ರಜನಿ ರಾಜಕೀಯ ಪ್ರವೇಶ ಸ್ವಾಗತಿಸಿದ ರಾಮ್ ಗೋಪಾಲ ವರ್ಮ

    

Last Updated : Jan 2, 2018, 07:04 PM IST
ರಜನಿ ರಾಜಕೀಯ ಪ್ರವೇಶ ಸ್ವಾಗತಿಸಿದ ರಾಮ್ ಗೋಪಾಲ ವರ್ಮ title=

ಮೊನ್ನೆಯಷ್ಟೇ ತಮಿಳು ಸೂಪರ್ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಗೊಳಿಸಿದ್ದು, ಇದಕ್ಕೆ ಅಭಿಮಾನಿಗಳಿಂದ  ಭರ್ಜರಿ ಸ್ವಾಗತವು ದೊರೆತಿದೆ. ಅಲ್ಲದೆ, ರಜನಿಕಾಂತ್ ತಮ ಅಭಿಮಾನಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ನೂತನ ವೆಬ್ ಸೈಟ್ ಅನ್ನು ಕೂಡ ಸೋಮವಾರ ಬಿಡುಗಡೆ ಮಾಡಿದ್ದಾರೆ. 

ಈ ಮೂಲಕ ರಜನಿಕಾಂತ್ ಸಂಪೂರ್ಣವಾಗಿ ತಮ್ಮನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಖಚಿತವಾಗಿದ್ದು, ತಮಿಳು ರಾಜಕೀಯದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿಧನರಾದ ನಂತರ ರಾಜಕೀಯಕ್ಕೆ ಕಾಲಿಡುತ್ತಿರುವ ಪ್ರಸಿದ್ಧ ಚಿತ್ರನಟ ಇವರಾಗಿದ್ದಾರೆ. 

ಈ ಕುರಿತು ಟ್ವಿಟ್ಟರ್ ಮೂಲಕ ಅಭಿಪ್ರಾಯ ತಿಳಿಸಿರುವ ನಿರ್ಮಾಪಕ ರಾಮ್ ಗೋಪಾಲ ವರ್ಮ ಅವರು, ರಜನಿಕಾಂತ್ ಅವರ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದಾರೆ. "ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಸಂದರ್ಭ ಎಲ್ಲರಲ್ಲೂ ಬಹಳ ಕುತೂಹಲವನ್ನು ಉಂಟುಮಾಡಿದಂತೆ ಹಿಂದೆಂದೂ ಈ ರೀತಿಯ ಸಂದರ್ಭವನ್ನು ಕಂಡಿರಲಿಲ್ಲ. ಇಡೀ ತಮಿಳುನಾದಿನ ಜನತೆ ರಾಜನಿಗೆ ಮತ ಹಾಕಲಿದೆ" ಎಂದು ಅವರು ಹೇಳಿದ್ದಾರೆ. 

Trending News