ಇತ್ತೀಚಿಗೆ ಪುಣೆಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಮರ್ಸಿಡಿಸ್-ಬೆನ್ಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಟಿನ್ ಶ್ವೆಂಕ್ ತಮ್ಮ ವಿಭಿನ್ನ ಅನುಭವವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ. ಐಷಾರಾಮಿ ಕಾರು ಬ್ರಾಂಡ್‌ನ ಉನ್ನತ ಕಾರ್ಯನಿರ್ವಾಹಕ ತಮ್ಮ ಸೊಂಪಾದ ಎಸ್-ಕ್ಲಾಸ್ ಕಾರಿನಿಂದ ಹೊರಬಂದು ರಿಕ್ಷಾದ ಮೂಲಕ ಕೆಲವು ಕಿಲೋಮೀಟರ್‌ಗಳವರೆಗೆ ತೆರಳಿದ್ದು, ಈ ಘಟನೆ ನೆಟಿಜನ್‌ಗಳ ಗಮನವನ್ನು ಸೆಳೆದಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Garlic Benefits: ಅಡುಗೆ ಮನೆಯಲ್ಲಿ ಸಿಗುವ ಈ ಬಿಳಿ ಬಣ್ಣದ ವಸ್ತು ಕ್ಷಣಮಾತ್ರದಲ್ಲಿ ಕೂದಲನ್ನು ಕಪ್ಪು ಮಾಡುತ್ತೆ!


ಅವರು ಈ ಅನುಭವದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಡೀ ಘಟನೆಯನ್ನು Instagram ಪೋಸ್ಟ್ ನಲ್ಲಿ ವಿವರಿಸಿದ್ದಾರೆ. “ನಿಮ್ಮ ಅದ್ಭುತವಾದ ಎಸ್-ಕ್ಲಾಸ್ ಕಾರು ಪುಣೆ ರಸ್ತೆಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೆ - ನೀವು ಏನು ಮಾಡುತ್ತೀರಿ? ಬಹುಶಃ ಕಾರಿನಿಂದ ಇಳಿದು, ಕೆಲವು ಕಿಮೀಗಳವರೆಗೆ ನಡೆಯಲು ಪ್ರಾರಂಭಿಸಿ ನಂತರ ರಿಕ್ಷಾವನ್ನು ಹಿಡಿಯಬಹುದೇ?" ಎಂದು ಶೀರ್ಷಿಕೆ ನೀಡಿ ಶ್ವೆಂಕ್ ಚಿತ್ರವೊಂದನ್ನು ಹಂಚಿಕೊಂಡು ಬರೆದಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವು ಬಳಕೆದಾರರು ಆಟೋರಿಕ್ಷಾದ ಜರ್ನಿಯದ ಬಗ್ಗೆ ಕೇಳಿದ್ದಾರೆ.


ಅವರ ಕೆಲವು ಫಾಲೋವರ್ಸ್ ಗಳು ಅವರ ಈ ಅನುಭವವನ್ನು ಮೆಚ್ಚಿ, ಅವರನ್ನು ‘ಡೌನ್ ಟು ಅರ್ಥ್’ ವ್ಯಕ್ತಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ‘ಅವರು ಎಸ್-ಕ್ಲಾಸ್‌ನಲ್ಲಿ ಕುಳಿತು ಟ್ರಾಫಿಕ್‌ನಲ್ಲಿಯೂ ಅದರ ಶ್ರೀಮಂತ ಸೌಕರ್ಯವನ್ನು ಆನಂದಿಸುತ್ತಾರೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು “ಸರಿ, ನೀವು ಅದೃಷ್ಟವಂತರು. ನಿಮ್ಮನ್ನು ನಿಮ್ಮ ಗಮ್ಯಸ್ಥಾನಕ್ಕೆ ಕರೆದೊಯ್ಯಲು ಒಪ್ಪುವ ಆಟೋರಿಕ್ಷಾ ಚಾಲಕನನ್ನು ಹುಡುಕುವ ಅದೃಷ್ಟ ಎಲ್ಲರಿಗೂ ಇರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. 


ಇದನ್ನೂ ಓದಿ: 5G Service Benefits : 5G ಸೇವೆಯಿಂದ ಬಳಕೆದಾರರಿಗೆ ಈ 5 ಭರ್ಜರಿ ಪ್ರಯೋಜನಗಳು!


ಶ್ವೆಂಕ್ ಅವರು 2006 ರಿಂದ ಮರ್ಸಿಡಸ್ ಬ್ರ್ಯಾಂಡ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು 2018 ರಲ್ಲಿ Mercedes-Benz ಇಂಡಿಯಾದ CEO ಆದರು. ಅದಕ್ಕೂ ಮೊದಲು, ಅವರು Mercedes-Benz ಚೀನಾದ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.