ಗಾಂಧೀಜಿ ಸ್ಮರಣೆ: 75 ವರ್ಷಗಳ ಬಳಿಕವೂ ಪ್ರಸ್ತುತವಾಗಿರುವ ಗಾಂಧೀಜಿಯವರ ಶಾಂತಿ ಮತ್ತು ನ್ಯಾಯದ ಬೋಧನೆಗಳು

Mahatma Gandhi Death Anniversary: ಗಾಂಧೀಜಿಯವರ ಹತ್ಯೆ ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾರ ನಷ್ಟವಾಗಿತ್ತು. ಆದರೆ ಅವರು ಮೃತಪಟ್ಟರೂ ಅವರ ಬೋಧನೆಗಳು ತಲೆಮಾರುಗಳ ಕಾಲ ಸ್ಫೂರ್ತಿ ತುಂಬುತ್ತಿವೆ. ಇಂದು ಗಾಂಧೀಜಿಯವರ ಪುಣ್ಯತಿಥಿಯಂದು ಅವರು ಜಗತ್ತಿಗೆ ಬಿಟ್ಟು ಹೋದ ಗಾಂಧೀವಾದವನ್ನು ಸ್ಮರಿಸುವ, ಅವುಗಳನ್ನು ಜೀವನದಲ್ಲಿ ಅಳವಡಿಸುವ ಪ್ರಯತ್ನ ನಡೆಸಬೇಕಿದೆ.

Written by - Girish Linganna | Edited by - Yashaswini V | Last Updated : Jan 30, 2023, 07:52 AM IST
  • ಗಾಂಧೀಜಿಯ ತತ್ವ ಸಿದ್ಧಾಂತಗಳು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಾಮಡೇಲಾ ಸೇರಿದಂತೆ ಹಲವು ಜಾಗತಿಕ ನಾಯಕರಿಗೆ ಪ್ರೇರಣೆ ನೀಡಿದ್ದವು.
  • ಇಂದಿಗೂ ಕದನಗಳು, ವಿಭಜನೆಗಳನ್ನು ಎದುರಿಸುತ್ತಿರುವ ಜಗತ್ತಿಗೆ ಗಾಂಧೀವಾದ ಅತ್ಯಂತ ಪ್ರಸ್ತುತವಾಗಿದೆ.
  • ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ನಾಗರಿಕ ಅಸಹಕಾರ ಚಳವಳಿ ಮತ್ತು ಶಾಂತಿಯುತ ಪ್ರತಿಭಟನಾ ಮಾರ್ಗ ಜಗತ್ತಿನಾದ್ಯಂತ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿತು.
ಗಾಂಧೀಜಿ ಸ್ಮರಣೆ: 75 ವರ್ಷಗಳ ಬಳಿಕವೂ ಪ್ರಸ್ತುತವಾಗಿರುವ ಗಾಂಧೀಜಿಯವರ ಶಾಂತಿ ಮತ್ತು ನ್ಯಾಯದ ಬೋಧನೆಗಳು title=
Mahatma Gandhi Death Anniversary

Mahatma Gandhi Death Anniversary: ಭಾರತದ ಸ್ವಾತಂತ್ರ್ಯ ಚಳುವಳಿಯ ಅತ್ಯಂತ ಪ್ರಮುಖ ನಾಯಕರಾಗಿದ್ದ ಮಹಾತ್ಮಾ ಗಾಂಧಿಯವರು ಜನವರಿ 30, 1948ರಂದು ಹತ್ಯೆಗೀಡಾದರು. ಇಂದು, ಮಹಾತ್ಮಾ ಗಾಂಧಿಯವರ 75ನೇ ಪುಣ್ಯಸ್ಮರಣೆ ಅವರ ಮಹತ್ವ, ಜಗತ್ತಿನ ಮೇಲೆ ಅವರು ಬೀರಿದ ಪ್ರಭಾವದ ಕುರಿತು ಗಮನ ಹರಿಸಲು ಅವಕಾಶವಾಗಿದೆ.

ರಾಷ್ಟ್ರಪಿತ ಎಂದೇ ಪ್ರಸಿದ್ಧರಾದ ಗಾಂಧೀಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಅಹಿಂಸಾತ್ಮಕ ನಾಗರಿಕ ಅಸಹಕಾರ ಚಳುವಳಿಯ ಮೂಲಕ ಹೋರಾಟದ ನಾಯಕತ್ವ ವಹಿಸಿದ್ದರು. ಅವರು ಸತ್ಯ ಮತ್ತು ಪ್ರೀತಿಯ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದರು. ಅವರು ಈ ಎರಡರ ಮೂಲಕ ಬದಲಾವಣೆ ತರಬಹುದು ಎಂದಿದ್ದರು. ಗಾಂಧೀಜಿ ತನ್ನ ಶಾಂತಿ ಮತ್ತು ಸಮಾನತೆಯ ಸಂದೇಶಗಳಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದರು.

ಅವರು ತನ್ನ ಅಹಿಂಸಾ ವಾದವನ್ನು ಸತ್ಯಾಗ್ರಹ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಗಾಂಧೀಜಿಯ ತತ್ವ ಸಿದ್ಧಾಂತಗಳು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಾಮಡೇಲಾ ಸೇರಿದಂತೆ ಹಲವು ಜಾಗತಿಕ ನಾಯಕರಿಗೆ ಪ್ರೇರಣೆ ನೀಡಿದ್ದವು. ಇಂದಿಗೂ ಕದನಗಳು, ವಿಭಜನೆಗಳನ್ನು ಎದುರಿಸುತ್ತಿರುವ ಜಗತ್ತಿಗೆ ಗಾಂಧೀವಾದ ಅತ್ಯಂತ ಪ್ರಸ್ತುತವಾಗಿದೆ. ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರ ನಾಗರಿಕ ಅಸಹಕಾರ ಚಳವಳಿ ಮತ್ತು ಶಾಂತಿಯುತ ಪ್ರತಿಭಟನಾ ಮಾರ್ಗ ಜಗತ್ತಿನಾದ್ಯಂತ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿತು.

ಇದನ್ನೂ ಓದಿ- Pravasi Bharathiya Diwas 2023: NRI ದಿನಾಚರಣೆಗೂ ಗಾಂಧೀಜಿಗೂ ಇದೆ ಮಹತ್ವದ ನಂಟು! ಏನದು ಗೊತ್ತಾ?

ತಾನು ಅಪಾರವಾದ ಸಾಧನೆ ಮಾಡಿದ್ದರೂ, ಅತ್ಯಂತ ಮಹತ್ವದ ರಾಷ್ಟ್ರ ನಾಯಕರಾಗಿದ್ದರೂ, ಗಾಂಧೀಜಿ ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು. ಅವರು ತಾನು ಇತರರಿಗೆ ಬೋಧಿಸುತ್ತಿದ್ದುದನ್ನು ಸ್ವತಃ ಅನುಸರಿಸುತ್ತಿದ್ದರು. ಗಾಂಧೀಜಿ ಬಡವರು ಮತ್ತು ತುಳಿತಕ್ಕೊಳಗಾದರ ಧ್ವನಿಯಾಗುವ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ದ ಹೋರಾಡಿದರು.

ಗಾಂಧೀಜಿಯವರ ಹತ್ಯೆ ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಅಪಾರ ನಷ್ಟವಾಗಿತ್ತು. ಆದರೆ ಅವರು ಮೃತಪಟ್ಟರೂ ಅವರ ಬೋಧನೆಗಳು ತಲೆಮಾರುಗಳ ಕಾಲ ಸ್ಫೂರ್ತಿ ತುಂಬುತ್ತಿವೆ. ಇಂದು ಗಾಂಧೀಜಿಯವರ ಪುಣ್ಯತಿಥಿಯಂದು ಅವರು ಜಗತ್ತಿಗೆ ಬಿಟ್ಟು ಹೋದ ಗಾಂಧೀವಾದವನ್ನು ಸ್ಮರಿಸುವ, ಅವುಗಳನ್ನು ಜೀವನದಲ್ಲಿ ಅಳವಡಿಸುವ ಪ್ರಯತ್ನ ನಡೆಸಬೇಕಿದೆ.

ಭಾರತದಲ್ಲಿ ಗಾಂಧೀಜಿಯವರ ಪುಣ್ಯಸ್ಮರಣೆಯಂದು ಅವರ ಜೀವನ ಮತ್ತು ಬೋಧನೆಗಳನ್ನು ಸ್ಮರಿಸುವ ಹಲವು ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಅದಕ್ಕಾಗಿ ವಿವಿಧ ಸಮಾರಂಭಗಳು, ವಸ್ತು ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಭಾರತದಾದ್ಯಂತ ಶಾಲೆ ಕಾಲೇಜುಗಳು, ಸಂಸ್ಥೆಗಳು ಗಾಂಧೀಜಿಯವರ ಜಯಂತಿ ಮತ್ತು ಸ್ಮೃತಿ ದಿನಗಳನ್ನು ವಿಶೇಷವಾಗಿ ಆಚರಿಸುತ್ತವೆ.

ಇದನ್ನೂ ಓದಿ- ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಕೂಡ ಇದ್ದರು: ವಿಪಕ್ಷ ನಾಯಕ ಸಿದ್ದರಾಮಯ್ಯ

ಜಗತ್ತಿನ ಮೇಲೆ ಗಾಂಧೀಜಿಯವರ ಪ್ರಭಾವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅವರು ಇಂದಿಗೂ ಜಾಗತಿಕ ಶಾಂತಿ ಮತ್ತು ನ್ಯಾಯವನ್ನು ಬಯಸುವವರಿಗೆ ಆದರ್ಶ ಮತ್ತು ಸ್ಫೂರ್ತಿಯಾಗಿದ್ದಾರೆ. ಇಂದು ಗಾಂಧೀಜಿಯವರ ಸ್ಮೃತಿ ದಿನದಂದು ಅವರ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆಸುವ ಮೂಲಕ ಮಹಾತ್ಮನಿಗೆ ಗೌರವ ಸಲ್ಲಿಸೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News