370ನೇ ವಿಧಿಯಂತೆ ನಿಜಾಮ್, ಓವೈಸಿ ಹೆಸರುಗಳೂ ಅಳಿಸಿ ಹೋಗುತ್ತವೆ: ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ (ಜನವರಿ 9) ದಂದು ತೆಲಂಗಾಣದ ವಾರಂಗಲ್‌ನಲ್ಲಿ ನಿಜಾಮರ ಪರಂಪರೆಗೆ ಸಂಪೂರ್ಣವಾಗಿ ಕೊನೆಹಾಡಿ ನಿಜಾಮ್ ಮತ್ತು ಓವೈಸಿಯ ಅಂತವರ ಹೆಸರನ್ನು ಅಳಿಸಿ ಹಾಕಲಾಗುವುದು ಎಂದು ಹೇಳಿದರು. 

Written by - Zee Kannada News Desk | Last Updated : Jan 9, 2022, 07:12 PM IST
  • ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ (ಜನವರಿ 9) ದಂದು ತೆಲಂಗಾಣದ ವಾರಂಗಲ್‌ನಲ್ಲಿ ನಿಜಾಮರ ಪರಂಪರೆಗೆ ಸಂಪೂರ್ಣವಾಗಿ ಕೊನೆಹಾಡಿ ನಿಜಾಮ್ ಮತ್ತು ಓವೈಸಿಯ ಅಂತವರ ಹೆಸರನ್ನು ಅಳಿಸಿ ಹಾಕಲಾಗುವುದು ಎಂದು ಹೇಳಿದರು.
370ನೇ ವಿಧಿಯಂತೆ ನಿಜಾಮ್, ಓವೈಸಿ ಹೆಸರುಗಳೂ ಅಳಿಸಿ ಹೋಗುತ್ತವೆ: ಹಿಮಂತ ಬಿಸ್ವಾ ಶರ್ಮಾ title=
Photo Courtesy: ANI

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ (ಜನವರಿ 9) ದಂದು ತೆಲಂಗಾಣದ ವಾರಂಗಲ್‌ನಲ್ಲಿ ನಿಜಾಮರ ಪರಂಪರೆಗೆ ಸಂಪೂರ್ಣವಾಗಿ ಕೊನೆಹಾಡಿ ನಿಜಾಮ್ ಮತ್ತು ಓವೈಸಿಯ ಅಂತವರ ಹೆಸರನ್ನು ಅಳಿಸಿ ಹಾಕಲಾಗುವುದು ಎಂದು ಹೇಳಿದರು. 

ಇದನ್ನೂ ಓದಿ: ಹಿರಿಯ ಜಾನಪದ ಕಲಾವಿದ, ಗಾಯಕ ಬಸಲಿಂಗಯ್ಯ ಹಿರೇಮಠ ನಿಧನ: ಸಿಎಂ ಸಂತಾಪ

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಶರ್ಮಾ, "ಆರ್ಟಿಕಲ್ 370 ರದ್ದಾದ ರೀತಿಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಯಿತು...ಇಲ್ಲಿಯೂ ನಿಜಾಮರ ಹೆಸರು, ಓವೈಸಿ ಹೆಸರನ್ನು ಅಳಿಸಿ ಹಾಕಲಾಗುತ್ತದೆ... ಆ ದಿನ ಬಹಳ ದೂರವಿಲ್ಲ" ಎಂದು ಹೇಳಿದರು.ಹುಸಿ ಜಾತ್ಯತೀತ ಮತ್ತು ಕೋಮುವಾದಿ ರಾಜಕಾರಣ ಮಾಡುವವರನ್ನು ಭಾರತ ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಬಾಬರ್, ಔರಂಗಜೇಬ್ ಮತ್ತು ನಿಜಾಮರು ದೀರ್ಘಕಾಲ ಬದುಕಲು ಸಾಧ್ಯವಿಲ್ಲ ಎಂದು ಭಾರತದ ಇತಿಹಾಸ ಹೇಳುತ್ತದೆ.ನಿಜಾಮರ ಪರಂಪರೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ ಮತ್ತು ಭಾರತೀಯ ನಾಗರಿಕತೆಯ ಆಧಾರದ ಮೇಲೆ ಹೊಸ ಸಂಸ್ಕೃತಿ ಹೊರಹೊಮ್ಮುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News