Jharkhand Football Tragedy: ಜಾರ್ಖಂಡ್‌’ನ ದುಮ್ಕಾ ಜಿಲ್ಲೆಯ ಹಂಸ್ದಿಹಾ ಮಿಷನ್ ಬಳಿಯ ಫುಟ್‌ಬಾಲ್ ಮೈದಾನದಲ್ಲಿ ಭೀಕರ ಅವಘಡವೊಂದು ಸಂಭವಿಸಿದ್ದು, ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಫಿಟ್ನೆಸ್ ಟೆಸ್ಟ್ ಫೇಲ್: ಸ್ಟಾರ್ ಸ್ಪಿನ್ನರ್ ಸೇರಿ 11 ಆಟಗಾರರು ವಿಶ್ವಕಪ್ ತಂಡದಿಂದ ಹೊರಕ್ಕೆ!


ವರದಿಗಳ ಪ್ರಕಾರ, ಶನಿವಾರ ಸಂಜೆ ಭಾರೀ ಮಳೆ, ಗುಡುಗು ಸಹಿತವಾದ ಬಿರುಗಾಳಿ ಬೀಸಿದ್ದು, ಆ ಸಂದರ್ಭದಲ್ಲಿ ಹಲವಾರು ಪ್ರೇಕ್ಷಕರು ಹಂಸ್ದಿಹಾ ಪ್ರದೇಶದ ಆಟದ ಮೈದಾನದ ಪಕ್ಕದ ಟೆಂಟ್ ಅಡಿಯಲ್ಲಿ ಆಶ್ರಯ ಪಡೆಯುತ್ತಿದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಪ್ರೇಕ್ಷಕರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಟೆಂಟ್‌’ನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹಂಸ್ದಿಹಾ ಪೊಲೀಸ್ ಠಾಣೆ ಪ್ರಭಾರಿ ಜಿತೇಂದ್ರ ಕುಮಾರ್ ಸಾಹು ತಿಳಿಸಿದ್ದಾರೆ. ಮೃತರನ್ನು ಶಿವಲಾಲ್ ಸೊರೆನ್ (32) ಮತ್ತು ಸಂತಲಾಲ್ ಹೆಂಬ್ರಾಮ್ (20) ಎಂದು ಗುರುತಿಸಲಾಗಿದೆ. ಇನ್ನು ಮೂವರು ಗಾಯಗೊಂಡಿದ್ದು, ಅವರನ್ನು ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.


ಇದನ್ನೂ ಓದಿ: Asian Games 2023 ಕ್ರಿಕೆಟ್ ಫೈನಲ್: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹಣಾಹಣಿ!


ನಡೆದಿದ್ದೇನು?


ಹಂಸ್ದಿಹಾ ಸಮೀಪದ ಫುಟ್ಬಾಲ್ ಮೈದಾನದಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಪಂದ್ಯದ ವೇಳೆ ಹಠಾತ್ತನೆ ಮಳೆ ಸುರಿಯಲಾರಂಭಿಸಿದ್ದು, ಇದರಿಂದಾಗಿ ಮಳೆಯಿಂದ ಪಾರಾಗಲು ಪ್ರೇಕ್ಷಕರು ಮೈದಾನದ ಬಳಿಯ ಟೆಂಟ್‌’ಗಳಲ್ಲಿ ತರಾತುರಿಯಲ್ಲಿ ಆಶ್ರಯ ಪಡೆಯಲು ಮುಂದಾದರು. ಇದೇ ವೇಳೆ ಸಿಡಿಲು ಟೆಂಟ್ ಮೇಲೆ ಬಿದ್ದಿದ್ದು, ಟೆಂಟ್ ಒಳಗೆ ಕುಳಿತಿದ್ದ ಐವರು ಯುವಕರಿಗೆ ತಗುಲಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ