ಅನಿಮಲ್‌ ಚಿತ್ರವನ್ನು ಮಿಸ್‌ ಮಾಡಿಕೊಂಡ ಟಾಲಿವುಡ್‌ ನಟ: ರಣಬೀರ್‌ಗೂ ಮುಂಚೆ ಆಫರ್‌ ಬಂದಿದ್ದು ಯಾರಿಗೆ?

Animal: ಬಹುಭಾಷಾ ಅನಿಮಲ್‌ ಸಿನಿಮಾದಲ್ಲಿ ನಟ ರಣಬೀರ್‌ ಕಪೂರ್‌ಗೆ ನಾಯಕನಾಗಿ ನಟಿಸಲು ಆಫರ್‌ ಬರುವುದಕ್ಕೆ ಮುಂಚೆ ಈ ಅವಕಾಶವನ್ನು ಟಾಲಿವುಡ್‌ ನಟನೊಬ್ಬನಿಗೆ ದೊರಕಿತ್ತಂತೆ. ಹಾಗಾದ್ರೆ ಆ ನಟ ಯಾರು? 

Written by - Zee Kannada News Desk | Last Updated : Nov 25, 2023, 12:52 PM IST
  • ಅನಿಮಲ್‌ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದ್ದು, ಪ್ರಚಾರದ ಭಾಗವಾಗಿ ಈಗಾಗಲೇ ಹಲವು ಪ್ರಚಾರ ಕಾರ್ಯಕ್ರಮ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
  • ಅನಿಮಲ್ ತೆಲುಗು ಟ್ರೇಲರ್ ಕೇವಲ 6.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆದರೆ ಟಾಲಿವುಡ್ ನ ಆ ಸ್ಟಾರ್ ಹೀರೋ ಈ ಸಿನಿಮಾ ಮಿಸ್ ಮಾಡಿಕೊಂಡಿದ್ದಾರೆ.
  • ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಪುಷ್ಪ ಸಿನಿಮಾವನ್ನು ಕೈ ಬಿಟ್ಟಿದ್ದ ಈ ನಟ, ಅನಿಮಲ್ ಚಿತ್ರವನ್ನೂ ಕೈ ಬಿಟ್ಟಿರುವುದು ನೆಟ್ಟಿಗರು ಶಾಕ್ ಆಗಿದ್ದಾರೆ.
ಅನಿಮಲ್‌ ಚಿತ್ರವನ್ನು ಮಿಸ್‌ ಮಾಡಿಕೊಂಡ ಟಾಲಿವುಡ್‌ ನಟ: ರಣಬೀರ್‌ಗೂ ಮುಂಚೆ ಆಫರ್‌ ಬಂದಿದ್ದು ಯಾರಿಗೆ? title=

Mahesh Babu Rejected Animal Movie: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅಭಿನಯದ ಅನಿಮಲ್  ಹೊಸ ಚಿತ್ರದಲ್ಲಿ,  ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಚಿತ್ರಗಳ ಮೂಲಕ ಸೂಪರ್ ಕ್ರೇಜ್ ಪಡೆದಿರುವ ಸಂದೀಪ್ ರೆಡ್ಡಿ ವಂಗ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ರಾಷ್ಟ್ರೀಯ ಖ್ಯಾತಿಯ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಡಿಸೆಂಬರ್ 1 ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಪ್ರಚಾರದ ಭಾಗವಾಗಿ ಈಗಾಗಲೇ ಹಲವು ಪ್ರಚಾರ ಕಾರ್ಯಕ್ರಮ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದಂತೆ ಚಿತ್ರತಂಡ ಇತ್ತೀಚಿನ ಟ್ರೇಲರ್ ಬಿಡುಗಡೆ ಮಾಡಿದೆ.

ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಟ್ರೇಲರ್ ಗೂಸ್ ಬಂಪ್ ನೀಡುವುದು ಖಚಿತವಾಗಿದ್ದು, ಅನಿಮಲ್ ಟ್ರೇಲರ್ ಹಿಂದಿ ಆವೃತ್ತಿ 48 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನಿಮಲ್ ತೆಲುಗು ಟ್ರೈಲರ್ ಕೇವಲ 6.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಆದರೆ ಟಾಲಿವುಡ್ ನ ಆ ಸ್ಟಾರ್ ಹೀರೋ ಈ ಸಿನಿಮಾ ಮಿಸ್ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಈಗ ಯಾಕೆ ಇಷ್ಟು ಒಳ್ಳೆ ಸಿನಿಮಾ ಬಿಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಈ ಚಿತ್ರವನ್ನು ಮಿಸ್ ಮಾಡಿಕೊಂಡ ನಾಯಕ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಎಂಬುದು ಗಮನಾರ್ಹ.

ಇದನ್ನೂ ಓದಿ:  ಡೈರೆಕ್ಷನ್‌ ಕಡೆ ಮುಖ ಮಾಡಲಿದ್ದಾರಾ ಲೇಡಿ ಸೂಪರ್‌ ಸ್ಟಾರ್?‌ ಹಲ್‌ಚಲ್‌ ಎಬ್ಬಿಸಿದ ಪೋಸ್ಟ್!

ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಪುಷ್ಪ ಸಿನಿಮಾವನ್ನು ಕೈ ಬಿಟ್ಟಿದ್ದ ಮಹೇಶ್ ಬಾಬು ಅನಿಮಲ್ ಚಿತ್ರವನ್ನೂ ಕೈ ಬಿಟ್ಟಿರುವುದು ನೆಟ್ಟಿಗರು ಶಾಕ್ ಆಗಿದ್ದಾರೆ. ಅನಿಮಲ್ ಸಿನಿಮಾದಲ್ಲಿ ಮಹೇಶ್ ನಟಿಸಿದ್ದರೆ ಚೆನ್ನಾಗಿತ್ತು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮಹೇಶ್ ಬಾಬುಗೆ ಅಂತಹ ಸಿನಿಮಾಗಳು ಇಷ್ಟವಾಗಲಿಲ್ಲ, ಅದೇ ಭಾವನೆಯಿಂದ ಈ ಸಿನಿಮಾಗೆ ನೋ ಎಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.

ಅನಿಮಲ್‌ ಸಿನಿಮಾದಲ್ಲಿ ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ ಮಗ ಹೇಗೆ ಬದಲಾಗಿದ್ದು, ನಂತರ ಏನಾಯಿತು ಎಂಬುದು ಒಂದು ಕಥೆಯಂತೆ ತೋರುತ್ತದೆ. ಆದರೆ, ಅಪ್ಪ-ಮಗನ ನಡುವೆ ಗಟ್ಟಿಯಾದ ಬಾಂಧವ್ಯ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದ್ದು, ಒಳ್ಳೆಯ ಎಮೋಷನ್ ಜೊತೆಗೆ ಆ್ಯಕ್ಷನ್ ಕೂಡ ಒಂದು ರೇಂಜ್ ನಲ್ಲಿ ಇರಲಿದೆ ಎಂಬುದು ಟ್ರೈಲರ್ ನೋಡಿದರೆ ಅರ್ಥವಾಗುತ್ತದೆ. ಅನಿಮಲ್ ಸಿನಿಮಾ ಆಫರ್ ಮಿಸ್ ಮಾಡಿಕೊಂಡ ಸೌತ್​ ಸ್ಟಾರ್ ಮಹೇಶ್ ಬಾಬು, ಏನಾದರೂ ಓಕೆ ಎಂದಿರುತ್ತಿದ್ದರೆ ಈ ಸಿನಿಮಾ ರಣಬೀರ್‌ಗೆ ಸಿಗುತ್ತಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News