ರಸ್ತೆ ಮಧ್ಯೆ ವ್ಹೀಲಿಂಗ್ ಮಾಡೋ ಕೆಟ್ಟ ನಿರ್ಧಾರ ನೀನು ಮಾಡು, ಹಾಸ್ಪಿಟಲ್ ಬೆಡ್ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ..!

Traffic Police : ವಾಹನಗಳ ದಟ್ಟನೆ ದಿನೇ ದಿನೆ ಹೆಚ್ಚುತ್ತಿದೆ. ಟ್ರಾಫಿಕ್‌ ಪೋಲಿಸರಿಗೂ ಅವುಗಳ ನಿಯಂತ್ರಣ ಸ್ವಲ್ಪ ಕಷ್ಟ ಸಾಧ್ಯವೇ. ಬೆಂಗಳೂರಿನಲ್ಲಿ ವ್ಹಿಲೀಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಮುಖ್ಯ ರಸ್ತೆಗಳಲ್ಲಿಯೇ ಯಾವುದೇ ಭಯವಿಲ್ಲದೇ ವ್ಹೀಲಿಂಗ್‌ ಮಾಡುತ್ತಿದ್ದಾರೆ.  

Written by - Zee Kannada News Desk | Last Updated : May 5, 2023, 01:27 PM IST
  • ವ್ಹೀಲಿಂಗ್‌ ಮಾಡೋದು ಯುವಕರಿಗೆ ಕ್ರೇಜ್‌ ಆಗಿದೆ
  • ಈ ವ್ಹೀಲಿಂಗ್‌ ಮಾಡುವ ಯುವಕರು ತಮ್ಮ ಜೀವಕ್ಕಾಗುವ ಅಪಾಯವನ್ನು ಲೆಕ್ಕಿಸದೇ ವ್ಹೀಲಿಂಗ್‌ ಅನ್ನೋ ಹುಚ್ಚಿನ ಹಿಂದೆ ಬಿದ್ದಿದ್ದಾರೆ.
  • ಇದೇ ವಿಚಾರವಾಗಿ ಯಶವಂತಪುರ ಪೋಲಿಸರು ಕ್ರಿಯೆಟಿವ್‌ ಆಗಿ ʼಕಾಂತಾರʼ ಸಿನಿಮಾ ಡೈಲಾಗ್‌ ಮೂಲಕ ಟಾಂಗ್‌ ನೀಡಿದ್ದಾರೆ
ರಸ್ತೆ ಮಧ್ಯೆ ವ್ಹೀಲಿಂಗ್ ಮಾಡೋ ಕೆಟ್ಟ ನಿರ್ಧಾರ ನೀನು ಮಾಡು, ಹಾಸ್ಪಿಟಲ್ ಬೆಡ್ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ..!  title=

Yashvanthapura Traffic Police : ಹೌದು ವ್ಹೀಲಿಂಗ್‌ ಮಾಡೋದು ಯುವಕರಿಗೆ ಕ್ರೇಜ್‌ ಆಗಿದೆ. ರಾತ್ರಿವೇಳೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳ ಮೇಲೆ ವ್ಹೀಲಿಂಗ್‌ ಮಾಡುತ್ತಿರುತ್ತಾರೆ. ಇದೀಗ ಕೇವಲ ರಾತ್ರಿ ಹೊತ್ತು ಮಾತ್ರವಲ್ಲ ಹಗಲಿನಲ್ಲೂ ವ್ಹೀಲಿಂಗ್‌ ಮಾಡುವವರ ಸಂಖ್ಯೆ ಬಹತೇಕ ಹೆಚ್ಚಾಗಿದೆ. ಇದರಿಂದ ಅನೇಕ ಯುವಕರು ಪ್ರಾಣ ಕಳೆದುಕೊಂಡಿರುವ ನಿದಶರ್ನಗಳು ಇವೆ. 

ಈ ವ್ಹೀಲಿಂಗ್‌ ಮಾಡುವ ಯುವಕರು ತಮ್ಮ ಜೀವಕ್ಕಾಗುವ ಅಪಾಯವನ್ನು ಲೆಕ್ಕಿಸದೇ ವ್ಹೀಲಿಂಗ್‌ ಅನ್ನೋ ಹುಚ್ಚಿನ ಹಿಂದೆ ಬಿದ್ದಿದ್ದಾರೆ. ಇದರಿಂದ ಟ್ರಾಫಿಕ್‌ ಪೋಲಿಸರು ಬೆಸೋತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಟ್ರಾಫಿಕ್‌ ಕಂಟ್ರೋಲ್‌ ಮಾಡುವುದರ ಜೊತೆಗೆ ಈ ವ್ಹೀಲಿಂಗ್‌ ಮಾಡುವವರನ್ನು ಕಂಟ್ರೋಲ್‌ ಮಾಡುವ ಕೆಲಸ ಟ್ರಾಫಿಕ್‌ ಪೋಲಿಸರದ್ದಾಗಿದೆ. 

ಇದನ್ನೂ ಓದಿ-ʼದಿ ಕೇರಳ ಸ್ಟೋರಿʼ ನಾಯಕಿ ಅದಾ ಶರ್ಮಾ ಚಿತ್ರದ ಬಗ್ಗೆ ಹೇಳಿದ್ದೇನು..?

ಪೋಲಿಸರು ಎಷ್ಟೇ ವಾರ್ನಿಂಗ್‌ ಕೊಟ್ಟರು ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ, ಇದೀಗ ಇದೇ ವಿಚಾರವಾಗಿ ಯಶವಂತಪುರ ಪೋಲಿಸರು ಕ್ರಿಯೆಟಿವ್‌ ಆಗಿ ʼಕಾಂತಾರʼ ಸಿನಿಮಾ ಡೈಲಾಗ್‌ ಮೂಲಕ ಟಾಂಗ್‌ ನೀಡುವುದರ ಜೊತೆಗೆ ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ.

 "ಎತ್ತು ಎತ್ತು ಇನ್ನೂ ಮೇಲಕ್ಕೆ ಎತ್ತು….ದುರಹಂಕಾರದಿಂದ ಜನ್ಗಳು ಓಡಾಡೋ ರಸ್ತೆ ಮಧ್ಯೆ ವ್ಹೀಲಿಂಗ್ ಮಾಡೋ ಕೆಟ್ಟ ನಿರ್ಧಾರ ನೀನು ಮಾಡು, ಕೋರ್ಟ್ ನ ಮೆಟ್ಟಿಲ್ಮೇಲೆ /ಹಾಸ್ಪಿಟಲ್ ಬೆಡ್ ಮೇಲೆ ನಿನ್ನ ತೀರ್ಮಾನ ನಾನು ಮಾಡ್ತೇನೆ" ಎಂದು ಯಶವಂತಪುರ ಪೋಲಿಸರು ವ್ಹೀಲಿಂಗ್‌ ಮಾಡೋ ಯುವಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕ್ರಿಯೆಟಿವ್‌ ಎಚ್ಚರಿಕೆಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ-ಡೇರ್ ಡೆವಿಲ್ ಮುಸ್ತಫಾ' ರಿಲೀಸ್ ಗೆ ಡೇಟ್ ಫಿಕ್ಸ್....ಡಾಲಿ ಸಾಥ್ ಕೊಟ್ಟಿರುವ ಸಿನಿಮಾ ಮೇ 19ಕ್ಕೆ ರಿಲೀಸ್

ಯಶವಂತಪುರ ಟ್ರಾಫಿಕ್‌ ಪೋಲಿಸರ ಈ ಟ್ವೀಟ್‌ಗೆ ಕೆಲವು ತಮಾಷೆ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, "ದೈವ ತೀರ್ಮಾನ ಮಾಡುತ್ತೆ ಎಂದುಕೊಂಡು ನೀವು ಬಿಡಬೇಡಿ, ದೇವರ ಜೊತೆ ಇವರ ಭೇಟಿ ಮಾಡಿಸುವುದು ನಿಮ್ಮ ಕೆಲಸ ಸಾರ್" ಎಂದು ಕಾಮೆಂಟ್‌ ಮಾಡಿದ್ದಾರೆ. ಜೊತೆಗೆ "ವಾಹನಗಳನ್ನು ವಶಪಡಿಸಿಕೊಳ್ಳಿ ಮತ್ತು ಸ್ಕ್ರ್ಯಾಪ್ ಮಾಡಿ, ಹರಾಜಿಗೆ ಹಾಕಬೇಡಿ, ಅವರು ಮತ್ತೆ ಖರೀದಿಸುತ್ತಾರೆ, ವೀಲಿಂಗ್ ಮಾಡುತ್ತಾರೆ"  ಎಂದು ಕೆಲವರು ಉತ್ತಮ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News