ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಭಾನುವಾರ ರಾಂಚಿಯಲ್ಲಿ ನಡೆದ ತಮಾಷೆಯ ಘಟನೆಯ ಕೇಂದ್ರಬಿಂದುವಾಗಿದ್ದಾರೆ. ಹೌದು ಭಾರತ ಮತ್ತು ದಕ್ಷಿಣ ಆಫ್ರಿಕಾದ ಸ್ಟ್ಯಾಂಡ್-ಇನ್ ನಾಯಕರಾದ ಶಿಖರ್ ಧವನ್ ಮತ್ತು ಕೇಶವ್ ಮಹಾರಾಜ್ ಅವರ ಪಕ್ಕದಲ್ಲಿ ನಿಂತ ಶ್ರೀನಾಥ್ ಟಾಸ್ ಸಮಯದಲ್ಲಿ ಕಾಯಿನ್ ನ್ನು ನೀಡಲು ಮರೆತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಿಶಬ್ ಪಂತ್ ಬೆನ್ನತ್ತಿ ಆಸ್ಟ್ರೇಲಿಯಾಗೆ ಹೊರಟ ನಟಿ ಊರ್ವಶಿ ರೌಟೆಲಾ...!


ಟಾಸ್ ಸಮಯದಲ್ಲಿ ಆತಿಥೇಯರ ನಾಯಕನಿಗೆ (ಈ ಸಂದರ್ಭದಲ್ಲಿ ಧವನ್) ಟಾಸ್ ನೀಡುವುದು ಮ್ಯಾಚ್ ರೆಫರಿಯ ಕೆಲಸ. ಆದರೆ, ಜೇಬಿನಿಂದ ನಾಣ್ಯ ತೆಗೆಯುವುದನ್ನೂ ಮರೆತಿದ್ದ ಶ್ರೀನಾಥ ತನ್ನದೇ ಲೋಕದಲ್ಲಿ ಕಳೆದುಹೋದಂತಿತ್ತು.


ಶ್ರೀನಾಥ್ ಅವರಿಗೆ ತನ್ನ ತಪ್ಪಿನ ಅರಿವಾದ ಕೂಡಲೇ ಜೇಬಿನಿಂದ ಕಾಯಿನ್ ತೆಗೆದು ಧವನ್ ಕೈಗೆ ಕೊಟ್ಟರು. ಆದರೆ, ಇಬ್ಬರು ನಾಯಕರು ಶ್ರೀನಾಥ್‌ ಅವರನ್ನು ಈ ಸಂದರ್ಭದಲ್ಲಿ ತಮಾಷೆ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.


77 ಎಸೆತ, 22 ಸಿಕ್ಸರ್, 205 ರನ್..ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು!


ಪ್ರವಾಸಿ ತಂಡವು ಮೊದಲ ODIನಲ್ಲಿ ಜಯಭೇರಿ ಬಾರಿಸಿದ ನಂತರ 3 ಪಂದ್ಯಗಳ ODI ಸರಣಿಯಲ್ಲಿ ಭಾರತ 1-0 ಹಿನ್ನಡೆಯಲ್ಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.