Owaisi On PM Modi And Nirmala Sitharaman: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಹೇಳಿಕೆ ನೀಡಿರುವ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರಿಯಾಗಿಸಿದ್ದಾರೆ. ಒಬಾಮಾ ಅವರ ಆಡಳಿತದಲ್ಲಿ 7 ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ ಎಂದ ವಿತ್ತ ಸಚಿವರು, ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ವಿಷಾಧನೀಯ ಎಂದಿದ್ದರು. ಆದರೆ ಇದೀಗ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರ ಕುರಿತೂ ಕೂಡ ಲೇವಡಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಒವೈಸಿ,  ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಚಹಾ ಬರಾಕ್ ಒಬಾಮಾ ಮೇಲೆ ಪ್ರಭಾವ ಬೀರಲಿಲ್ಲ ಎಂಬಂತೆ ತೋರುತ್ತಿದೆ ಎಂದಿದ್ದಾರೆ. 


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಅಮರಾವತಿಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ನಮ್ಮ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೇಳಿಕೆಯಿಂದ ತೊಂದರೆಗೀಡಾಗಿದ್ದಾರೆ. ಒಬಾಮಾ ಆಳ್ವಿಕೆಯಲ್ಲಿ ಅನೇಕ ಮುಸ್ಲಿಂ ರಾಷ್ಟ್ರಗಳು ಬಾಂಬ್ ದಾಳಿಗೆ ಒಳಗಾಗಿದ್ದವು ಎಂದು ಅವರು ಹೇಳುತ್ತಾರೆ. 13 ದೇಶಗಳು ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ರಾಜ್ಯ ಗೌರವವನ್ನು ನೀಡಿದರೆ, ಅವುಗಳಲ್ಲಿ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾಗಿವೆ.


ಇದನ್ನೂ ಓದಿ-Opposition Unity: 'ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಒಂದು ಮದುವೆ ಸಮಾರಂಭವಾಗಿತ್ತು, ಸೌಜನ್ಯಕ್ಕಾಗಿ ಕಾಂಗ್ರೆಸ್ ಭಾಗವಹಿಸಿದೆ'


ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಂತಹ ದೇಶಗಳು ಪ್ರಧಾನಿ ಮೋದಿ ಅವರನ್ನು ಗೌರವಿಸಿವೆ ಎಂದು ಹಣಕಾಸು ಸಚಿವರು ಹೇಳುತ್ತಾರೆ ಎಂದು ಓವೈಸಿ ಹೇಳಿದ್ದಾರೆ. ಆದರೆ ಭಾರತದ ಮುಸ್ಲಿಮರಿಗೆ ಹಾಗೂ  ಅಮರಾವತಿಗೆ ಸೌದಿ ಅರೇಬಿಯಾದ ಅಧ್ಯಕ್ಷರಿಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಅವರಿಗೆ ಹೇಳುತ್ತೇನೆ. ಅಷ್ಟೇ ಅಲ್ಲ ಯುಎಇ ಅಧ್ಯಕ್ಷರಿಗೂ ಅವರಿಗೂ ಯಾವುದೇ ಸಂಬಂಧವಿಲ್ಲ. ಈಜಿಪ್ಟ್ ಅಧ್ಯಕ್ಷ ಸಿಸಿ ಅವರೊಂದಿಗೂ ಕೂಡ ಯಾವುದೇ ಸಂಬಂಧವಿಲ್ಲ. ನೀವು ರಾಷ್ಟ್ರ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವಿರಿ. ಯುಎಇ, ಈಜಿಪ್ಟ್, ಇರಾಕ್ ಅಥವಾ ಇರಾನ್‌ನ ನಾಯಕರು ಮತ್ತು ಮುಸ್ಲಿಮರು ಭಾರತದ 200 ಮಿಲಿಯನ್ ಮುಸ್ಲಿಮರಿಗೆ ಯಾವುದೇ ಸಂಬಂಧವಿಲ್ಲ ಎಂದು ಒವೈಸಿ ಹೇಳಿದ್ದಾರೆ.


ಇದನ್ನೂ ಓದಿ-Underwater Rail Road Tunnel: ಇಲ್ಲಿ ನಿರ್ಮಾಣವಾಗುತ್ತಿದೆ ಭಾರತದ ಮೊಟ್ಟಮೊದಲ ಅಂಡರ್ ವಾಟರ್ ರೇಲ್ ರೋಡ್, ವಿಶೇಷತೆ ಏನು?


'ಬೇರೆ ದೇಶಗಳಲ್ಲಿ ರಾಜಪ್ರಭುತ್ವವಿದೆ, ಭಾರತದಲ್ಲಿ ಅಂಬೇಡ್ಕರ್ ಅವರ ಸಂವಿಧಾನವಿದೆ. ನೀವು ಭಾರತದ ಮುಸ್ಲಿಮರನ್ನು ಈ ದೇಶಗಳೊಂದಿಗೆ ಜೋಡಿಸುತ್ತಿರುವಿರಿ. ನಮ್ಮ ಪೂರ್ವಜರಿಗೆ ಗಲ್ಲಿಗೆರಿಸಲಾಗಿದೆ. ಆವರಿ ಕಾಲಾ ಪಾನಿ ಶಿಕ್ಷೆಯನ್ನು ಅನುಭವಿಸಿದರು, ಬ್ರಿಟಿಷರೊಂದಿಗೆ ಹೋರಾಡಿದರು.  ಓವೈಸಿ ನೀವು ಬೇರೆ ದೇಶಕ್ಕೆ ಹೋಗಬೇಕು ಎಂದು ಆರ್‌ಎಸ್‌ಎಸ್‌ನವರು ಹೇಳಿದಾಗ, 1947 ರಲ್ಲಿ ಭಾರತದ ಮುಸ್ಲಿಂ ಸಮುದಾಯವು ಇದು ನಮ್ಮ ಭೂಮಿ ಎಂದು ನಿರ್ಧರಿಸಿತ್ತು ಎಂದು ಅವರಿಗೆ ಯಾರು ವಿವರಿಸಲಿದ್ದಾರೆ. ನಾವು ಇಲ್ಲೇ ಇರುತ್ತೇವೆ. ಭಾರತದ ಸ್ಮಶಾನಗಳಲ್ಲಿ ನಿಮಗೆ ನಮ್ಮ ನಿಷ್ಠ ಕಾಣಲಿದೆ ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.