ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದೇಶವು ಈಗ ಏಕಾಏಕಿ ದಾಳಿ ನಡೆಸಿರುವುದು ಈಗ ಉಭಯ ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ.ಈ ಹಿನ್ನಲೆಯಲ್ಲಿ ಈಗ ಉಕ್ರೇನ್ ದೇಶವು ಅಂತರಾಷ್ಟ್ರೀಯ ಸಮುದಾಯದ ಹಸ್ತಕ್ಷೇಪವನ್ನು ಕೋರಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ಇಂದು ಉಕ್ರೇನ್ ದೇಶವು ರಷ್ಯಾ ದೇಶದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೊನೆಗೊಳಿಸಿದೆ.ಆ ಮೂಲಕ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಉಕ್ರೇನ್ ಮತ್ತು ರಷ್ಯಾ ದೇಶದ ನಡುವಿನ ಈ ಯುದ್ಧವು (Russia-Ukraine War) ಮೂರನೇ ಜಾಗತಿಕ ಯುದ್ಧಕ್ಕೆ ಕಾರಣವಾಗಲಿದೆಯಾ ಎನ್ನುವ ಅನುಮಾನ ಎದುರಾಗಿದೆ.


ಇದನ್ನೂ ಓದಿ: Russia-Ukraine conflict: ಉಕ್ರೇನ್ ಮೇಲೆ ರಷ್ಯಾ ದಾಳಿ, ತುರ್ತು ಸಭೆ ಕರೆದ ನ್ಯಾಟೋ


ಇಂದು ಭಾರತದಲ್ಲಿನ ಉಕ್ರೇನ್ ರಾಯಭಾರಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಭಾರತ ದೇಶವು ಈ ಹಿಂದಿನಿಂದಲೂ ತನ್ನ ಪಂಚಶೀಲ ತತ್ವದಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸಾಮರಸ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.ಆದ್ದರಿಂದ ಭಾರತ ಈಗ ನಮ್ಮ ಜೊತೆ ಬಲವಾಗಿ ನಿಲ್ಲಬೇಕಿದೆ, ಹಾಗಾಗಿ ಪ್ರಧಾನಿ ಮೋದಿ ಅವರು ಪುತಿನ್ ಅವರ ಜೊತೆ ಮಾತನಾಡಿದರೆ, ಅವರ ಮಾತು ಕೇಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.


ಇದನ್ನೂ ಓದಿ: Russia-Ukraine War:ಯುದ್ಧದ ಮಧ್ಯೆ ಭಾವನಾತ್ಮಕ ಚಿತ್ರ! ಉಕ್ರೇನಿಯನ್ ಮಹಿಳೆ ಅಳುತ್ತಿರುವ ಫೋಟೋ ವೈರಲ್


ಭಾರತ ಮತ್ತು ರಷ್ಯಾದ ನಡುವಿನ ಉತ್ತಮ ಸಂಬಂಧದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರು ವಾಡ್ಲಿಮಿರ್ ಪುತಿನ್ ಅವರ ಜೊತೆಗೆ ಉಕ್ರೇನ್ ಜೊತೆಗಿನ ಸಂಘರ್ಷವನ್ನು ದೂರವಾಣಿ ಕರೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.