ನವದೆಹಲಿ: ಮೇ 12ರಂದು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೊಬೈಲ್ ಆಪ್ ಮೂಲಕ ಸಂವಾದ ನಡೆಸಿದ್ದಾರೆ. ನಮೋ ಅಪ್ಲಿಕೇಶನ್ ಮೂಲಕ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ. ಎನ್ಡಿಎ ಸರ್ಕಾರವು ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ಹಣವನ್ನು ಕರ್ನಾಟಕಕ್ಕೆ ನೀಡಿರುವುದರಿಂದ ರಾಜ್ಯ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಮೋದಿ ಆ್ಯಪ್ನಲ್ಲಿ ಸಂವಾದ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ 9 ಗಂಟೆಗೆ ಪಕ್ಷದ ಅಭ್ಯರ್ಥಿಗಳು, ಪದಾಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಮೋದಿ ಆ್ಯಪ್ನಲ್ಲಿ ಸಂವಾದ ನಡೆಸಿದರು. ಈ ಸಮಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದಿಷ್ಟು ಸಲಹೆ, ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಿದೇಶಿ ಏಜೆನ್ಸಿಗಳನ್ನು ನೇಮಿಸುವ ಮೂಲಕ ವಿರೋಧ ಪಕ್ಷವು ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ಕಾಂಗ್ರೆಸ್ ಉತ್ತರಿಸಲಾಗುವುದಿಲ್ಲ, ಆದ್ದರಿಂದ ಕಾಂಗ್ರೆಸ್ ಬಿಜೆಪಿಯನ್ನು ದೂಷಿಸುತ್ತದೆ ಎಂದು ತಿಳಿಸಿದರು.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿರುವ ಎಲ್ಲ ದೋಷಗಳ ಮೂಲ ಕಾಂಗ್ರೆಸ್ ಪಕ್ಷ ಎಂಬ ಸತ್ಯವನ್ನ ಯಾರು ನಿರಾಕರಿಸಲು ಸಾಧ್ಯವಿಲ್ಲ. ಈ ಕಾಂಗ್ರೆಸ್ ಸಂಸ್ಕೃತಿಯನ್ನು ದೇಶದಿಂದ ಹೊರಹಾಕುವ ತನಕ ನಾವು ನಮ್ಮ ರಾಜಕೀಯ ವೈವಸ್ಥೆಯನ್ನು ಶುದ್ಧೀಕರಿಸುವುದು ಅಸಾಧ್ಯ ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದರು.
ಅಭಿವೃದ್ಧಿಯ ಬಗ್ಗೆ ಮಾತನಾಡಲು ಇತರ ರಾಜಕೀಯ ಪಕ್ಷಗಳು ಹಿಂಜರಿಯುತ್ತಿವೆ. ವಿಭಜನೆಯ ಮೇಲೆ ಕೇಂದ್ರೀಕೃತವಾದ ಆ ಪಕ್ಷಗಳಿಗೆ ಇದನ್ನು ಒಪ್ಪಿಕೊಳ್ಳಲಾಗಲಿಲ್ಲ. ನಾವು ಅಭಿವೃದ್ಧಿ ಮಾದರಿಯಲ್ಲಿ ಮಾತ್ರವೇ ಚುನಾವಣೆಗಳನ್ನು ನಡೆಸುತ್ತೇವೆ ಮತ್ತು ಹೋರಾಡುತ್ತೇವೆ ಎಂದು ಮೋದಿ ತಿಳಿಸಿದರು.
ಸಂವಾದದ ಕೆಲವು ಪ್ರಮುಖ ಅಂಶಗಳು;
- ನಾನು ಕರ್ನಾಟಕದ ಕೆಲಸಗಾರನಾಗಿದ್ದೇನೆ.
- ಜನರು ಜಾತಿ, ಧರ್ಮದ ರಾಜಕೀಯದಿಂದ ಸಿಕ್ಕಿಬಿದ್ದಿದ್ದಾರೆ.
- ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ನೀವು ಎಷ್ಟು ಪುರುಷ ಕಾರ್ಯಕರ್ತರಿದ್ದೀರೋ ಅಷ್ಟೇ ಮಹಿಳಾ ಕಾರ್ಯಕರ್ತರಿರಬೇಕು. ಯಾರು ಬೂತ್ ಗೆಲ್ಲುತ್ತಾರೋ, ಅವರು ಗೆಲ್ಲುತ್ತಾರೆ ಎಂದು ಸಲಹೆ ನೀಡಿದರು.
- 2022 ರೊಳಗೆ ಅಭಿವೃದ್ಧಿಯ ಗುರಿಯನ್ನು ಪೂರೈಸಬಹುದಾದ ಸರ್ಕಾರವನ್ನು ನಿರ್ಮಿಸಿ.
- ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂದು ಮಾತನಾಡುವ ಮೂಲಕ ತಪ್ಪುದಾರಿಗೆಳೆಯಲಾಗುತ್ತಿದೆ.
- ಕಾಂಗ್ರೆಸ್ ಸಂಸ್ಕೃತಿಯನ್ನು ಮುಕ್ತಗೊಳಿಸುವುದರ ಮೂಲಕ ರಾಜಕೀಯವನ್ನು ಶುದ್ಧೀಕರಿಸಲಾಗುವುದು: ಪ್ರಧಾನಿ ಮೋದಿ
- ಭಾರತೀಯ ರಾಜಕೀಯದ ಮುಖ್ಯವಾಹಿನಿ ಕಾಂಗ್ರೆಸಿನ ಪಾಪದೊಂದಿಗೆ ಸೇರಿಕೊಂಡಿದೆ.
- ಜಾತಿ ರಾಜಕೀಯದ ಅಭಿವೃದ್ಧಿ ರಾಜಕೀಯದ ಅರ್ಥವಲ್ಲ.
ಪ್ರಧಾನಿ ಮೋದಿ ಯಾವ ಯಾವ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ನೀವೇ ನೋಡಿ
LIVE : PM @narendramodi interacts with BJP Karyakartas of Karnataka through 'NM App'. #KarnatakaTrustsModi https://t.co/pZqPxs6vCw
— BJP (@BJP4India) April 26, 2018
ಮೇ 1 ರಿಂದ ಕರ್ನಾಟಕ ಕುರುಕ್ಷೇತ್ರದಲ್ಲಿ ಪ್ರಧಾನಿ ಮೋದಿ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರು ಮೇ ತಿಂಗಳಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಮೇ 1 ರಂದು ಉಡುಪಿಗೆ ತೆರಳಲಿರುವ ಪ್ರಧಾನಿ ಮೋದಿ ಅಲ್ಲಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಾರೆ.