ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ

Inamdara Film Team: ಮೂಲತಃ ಉತ್ತರ ಕರ್ನಾಟಕದ ಗಟ್ಟಿ ನೆಲದ ಯುವಕ ರಂಜನ್ ಛತ್ರಪತಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಕರ್ನಾಟಕದ ಸೌದತ್ತಿಯ ಶಕ್ತಿ ಕೇಂದ್ರವಾದ ಸೌದತ್ತಿ ಯಲ್ಲಮ್ಮ ಗುಡ್ಡದಲ್ಲಿ ಉರುಳು ಸೇವೆ ಮಾಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಧಾರ ಮಾಡಲು ಇನಾಮ್ದಾರ್ ಚಿತ್ರತಂಡ ನಿರ್ಧರಿಸಿದೆ.

Written by - Yashaswini V | Last Updated : Sep 25, 2023, 11:58 AM IST
  • ಬೆಳಗಾವಿಯಲ್ಲಿ ಅಕ್ಟೋಬರ್ 15ರಂದು ಅದ್ದೂರಿಯ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಚಿತ್ರತಂಡ
  • ಬೆಂಗಳೂರಿನಲ್ಲಿ ಅಕ್ಟೋಬರ್ ಆರನೇ ತಾರೀಕು ಪಂಚ ಭಾಷೆಯಲ್ಲಿ ಟ್ರೈಲರ್ ಬಿಡುಗಡೆಗೆ ಸಿದ್ಧತೆ
  • ಇನ್ನೇನು ಕೆಲವೇ ದಿನದಲ್ಲಿ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಲಿರುವ ಚಿತ್ರತಂಡ
ಸೌದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸಿದ ಇನಾಮ್ದಾರ ಚಿತ್ರ ನಟ ರಂಜನ್ ಛತ್ರಪತಿ title=

Inamdara Film Team: ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿರುವ ಇನಾಮ್ದಾರ್ ಚಿತ್ರ   ಇದೀಗ  ಸೌದತ್ತಿ ಯಲ್ಲಮ್ಮ ಗುಡ್ಡದಲ್ಲಿ ನಟ ರಂಜಿನ್ ಛತ್ರಪತಿ, ನಿರ್ದೇಶಕ ಸಂದೇಶ ಶೆಟ್ಟಿ  ಹಾಗೂ ನಿರ್ಮಾಪಕ ನಿರಂಜನ್ ಶೆಟ್ಟಿ ತಲ್ಲೂರು ಸೇರಿದಂತೆ ಚಿತ್ರತಂಡದ 45 ಜನ ಉರುಳು ಸೇವೆ ಮಾಡುವುದರ ಮೂಲಕ ಚಿತ್ರದ ಯಶಸ್ವಿಗೆ ಶ್ರೀ ದೇವರ ಮೊರೆ ಹೋಗಿದ್ದಾರೆ.

ಮೂಲತಃ ಉತ್ತರ ಕರ್ನಾಟಕದ ಗಟ್ಟಿ ನೆಲದ ಯುವಕ ರಂಜನ್ ಛತ್ರಪತಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಉತ್ತರ ಕರ್ನಾಟಕದ ಸೌದತ್ತಿಯ ಶಕ್ತಿ ಕೇಂದ್ರವಾದ ಸೌದತ್ತಿ ಯಲ್ಲಮ್ಮ ಗುಡ್ಡದಲ್ಲಿ ಉರುಳು ಸೇವೆ ಮಾಡಿ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಧಾರ ಮಾಡಲು ಇನಾಮ್ದಾರ್ ಚಿತ್ರತಂಡ ನಿರ್ಧರಿಸಿದೆ.

ಬೆಳಗಾವಿಯಲ್ಲಿ ಅಕ್ಟೋಬರ್ 15ರಂದು ಅದ್ದೂರಿಯ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಚಿತ್ರತಂಡ ಬೆಂಗಳೂರಿನಲ್ಲಿ ಅಕ್ಟೋಬರ್ ಆರನೇ ತಾರೀಕು ಪಂಚ ಭಾಷೆಯಲ್ಲಿ ಟ್ರೈಲರ್ ಬಿಡುಗಡೆಗೆ ಸಿದ್ಧತೆಯನ್ನು ನಡೆಸಿಕೊಂಡಿದೆ, ಇನ್ನೇನು ಕೆಲವೇ ದಿನದಲ್ಲಿ ಚಿತ್ರ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಘೋಷಿಸಲಿದೆ. 

ಇದನ್ನೂ ಓದಿ- ಅಮ್ಮನಾದರೂ ಅಂದಕ್ಕೇನೂ ಕಮ್ಮಿಯಿಲ್ಲ..! ಪ್ರಣಿತಾ ಫೋಟೋಸ್‌ ವೈರಲ್‌

ಒಟ್ಟಾರೆಯಾಗಿ ಶಕ್ತಿ ದೇವತೆಯ ಆಶೀರ್ವಾದ ಪಡೆದ ಇನಾಮ್ದಾರ್ ಚಿತ್ರತಂಡ ಇದೀಗ ತಮ್ಮ ಎಲ್ಲಾ ಪ್ರಮೋಷನ್ ಆಕ್ಟಿವಿಟೀಸ್ ಅನ್ನು ಉತ್ತರ ಕರ್ನಾಟಕದ ನೆಲದಿಂದಲೇ ಪ್ರಾರಂಭ ಮಾಡಿದೆ.

ಕುಂತಿ ಅಮ್ಮ ಪ್ರೊಡಕ್ಷನ್ ಹಾಗೂ ತಸ್ಮಯ್ ಪ್ರೊಡಕ್ಷನ್, ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ಈ ಸಿನಿಮಾಕ್ಕೆ ನಿರಂಜನ್ ಶೆಟ್ಟಿ ತಲ್ಲೂರ್ ಬಂಡವಾಳ ಹೂಡಿದ್ದಾರೆ.

ರಂಜನ್ ಛತ್ರಪತಿ ಖಡಕ್ ಲುಕ್ ನಲ್ಲಿ ಇನಾಮ್ದಾರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು , ಒಟ್ಟಾರೆಯಾಗಿ ವಿಭಿನ್ನ ವಸ್ತು ಸ್ಥಿತಿ ಉಳ್ಳ ಈ ಸಿನಿಮಾ ಆಯಾ ಪ್ರಾದೇಶಿಕ ಭಾಷೆಯನ್ನು ಒಳಗೊಂಡು ವಿಭಿನ್ನವಾದ ಶೈಲಿಯಲ್ಲಿ ಮೂಡಿಬಂದಿದೆ ಎಂದು ನಿರ್ದೇಶಕ ಸಂದೇಶ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ- ʼಚಿರು ಸಾಯುವ ಮೂರು ದಿನಗಳ ಹಿಂದೆʼ..! ಅಳಿಯನ ಸಾವಿನ ಸತ್ಯ ಬಿಚ್ಚಿಟ್ಟ ಸುಂದರ್‌ ರಾಜ್‌

ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವಾ, ಅವಿನಾಶ್, ಥ್ರಿಲ್ಲರ್ ಮಂಜು, ಎಸ್ತಾರ್  ನೆರೋನಾ  ಪ್ರಶಾಂತ್ ಸಿದ್ದಿ, ಸಂಜು ಬಸಯ್ಯ, ಮಹಾಬಲೇಶ್ವರ ಭಟ್, ಯಶ್ ಆಚಾರ್ಯ ಕರಣ್ ಕುಂದರ್  ರಘು ಪಾಂಡೇಶ್ವರ್ ಎಂಕೆ ಮಠ ಬಣ್ಣ ಹಚ್ಚಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News