಯಾ ಪ್ರವಾಸ ಮಾಡುವುದಿಲ್ಲ' ಎಂದಿದ್ದ ಈ ವ್ಯಕ್ತಿ..!


'ಆಸ್ಟ್ರೇಲಿಯಾಕ್ಕೆ ಹೋಗಬಹುದಾದ ಯಾವುದೇ ತಂಡ, 36 ಕ್ಕೆ ಔಟ್ ಆದ ನಂತರ 1-0 ಅಂತರದಿಂದ ಹಿನ್ನಡೆ ಅನುಭವಿಸಿದ್ದಲ್ಲದೆ, ಕೊಹ್ಲಿ ಪಿತೃತ್ವ ರಜೆ ಹೋಗಿದ್ದು, ಪ್ರಮುಖ ಬೌಲಿಂಗ್ ದಾಳಿಯನ್ನು ಕಳೆದುಕೊಂಡಿದ್ದು ಮತ್ತು ಇದೆಲ್ಲದರ ನಂತರವೂ ಆಸ್ಟ್ರೇಲಿಯಾದಲ್ಲ್ಲಿಗೆದ್ದಿದ್ದು ಅದ್ಬುತ, ಭಾರತ ಕಠಿಣ ಭಾಗವನ್ನು ಹೊಂದಿದೆ. ಅದನ್ನು ಕೊಹ್ಲಿ ಹುಟ್ಟುಹಾಕಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ನಾಸಿರ್ ಹುಸೇನ್ ಶ್ಲಾಘಿಸಿದರು


ಶ್ರೀಲಂಕಾದ 2-0 ಸರಣಿಯ ಸ್ವೀಪ್ ನಂತರ ಇಂಗ್ಲೆಂಡ್ ಸಾಕಷ್ಟು ವಿಶ್ವಾಸದಿಂದ ಭಾರತಕ್ಕೆ ತೆರಳಲಿದೆ ಈ ಸಂದರ್ಭದಲ್ಲಿ ಅತ್ಯುತ್ತಮ ತಂಡವನ್ನು ಕಣಕ್ಕೆ ಇಳಿಸಬೇಕೆಂದು ಅವರು ಇಂಗ್ಲೆಂಡ್ ತಂಡಕ್ಕೆ ಸಲಹೆ ನೀಡಿದರು.ಮೊದಲ ಎರಡು ಭಾರತ ಟೆಸ್ಟ್ ಪಂದ್ಯಗಳಿಗೆ ಜಾನಿ ಬೈರ್‌ಸ್ಟೋವ್‌ಗೆ ವಿಶ್ರಾಂತಿ ನೀಡುವ ಇಂಗ್ಲೆಂಡ್ ನಿರ್ಧಾರಕ್ಕೆ ಹುಸೇನ್ ಈ ಹಿಂದೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: ಮಧ್ಯರಾತ್ರಿಯಲ್ಲಿ ಫೀಲ್ಡಿಂಗ್ ಕೋಚ್ ಗೆ ವಿರಾಟ್ ಕೊಹ್ಲಿ ಕರೆ ಮಾಡಿ ಹೇಳಿದ್ದೇನು?


'ನಾನು ಭಾರತದಲ್ಲಿ ಬೆಳೆದಿದ್ದೇನೆ ಮತ್ತು ನಾನು ಯಾವಾಗಲೂ ಭಾರತ VS ಇಂಗ್ಲೆಂಡ್ ಅನ್ನು ಒಂದು ದೊಡ್ಡ ಸರಣಿಯಂತೆ ನೋಡಿದ್ದೇನೆ.ನಿಮ್ಮ 13-15 ಅತ್ಯುತ್ತಮ ಆಟಗಾರರನ್ನು ಚೆನ್ನೈಗೆ ಕಳುಹಿಸಬೇಕು. ಇಂಗ್ಲೆಂಡ್ ಅಭಿಮಾನಿಗಳು ತಮ್ಮ ಅತ್ಯುತ್ತಮ ತಂಡಕ್ಕೆ ಆ ಮೊದಲ ದಿನ ಇರಬೇಕೆಂದು ಆಶಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದರ ಅರ್ಥವೇನೆಂದರೆ (ಸ್ಟುವರ್ಟ್) ಬ್ರಾಡ್ ಮತ್ತು (ಜೇಮ್ಸ್) ಆಂಡರ್ಸನ್ ಒಟ್ಟಿಗೆ ಆಡುವ ಕಾರಣ ಅದು ಸ್ವಲ್ಪ ಆಶಾದಾಯಕವಾಗಿದೆ ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.