Afghanistan Cricketer Rahmanullah Gurbaz : ಅಫ್ಘಾನಿಸ್ತಾನದ ಆಟಗಾರರು ಈ ಬಾರಿ ತಮ್ಮ ಪ್ರದರ್ಶನ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇದೀಗ ಈ ಆಟಗಾರನ ನಡವಳಿಕೆ ಮತ್ತೊಮ್ಮೆ ಜನ ರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಅಫ್ಘಾನಿಸ್ತಾನದ ಆಟಗಾರ ಗುರ್ಬಾಜ್  ಮುಂಜಾನೆ 3:00 ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಜನರ ಬಳಿಗೆ ಹೋಗಿ 500-500 ರೂ. ನೋಟುಗಳನ್ನು ಹಂಚಿದ್ದಾರೆ. ತಾನು ಈ ರೀತಿ ಮಾಡುತ್ತಿರುವುದನ್ನು ಗುರ್ಬಾಜ್  ಯಾರಿಗೂ ಹೇಳಿಕೊಂಡಿಲ್ಲ. ಆದರೆ ವ್ಯಕ್ತಿಯೊಬ್ಬರು ಗುರ್ಬಾಜ್ ಈ ಕೆಲಸವನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ತನ್ನ ಕೊನೆಯ ಪಂದ್ಯವನ್ನು ಆಡಿದ ನಂತರ ಮಧ್ಯರಾತ್ರಿ ಜನರ ಬಳಿಗೆ ತೆರಳಿ 500 ರೂಪಾಯಿ ನೋಟುಗಳನ್ನು ಇವರು ಹಂಚಿದ್ದಾರೆ. ಹೀಗೆ ರಸ್ತೆ ಬದಿಯಲ್ಲಿ ಮಲಗಿದ್ದವರು ತಮ್ಮ ದೀಪಾವಳಿಯನ್ನು ಚೆನ್ನಾಗಿ ಆಚರಿಸಲಿ  ಎನ್ನುಅ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ವಿಶ್ವಕಪ್‌ ಸೋತರೂ  ಜನ ಮನ ಗೆದ್ದ ತಂಡ :
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ವಿಶ್ವಕಪ್‌ ಸೋತರೂ ಲಕ್ಷಾಂತರ ಜನರ ಹೃದಯ ಗೆದ್ದಿದೆ. ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು. ಬ್ಯಾಟಿಂಗ್‌ನಿಂದ ಬೌಲಿಂಗ್‌ವರೆಗೆ, ಪ್ರತಿಯೊಂದು ವಿಭಾಗದಲ್ಲಿ  ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ, ಶ್ರೀಲಂಕಾ, ನೆದರ್‌ಲ್ಯಾಂಡ್ಸ್ ಮತ್ತು ಇಂಗ್ಲೆಂಡ್‌ಗಳನ್ನು ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. 


ಇದನ್ನೂ ಓದಿ : ಈ ಬ್ಯಾಟಿಂಗ್ ಮಾಂತ್ರಿಕನಿಗೆ RCB ಗಾಳ ! ಈತನಿಗಾಗಿ ಕೋಟಿ ಕೋಟಿ ಹರಿಸಲು ಮುಂದಾದ ತಂಡ


ವೈರಲ್ ಆಯಿತು ದೃಶ್ಯ : 
ಅಫ್ಘಾನಿಸ್ತಾನದ ಪ್ರತಿಯೊಬ್ಬ ಆಟಗಾರನಿಗೆ ಭಾರತೀಯ ಸಂಸ್ಕೃತಿಯ  ಅರಿವಿದೆ. ಅದಕ್ಕಾಗಿಯೇ ದೀಪಾವಳಿಯ ಸಂದರ್ಭದಲ್ಲಿ ಈ ಆಟಗಾರ ಬಡ ಜನರಿಗೆ ಸಹಾಯ ಮಾಡಲು ಮುಂದಾಗಿರುವುದು. ರಹಮಾನುಲ್ಲಾ ಗುರ್ಬಾಜ್ ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿ  25 ರನ್ ಗಳಿಸಿದರು. ಆದರೆ ಪಂದ್ಯದ ನಂತರ, ಅವರು ಮಧ್ಯರಾತ್ರಿ ಅಹಮದಾಬಾದ್‌ನ ಬೀದಿಗಳಲ್ಲಿ ಅವರು ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಾರಿನಿಂದ ಇಳಿದು ಬಂದ ಗುರ್ಬಾಜ್ ರಸ್ತೆ ಬದಿ ಮಲಗಿದ್ದ ಬಡವರಿಗೆ 500-500 ರೂಪಾಯಿ ನೋಟುಗಳನ್ನು ಹಂಚಿದರು. ಇದನ್ನು ಆರ್‌ಜೆಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


 


ಅಫ್ಘಾನಿಸ್ತಾನದ ವಿರುದ್ದ ಸೆಣೆಸಾಡಿದಾಗ ಭಾರತೀಯ ಅಭಿಮಾನಿಗಳು ಸದಾ ಹುರಿದುಂಬಿಸಿದ್ದು ಅಫ್ಘಾನಿಸ್ತಾನವನ್ನು.   ಇದಕ್ಕೆ ಹಲವು ಕಾರಣಗಳಿರಬಹುದು. ಇಲ್ಲಿನ ಜನರು ತೋರಿದ ಪ್ರೀತಿಯೇ ಗುರ್ಬಾಜ್‌ನ ಈ ವರ್ತನೆಗೆ ಕಾರಣವೂ ಆಗಿರಬಹುದು. ಅಂತೂ ಇಂತೂ ತಮ್ಮ ಆಟದ ಮೂಲಕ ಮತ್ತು ತಮ್ಮ ನಡವಳಿಕೆ ಮೂಲಕ ಆಫ್ಘಾನ್ ಆಟಗಾರರು ಭಾರತೀಯರ ಮನ ಗೆದ್ದದ್ದು ಮಾತ್ರ ಸುಳ್ಳಲ್ಲ. 


ಇದನ್ನೂ ಓದಿ : ಭಾರತ OR ನ್ಯೂಜಿಲೆಂಡ್.. ಸೆಮಿಫೈನಲ್‌ನಲ್ಲಿ ಗೆಲುವು ಇವರದ್ಧೇ! ಜ್ಯೋತಿಷಿಗಳ ಭವಿಷ್ಯ ನಿಜವಾಗುತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ