ತುಮಕೂರು ಜಿಲ್ಲೆಯ ಮಧುಗಿರಿಗೆ ಏಕಶಿಲಾ ಬೆಟ್ಟದಲ್ಲಿ ಸಿಲುಕಿದ್ದ ತಂದೆ, ಮಗನನ್ನು ರಕ್ಷಣೆ ಮಾಡಲಾಗಿದೆ. ತಂದೆ, ಮಗ ಬೆಟ್ಟ ನೋಡೋದಕ್ಕಾಗಿ ಬೆಂಗಳೂರಿಂದ ಬಂದಿದ್ದರು. ಬೆಟ್ಟ ಹತ್ತು ವೇಳೆ ಜೋರು ಮಳೆ ಶುರುವಾಗಿದೆ. ಇದರಿಂದ ಆತಂಕಗೊಂಡ ಇಬ್ಬರು ಮೇಲೆ ಹತ್ತಲು‌ ಆಗದೆ ಕೆಳಗೆ ಇಳಿಯಲು‌ ಆಗದೆ ಸಂಕಟಕ್ಕೆ ಸಿಲುಕಿದ್ದರು. ತ್ರಿಶಂಕು ಸ್ಥಿತಿಯಲ್ಲಿದ್ದ ತಂದೆ ಮಧುಗಿರಿ ಪೊಲೀಸರಿಗೆ ಕರೆ ಮಾಡಿ ರಕ್ಷಣೆ‌ಗೆ ಮನವಿ‌ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.