ಆಪರೇಷನ್ ಕಮಲ ಭೀತಿ: ಮುತ್ತಿನ ನಗರಿ ತಲುಪಿದ ಕಾಂಗ್ರೆಸ್- ಜೆಡಿಎಸ್ ಶಾಸಕರು

ಒಂದೇ ಹೋಟೆಲಿನಲ್ಲಿ ಕೈ-ತೆನೆ ನಾಯಕರು

Last Updated : May 18, 2018, 10:38 AM IST
ಆಪರೇಷನ್ ಕಮಲ ಭೀತಿ: ಮುತ್ತಿನ ನಗರಿ ತಲುಪಿದ ಕಾಂಗ್ರೆಸ್- ಜೆಡಿಎಸ್ ಶಾಸಕರು title=

ಹೈದರಾಬಾದ್: ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹೈದರಾಬಾದ್‌ಗೆ ತೆರಳಿದ್ದಾರೆ. ರಾಜ್ಯ ರಾಜಕಾರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಬಿಜೆಪಿಯ ಆಪರೇಷನ್ ಕಮಲದಿಂದ ತಪ್ಪಿಸಿಕೊಳ್ಳಲು ತಮ್ಮ ಶಾಸಕರನ್ನು ಹೈದರಾಬಾದ್ ಗೆ  ತೆರಳಿದ್ದಾರೆ.

ಈಗಲ್ ಟನ್ ರೆಸಾರ್ಟ್ ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದ ಶಾಸಕರಿಗೆ ವಿಶೇಷ ವಿಮಾನಕ್ಕೆ ಕೇಂದ್ರ ಸರ್ಕಾರದ ಅಧೀನದ ನಾಗರೀಕ ವಿಮಾನಯಾನ ಸಚಿವಾಲಯ ನಿರಾಕರಿಸಿದೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್- ಜೆಡಿಎಸ್ ನಾಯಕರು ಹೈದರಾಬಾದ್ ತೆರಳಿದ್ದಾರೆ. 

ಕಾಂಗ್ರೆಸ್‌ ಶಾಸಕರು ಹೈದರಾಬಾದ್ ಹೆದ್ದಾರಿಯಲ್ಲಿ ಬಸ್‌ ಬದಲಾಯಿಸಿದ್ದಾರೆ. ಜೆಡಿಎಸ್‌ ಶಾಸಕರ ಜತೆಗೂಡಿ ಎಲ್ಲಾ ಶಾಸಕರು ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ಶಾಸಕರು ಬಸ್‌ ಬದಲಾಯಿಸುತ್ತಿರುವ ವಿಡಿಯೊದೊಂದಿಗೆ ಎಎನ್‌ಐ ಟ್ವೀಟ್‌ ಮಾಡಿದೆ.

ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೊಟೇಲ್ ಬದಲಿಗೆ ತಾಜ್ ಕೃಷ್ಣ ಹೊಟೇಲ್ ಗೆ ಕಾಂಗ್ರೆಸ್- ಜೆಡಿಎಸ್ ಶಾಸಕರು ತೆರಳಿದ್ದಾರೆ.

Trending News