RCB Won: ರಾಯಲ್ ಚಾಲೆಂಜರ್ಸ್ ಬೆಂಗಳೂರು IPL 2024 ರ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕನೇ ತಂಡವಾಗಿದೆ. ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇಆಫ್ ಗೆ ಲಗ್ಗೆ ಇಟ್ಟಿತು. ಆರ್‌ಸಿಬಿ ಸತತ 6 ಪಂದ್ಯಗಳನ್ನು ಗೆದ್ದು ಟಾಪ್-4ಕ್ಕೆ ತಲುಪಿದೆ. ಆದರೆ ಮೊದಲ 7 ಪಂದ್ಯಗಳ ನಂತರ RCB ಪ್ಲೇಆಫ್ ತಲುಪಲು ಕೇವಲ 1 ಪ್ರತಿಶತದಷ್ಟು ಭರವಸೆಯನ್ನು ಹೊಂದಿತ್ತು. ತಂಡದ ಈ ಐವರು ಆಟಗಾರರು ಈ ಒಂದು ಶೇಕಡಾ ನಿರೀಕ್ಷೆಯನ್ನು ಶೇಕಡಾ 100 ಕ್ಕೆ ಪರಿವರ್ತಿಸಿದರು. 


COMMERCIAL BREAK
SCROLL TO CONTINUE READING

ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದಲೇ ಬೆಂಗಳೂರು ತಂಡದ ಸ್ಟಾರ್ ಆಗಿದ್ದರು. ತಂಡದ ಪರ ಪ್ರತಿಯೊಂದು ಪಂದ್ಯದಲ್ಲೂ ಅವರು ಅದ್ಭುತವಾಗಿ ಬ್ಯಾಟ್ ಬೀಸಿ, ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ, ಆರೆಂಜ್‌ ಕ್ಯಾಪ್‌ ಪಡೆದುಕೊಂಡಿದ್ದಾರೆ..  ಇಲ್ಲಿಯವರೆಗೆ, ಕೊಹ್ಲಿ 14 ಪಂದ್ಯಗಳ 14 ಇನ್ನಿಂಗ್ಸ್‌ಗಳಲ್ಲಿ 64.36 ಸರಾಸರಿ ಮತ್ತು 155.60 ಸ್ಟ್ರೈಕ್ ರೇಟ್‌ನಲ್ಲಿ 708 ರನ್ ಗಳಿಸಿದ್ದಾರೆ. 


ವಿಲ್ ಜಾಕ್ವೆಸ್: RCB ಮೊದಲ ಕೆಲವು ಪಂದ್ಯಗಳಲ್ಲಿ ವಿಲ್ ಜಾಕ್ವೆಸ್‌ಗೆ ಅವಕಾಶ ನೀಡಲಿಲ್ಲ, ಆದರೆ ಅವರು ತಂಡಕ್ಕೆ ಬಂದಾಗ, ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದರು. ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಆರನೇ ಲೀಗ್ ಪಂದ್ಯದಲ್ಲಿ ವಿಲ್ ಜಾಕ್ವೆಸ್‌ಗೆ ಬೆಂಗಳೂರು ಅವಕಾಶ ನೀಡಿತು.. ನಂತರ ಅವರು ಮುಂದಿನ 8 ಪಂದ್ಯಗಳಲ್ಲಿ ನಿರಂತರವಾಗಿ ತಂಡದ ಭಾಗವಾಗಿದ್ದರು. ಅದರಲ್ಲಿ ಅವರು 32.86 ಸರಾಸರಿಯಲ್ಲಿ 230 ರನ್ ಗಳಿಸಿದರು ಮತ್ತು 175.57 ಸ್ಟ್ರೈಕ್ ರೇಟ್, ಇದರಲ್ಲಿ 1 ಶತಕ ಮತ್ತು 1 ಅರ್ಧ ಶತಕ ಸೇರಿದೆ. 


ದಿನೇಶ್ ಕಾರ್ತಿಕ್: ಮೊದಲಾರ್ಧದಲ್ಲಿ ದಿನೇಶ್ ಕಾರ್ತಿಕ್ ತಂಡದ ಪರ ಉತ್ತಮ ಇನಿಂಗ್ಸ್ ಆಡಿದರೂ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಅಂದರೆ 7 ಪಂದ್ಯಗಳ ನಂತರ, ಕಾರ್ತಿಕ್ ಅನೇಕ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಲಿಲ್ಲ, ಆದರೆ ಅವರು ಸಣ್ಣ ಇನ್ನಿಂಗ್ಸ್‌ಳಲ್ಲಿಯೇ ಪ್ರಮುಖ ಕೊಡುಗೆ ನೀಡಿದರು. ಉದಾಹರಣೆಗೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕಾರ್ತಿಕ್ 6 ಎಸೆತಗಳಲ್ಲಿ 14 ರನ್ ಗಳಿಸಿದ್ದರು.


ಸ್ವಪ್ನಿಲ್ ಸಿಂಗ್: ಸ್ಪಿನ್ನರ್ ಸ್ವಪ್ನಿಲ್ ಸಿಂಗ್ RCB ಗೆ ಅದೃಷ್ಟದ ಮೋಡಿ ಮಾಡಿದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ತನ್ನ 9 ನೇ ಲೀಗ್ ಪಂದ್ಯಕ್ಕಾಗಿ ಬೆಂಗಳೂರು ತಂಡದಲ್ಲಿ ಸ್ವಪ್ನಿಲ್ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗಿತ್ತು.. ಈ ಪಂದ್ಯದಿಂದಲೇ ಬೆಂಗಳೂರಿನ ಗೆಲುವಿನ ಕಥೆ ಶುರುವಾಗಿದ್ದು, ಈ ಪಂದ್ಯದಿಂದ ಕೊನೆಯ ಲೀಗ್ ಪಂದ್ಯದವರೆಗೆ ಬೆಂಗಳೂರು ಸತತ 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಈ ವೇಳೆ ಸ್ವಪ್ನಿಲ್ ಬೌಲಿಂಗ್‌ನಲ್ಲಿ 6 ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿದರು. 


ಯಶ್ ದಯಾಳ್: ವೇಗದ ಬೌಲರ್ ಯಶ್ ದಯಾಳ್ ಅವರನ್ನು ಬೆಂಗಳೂರು ಈ ಸೀಸನ್‌ಗೆ 5 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಕಳೆದ ಋತುವಿನಲ್ಲಿ ಕಳಪೆ ಫಾರ್ಮ್‌ನೊಂದಿಗೆ ಹೋರಾಡಿದ್ದ ಯಶ್, ಬೆಂಗಳೂರು ತಂಡದ ಪರವಾಗಿ ಭರ್ಜರಿ ಪ್ರದರ್ಶನ ನೀಡಿದರು... ಚೆನ್ನೈ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಯಶ್ ದಯಾಳ್ ಕೊನೆಯ ಓವರ್‌ನಲ್ಲಿ ಕೇವಲ 7 ರನ್ ನೀಡುವ ಮೂಲಕ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಕೊಡುಗೆ ನೀಡಿದರು. ಯಶ್ ಈ ಸೀಸನ್‌ನಲ್ಲಿ 13 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.