Sri Lanka declares state of emergency: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ ನಂತರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ದ್ವೀಪ ರಾಷ್ಟ್ರದ ಪ್ರಧಾನಿ ಕಚೇರಿಯನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.‌ ಎಎನ್‌ಐ ವರದಿಯ ಪ್ರಕಾರ, ನೂರಾರು ಉಗ್ರ ಪ್ರತಿಭಟನಾಕಾರರು ಅಶ್ರುವಾಯು ಶೆಲ್‌ಗಳ ನಡುವೆ ಭದ್ರತಾ ನಿಯೋಜನೆಯನ್ನು ಉಲ್ಲಂಘಿಸಿದ್ದರಿಂದ ಕೊಲಂಬೊದಲ್ಲಿರುವ ಶ್ರೀಲಂಕಾದ ಪ್ರಧಾನಿ ನಿವಾಸದ ಆವರಣಕ್ಕೆ ಪ್ರವೇಶಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 


ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಸಲಹೆಗಾರರು ಈ ಬಗ್ಗೆ ಮಾತನಾಡಿ, "ನಾವು ಪ್ರಧಾನಿ ರಾಜೀನಾಮೆ ನೀಡಬೇಕೆಂದು ಬಯಸುತ್ತೇವೆ. ಏಕೆಂದರೆ ನಮ್ಮ ಸಂವಿಧಾನದ ಪ್ರಕಾರ ಅಧ್ಯಕ್ಷರು ರಾಜೀನಾಮೆ ನೀಡಿದರೆ ಪಿಎಂ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಜನರು ಇಬ್ಬರೂ ಹೊರಹೋಗಬೇಕೆಂದು ಬಯಸುತ್ತಾರೆ" ಎಂದಿದ್ದಾರೆ.


ಮಾಧ್ಯಮ ವರದಿಗಳ ಪ್ರಕಾರ, 73 ವರ್ಷದ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ, ಅವರ ಪತ್ನಿ ಮತ್ತು ಇಬ್ಬರು ಅಂಗರಕ್ಷಕರ ಜೊತೆ ಶ್ರೀಲಂಕಾದ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ತೆರಳಿದ್ದಾರೆ. ಕಾರ್ಯನಿರ್ವಾಹಕ ಅಧ್ಯಕ್ಷರಿಗೆ ನೀಡಲಾದ ಸಂವಿಧಾನದ ಅಡಿಯಲ್ಲಿ ರಾಜಪಕ್ಸೆ ಅವರನ್ನು ಬುಧವಾರ ಬೆಳಿಗ್ಗೆ ವಾಯುಪಡೆಯ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಕರೆದೊಯಗಯಲಾಯಿತು ಎಂದು ಶ್ರೀಲಂಕಾ ವಾಯುಪಡೆ ದೃಢಪಡಿಸಿದೆ.


ಇದನ್ನೂ ಓದಿ: 


"ಸರ್ಕಾರದ ಕೋರಿಕೆಯ ಮೇರೆಗೆ ಮತ್ತು ಸಂವಿಧಾನದ ಅಡಿಯಲ್ಲಿ ಅಧ್ಯಕ್ಷರಿಗೆ ಲಭ್ಯವಿರುವ ಅಧಿಕಾರದ ಪ್ರಕಾರ, ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯೊಂದಿಗೆ, ಅಧ್ಯಕ್ಷರು, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳಿಗೆ ಶ್ರೀಲಂಕಾ ವಾಯುಪಡೆಯ ವಿಮಾನವನ್ನು ಒದಗಿಸಲಾಗಿದೆ. ಜುಲೈ 13 ರ ಮುಂಜಾನೆ ಮಾಲ್ಡೀವ್ಸ್‌ಗೆ ಅವರು ಹಾರಿದ್ದಾರೆ" ಎಂದು ಸಂಕ್ಷಿಪ್ತ ಹೇಳಿಕೆ ತಿಳಿಸಿದೆ.


ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಈಗಾಗಲೇ ಹಣ ದುಬ್ಬರದಿಂದ ಬಸವಳಿದಿದ್ದ ಲಂಕೆಯ ಪರಿಸ್ಥಿತಿ ಇದರಿಂದಾಗಿ ಮತ್ತಷ್ಟು ಹದಗೆಟ್ಟಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.