ಬೆಂಗಳೂರು ಸಮಾವೇಶದ ಬಳಿಕ ತಮಿಳುನಾಡಿನ ಕೊಯಮತ್ತೂರಿಗೆ ತೆರಳಿ ರೋಡ್‌ ಶೋ ನಡೆಸಿದರು. ಸಾಯಿಬಾಬಾ ಕಾಲೋನಿಯಿಂದ ಆರ್‌ ಎಸ್‌ ಪುರಂವರೆಗೆ ಎರಡೂವರೆ ಕಿಲೋ ಮೀಟರ್‌ವರೆಗೆ ತೆರೆದ ವಾಹನದಲ್ಲಿ ಸಾಗಿದ್ರು.. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಕೇಂದ್ರ ಸಚಿವ ಸಚಿವ ಎಲ್‌.ಮುರುಗನ್‌, ಕೊಯಮುತ್ತೂರು ಶಾಸಕಿ, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಸಂತಿ ಶ್ರೀನಿವಾಸನ್‌ ಪ್ರಧಾನಿ ಮೋದಿ ಜೊತೆಗಿದ್ದರು.. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಲಕ್ಷಾಂತರ ಮಂದಿ ಹೂವಿನ ಮಳೆಗರೆದು, ಮೋದಿಯನ್ನು ಕಣ್ತುಂಬಿಕೊಂಡರು..