Viral Video: ಹಿಂದೂ ಸಂಪ್ರದಾಯದಲ್ಲಿ ಮದುವೆ ಎನ್ನುವುದು ಬಹಳ ದೀರ್ಘವಾದ ಆಚರಣೆ. ಬ್ರಾಹ್ಮಣರ ಅಥವಾ ಪುರೋಹಿತರ ಮಂತ್ರ ಪಠಣದೊಂದಿಗೆ ಮದುವೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಪುರೋಹಿತರು ವಧು-ವರರೊಂದಿಗೆ ವಿವಿಧ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.. ಮದುವೆಯಲ್ಲಿ ಮದುಮಗ ಮತ್ತು ವಧು ಪ್ರತಿಜ್ಞೆ ಮಾಡುವುದು ವಾಡಿಕೆ. ಆದರೆ, ಹರಿದ್ವಾರದಲ್ಲಿ ನಡೆದ ಮದುವೆಯಲ್ಲಿ ಬ್ರಾಹ್ಮಣ ವರನೊಬ್ಬ ಅದಕ್ಕಿಂತ ಹೆಚ್ಚಿನದನ್ನೇ ಮಾಡಿದ್ದಾನೆ. ಅವನು ತನ್ನ ಮದುವೆಗಾಗಿ ಮಂತ್ರಗಳನ್ನು ಸ್ವತಃ ಹೇಳಿಕೊಂಡಿದ್ದಾನೆ.. 


COMMERCIAL BREAK
SCROLL TO CONTINUE READING

ಮದುವೆಯೆಂದರೆ ಮಂಟಪ, ಹಿರಿಯರು, ಪುರೋಹಿತರು ಕಡ್ಡಾಯವಾಗಿ ಇರುತ್ತಾರೆ. ಆದರೆ, ಸಹರಾನ್‌ಪುರದ ವಿವೇಕ್‌ ಕುಮಾರ್‌ ಎಂಬ ವ್ಯಕ್ತಿಯ ವಿವಾಹ ಸಮಾರಂಭದಲ್ಲಿ ಪಂಡಿತರಿರಲಿಲ್ಲ. ಮದುಮಗ ತಾನೇ ಪುರೋಹಿತನಂತೆ ಮಂತ್ರ ಹೇಳಿ ತಾಳಿಕಟ್ಟಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮದುವೆಯಲ್ಲಿ ಪುರೋಹಿತರು ವಧುವಿನಿಂದ ಕೆಲವು ಮಂತ್ರಗಳು ಮತ್ತು ಭರವಸೆಗಳನ್ನು ನೀಡಿಸಬೇಕು.. ಆದರೆ, ಈ ಮದುವೆಯಲ್ಲಿ ಮದುಮಗ ತನ್ನಷ್ಟಕ್ಕೆ ತಾನೇ ಎಲ್ಲವನ್ನೂ ಹೇಳಿಕೊಂಡಿದ್ದು... ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಮದುಮಗಳು ಸಹ ಅವನು ಹೇಳಿದಂತೆಯೇ ಕೇಳಿದ್ದಾಳೆ.. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌ ಈ ಬಗ್ಗೆ ಮಾತನಾಡಿದ ವಧು "ಕೆಲ ಸಮಯದಿಂದ ವೇದ ಮಂತ್ರಗಳನ್ನು ಕಲಿಯುತ್ತಿದ್ದೇನೆ.. ಅದಕ್ಕಾಗಿಯೇ ವೈದಿಕ ಮಂತ್ರಗಳನ್ನು ಪಠಿಸುವ ಮೂಲಕ ನನ್ನ ವಿವಾಹದ ವಿಧಿವಿಧಾನಗಳನ್ನು ನಾನೇ ನೆರವೇರಿಸಿದ್ದೇನೆ.. ಎಂದಿದ್ದಾರೆ..


ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!


ಇನ್ನು ವಿವೇಕ್ ತನ್ನ ಬಿಫಾರ್ಮಸಿಯನ್ನು ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದು, ಅವರಿಗೆ ಅಧ್ಯಾತ್ಮ, ಸಂಪ್ರದಾಯ, ಆಚಾರ ವಿಚಾರಗಳಲ್ಲಿ ಅಪಾರ ನಂಬಿಕೆ ಇದೆಯಂತೆ.. ಅದಕ್ಕಾಗಿಯೇ ಅವರು ಮಂತ್ರಗಳನ್ನು ಕಲಿತಿದ್ದಾರೆ.. ಎಂದು ಬಹಿರಂಗಪಡಿಸಿದ್ದಾರೆ.. ಅಲ್ಲದೇ ತನ್ನ 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ವಿವೇಕ್ ಆಚಾರ್ಯ ವೀರೇಂದ್ರ ಶಾಸ್ತ್ರಿ ಎಂಬ ಶಿಕ್ಷಕರ ಬಳಿ ವೇದಗಳನ್ನು ಅಧ್ಯಯನ ಮಾಡಿದರು. ಆರ್ಯ ಸಮಾಜದ ಆಚರಣೆಗಳೊಂದಿಗಿನ ಅವರ ಬಲವಾದ ಸಂಪರ್ಕವು ಅವರ ಮದುವೆಯಲ್ಲಿ ಮಂತ್ರಗಳನ್ನು ಸ್ವತಃ ಪಠಿಸಲು ಪ್ರೋತ್ಸಾಹಿಸಿತು ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ-ಅಕ್ಕಿನೇನಿ ಕುಟುಂಬಕ್ಕೆ ಮತ್ತೊಮ್ಮೆ ಬಿಗ್‌ಶಾಕ್..‌ ಮದುವೆಯಾದ ಒಂದೇ ತಿಂಗಳಲ್ಲಿ ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡ ಶೋಭಿತಾ-ನಾಗಚೈತನ್ಯ!


ಜೊತೆಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಮಹತ್ವವನ್ನು ತಿಳಿಸುವುದು ಅವರ ಉದ್ದೇಶವಾಗಿದ್ದು, ಎಷ್ಟೇ ಆಧುನಿಕ ಶಿಕ್ಷಣ ಬಂದರೂ... ನಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು ಎಂದು ಹೇಳಿದ್ದಾರೆ... ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವೇಕ್ ಅವರ ಸಂದೇಶ ಅನೇಕರಿಗೆ ತಲುಪಿದೆ.. ಈ ಆಧುನಿಕ ಯುಗದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ರಕ್ಷಿಸುವುದು ಬಹಳ ಮುಖ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.


ಈ ಅನಿರೀಕ್ಷಿತ ಘಟನೆಯಿಂದ ಎಲ್ಲಿಯೂ ಯಾವುದೇ ಅಡೆತಡೆಗಳು ಎದುರಾಗಲಿಲ್ಲ. ಸರಿಯಾದ ಮದುವೆಯಲ್ಲಿ ಮಾಡಬೇಕಾದ ಎಲ್ಲಾ ವಿಧಿವಿಧಾನಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಮಾಡಿ, ಹಿರಿಯರು, ಸ್ನೇಹಿತರು, ಬಂಧುಗಳು ಮತ್ತು ಆತ್ಮೀಯ ಸ್ನೇಹಿತರ ಆಶೀರ್ವಾದ ಮತ್ತು ಹಾರೈಕೆಗಳೊಂದಿಗೆ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.