ನವದೆಹಲಿ: ಅಂತರರಾಷ್ಟ್ರೀಯ ಒತ್ತಡ ಮತ್ತು ಕಠಿಣ ನಿರ್ಬಂಧಗಳ ಹೊರತಾಗಿಯೂ, ಈ ಒತ್ತಡದ ತಂತ್ರಗಳು ಭಾರತಕ್ಕೆ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಸುವ ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ರಷ್ಯಾ ಬುಧವಾರದಂದು ಭರವಸೆ ನೀಡಿದೆ.


COMMERCIAL BREAK
SCROLL TO CONTINUE READING

"ಭಾರತಕ್ಕೆ S-400 ಪೂರೈಕೆಗೆ ಸಂಬಂಧಿಸಿದಂತೆ ನಾವು ಯಾವುದೇ ಅಡೆತಡೆಗಳನ್ನು ನಿರೀಕ್ಷಿಸುವುದಿಲ್ಲ; ಈ ಒಪ್ಪಂದವನ್ನು ಅಡೆತಡೆಯಿಲ್ಲದೆ ಮುಂದುವರಿಸಲು ನಮಗೆ ಮಾರ್ಗಗಳಿವೆ.ಹಳೆಯ ಅಥವಾ ಹೊಸ ಯಾವುದೇ ರೀತಿಯ ನಿರ್ಬಂಧಗಳು ಮಧ್ಯಪ್ರವೇಶಿಸುವುದಿಲ್ಲ ಎಂದು ಭಾರತಕ್ಕೆ ರಷ್ಯಾದ ರಾಯಭಾರಿ-ನಿಯೋಜಿತ ಡೆನಿಸ್ ಅಲಿಪೋವ್ ಅವರು ಭಾರತದೊಂದಿಗಿನ ರಕ್ಷಣಾ ಒಪ್ಪಂದದಲ್ಲಿನ ನಿರ್ಬಂಧಗಳ ಪ್ರಭಾವದ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.


ಇದನ್ನೂ ಓದಿ: ರಷ್ಯಾದ ಕ್ಷಿಪಣಿ ದಾಳಿಗೆ ಹೊತ್ತಿ ಉರಿದ ಉಕ್ರೇನ್ ಸರ್ಕಾರದ ಮುಖ್ಯಕಚೇರಿ


ನವದೆಹಲಿಯು ಬಿಕ್ಕಟ್ಟಿನ ಆಳವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರುವುದರಿಂದ ವಿಶ್ವಸಂಸ್ಥೆಯಲ್ಲಿ ಸಮತೋಲಿತ ನಿಲುವಿಗಾಗಿ ಮಾಸ್ಕೋ ಭಾರತಕ್ಕೆ ಹೆಚ್ಚು ಕೃತಜ್ಞರಾಗಿರುತ್ತದೆ ಎಂದು ರಷ್ಯಾದ ರಾಯಭಾರಿ ಹೇಳಿದರು. “ನಾವು ಭಾರತದೊಂದಿಗೆ ಕಾರ್ಯತಂತ್ರದ ಮಿತ್ರರು.ವಿಶ್ವಸಂಸ್ಥೆಯಲ್ಲಿ ಭಾರತವು ಸಮತೋಲಿತ ಸ್ಥಾನವನ್ನು ಪ್ರದರ್ಶಿಸಿದ್ದಕ್ಕಾಗಿ ನಾವು ಅದಕ್ಕೆ ಕೃತಜ್ಞರಾಗಿರುತ್ತೇವೆ.ಈ ಬಿಕ್ಕಟ್ಟಿನ ಆಳವನ್ನು ಭಾರತ ಅರ್ಥಮಾಡಿಕೊಂಡಿದೆ ಎಂದು ಡೆನಿಸ್ ಅಲಿಪೋವ್ ಹೇಳಿದರು.


ಉಕ್ರೇನ್‌ನಲ್ಲಿ (Russia Ukraine War) ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗೆ,"ನಾವು ಉಕ್ರೇನ್‌ನಲ್ಲಿ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಭಾರತೀಯರಿಗೆ ಕಾರಿಡಾರ್ ಮತ್ತು ಸುರಕ್ಷಿತ ಮಾರ್ಗವನ್ನು ರಚಿಸುವ ಬಗ್ಗೆ ತೀವ್ರವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.


ರಷ್ಯಾ (Russia) ದ ರಾಯಭಾರಿ-ನಿಯೋಜಿತ "ಖಾರ್ಕಿವ್, ಸುಮಿ ಮತ್ತು ಉಕ್ರೇನ್‌ನ ಇತರ ಸಂಘರ್ಷ ವಲಯಗಳಲ್ಲಿ ಭಾರತೀಯರ ಸುರಕ್ಷತೆಯ ಕುರಿತು ನಾವು ಭಾರತದೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದು ಹೇಳಿದರು.ಹಿಂದಿನ ದಿನ, ಭಾರತೀಯ ವಾಯುಪಡೆ (ಐಎಎಫ್) ವೈಸ್ ಚೀಫ್ ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರು ರಷ್ಯಾದ ಮೇಲೆ ಯುಎಸ್ ನಿರ್ಬಂಧಗಳಿಂದ ವಾಯುಪಡೆಯು ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ ಮತ್ತು ಎರಡೂ ದೇಶಗಳೊಂದಿಗಿನ ಭಾರತದ ಸಂಬಂಧಗಳು ಗಟ್ಟಿಯಾಗಿವೆ' ಎಂದು ಹೇಳಿದರು.


ಇದನ್ನೂ ಓದಿ: Russia-Ukraine ನಡುವೆ ಭಯಾನಕ ಯುದ್ಧದ ಸಂಕೇತ! ರಾಜಧಾನಿ ಕೀವ್ ನತ್ತ ಸಾಗುತ್ತಿದೆ 40 ಮೈಲಿ ಉದ್ದ ರಷ್ಯಾ ಬೆಂಗಾವಲು ಪಡೆ


"ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಕಷ್ಟಕರವಾಗಿದೆ ಎಂದು ನಮಗೆ ತಿಳಿದಿದೆ.ರಷ್ಯಾದೊಂದಿಗಿನ ನಮ್ಮ ಸಂಬಂಧಗಳು ಮುಂದುವರಿಯುತ್ತದೆ" ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಫೆಬ್ರವರಿ 24 ರಂದು ಉಕ್ರೇನ್ ವಿರುದ್ಧ ರಷ್ಯಾ ತನ್ನ ಮಿಲಿಟರಿ ಆಕ್ರಮಣವನ್ನು ಪ್ರಾರಂಭಿಸಿತು.ಈ ಹಿನ್ನಲೆಯಲ್ಲಿ ಯುಎಸ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಆಕ್ರಮಣದ ನಂತರ ರಷ್ಯಾದ ಮೇಲೆ ಪ್ರಮುಖ ಆರ್ಥಿಕ ಮತ್ತು ಇತರ ನಿರ್ಬಂಧಗಳನ್ನು ವಿಧಿಸಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.