ಹರ್ಯಾಣದ ನೂಡ್‌ನಲ್ಲಿ ಆರು ಜನರನ್ನು ಬಲಿ ಪಡೆದಿರುವ ಮತೀಯ ಸಂಘರ್ಷವನ್ನು ತಡೆಯಲು ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಹಾಗೂ ದ್ವೇಷಭಾಷಣಗಳಿಗೆ ಕಡಿವಾಣ ಹಾಕುವಂತೆ ಸುಪ್ರೀಂಕೋರ್ಟ್ ಹರ್ಯಾಣ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ, ಘಟನೆಯ ಸಂಬಂಧ ಎಎಚ್‌ಪಿ ಹಾಗೂ ಬಜರಂಗದಳದಿಂದ ದೆಹಲಿಯಲ್ಲಿ ಆಯೋಜನೆಯಾಗಿರುವ ರ‍್ಯಾಲಿಗಳಿಗೆ ತಡೆ ನೀಡಲು ನ್ಯಾಯಪೀಠ ನಿರಾಕರಿಸಿದೆ.