ಸಾಮಾನ್ಯವಾಗಿ ಭಕ್ತರು ದೇವರಿಗೆ ಹೂ ಹಣ್ಣುಗಳನ್ನ ನೈವೇದ್ಯ ಮಾಡಿ ಭಕ್ತಿಯನ್ನ ಸಮರ್ಪಿಸ್ತಾರೆ. ಆದ್ರೆ ಇಲ್ಲೊಂದು ಕಡೆ  ಪೂಜಾರಿಗಳೇ ತಲೆಗೆ ತೆಂಗಿನ ಕಾಯಿಗಳನ್ನ ಒಡೆದುಕೊಳ್ಳುವುದರ ಮೂಲಕ ಭಕ್ತಿಯನ್ನ ಸಮರ್ಪಿಸಲಾಗುತ್ತದೆ. ಹೌದು ಇಂತಹ ಅಪರೂಪದ ದೃಶ್ಯ ಕಂಡು ಬಂದದ್ದು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಲ್ಲಿನ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ.