ಮಹಾರಾಷ್ಟ್ರದಾದ್ಯಂತ ದೇವಾಲಯಗಳನ್ನು ಪುನಃ ತೆರೆಯುವಂತೆ ವಿಎಚ್‌ಪಿಯಿಂದ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಮತ್ತು ಅದರ ಅಂಗಸಂಸ್ಥೆಯಾದ  ಭಜರಂಗದಳ ಶನಿವಾರ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯಾದ್ಯಂತ ದೇವಾಲಯಗಳನ್ನು ಶೀಘ್ರವಾಗಿ ಪುನಃ ತೆರೆಯುವಂತೆ ಒತ್ತಾಯಿಸಿ ಆಂದೋಲನವನ್ನು ಪ್ರಾರಂಭಿಸಿತು.

Last Updated : Oct 24, 2020, 07:44 PM IST
ಮಹಾರಾಷ್ಟ್ರದಾದ್ಯಂತ ದೇವಾಲಯಗಳನ್ನು ಪುನಃ ತೆರೆಯುವಂತೆ ವಿಎಚ್‌ಪಿಯಿಂದ ಪ್ರತಿಭಟನೆ  title=

ನವದೆಹಲಿ: ವಿಶ್ವ ಹಿಂದೂ ಪರಿಷತ್ ಮತ್ತು ಅದರ ಅಂಗಸಂಸ್ಥೆಯಾದ  ಭಜರಂಗದಳ ಶನಿವಾರ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ರಾಜ್ಯಾದ್ಯಂತ ದೇವಾಲಯಗಳನ್ನು ಶೀಘ್ರವಾಗಿ ಪುನಃ ತೆರೆಯುವಂತೆ ಒತ್ತಾಯಿಸಿ ಆಂದೋಲನವನ್ನು ಪ್ರಾರಂಭಿಸಿತು.

ವರದಿಗಳ ಪ್ರಕಾರ, ವಿಎಚ್‌ಪಿ ಮತ್ತು ಭಜರಂಗದಳದ ಸದಸ್ಯರು ನಾಸಿಕ್‌ನ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ದೇವಸ್ಥಾನದ ಬಳಿ ಡ್ರಮ್‌ಗಳನ್ನು ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಶಿರಡಿ ಮಾತ್ರವಲ್ಲದೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಕೂಡ ಮಹಾರಾಷ್ಟ್ರದಾದ್ಯಂತ ಹಲವಾರು ನಗರಗಳಲ್ಲಿ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರವನ್ನು ಅವಮಾನಿಸುವ ಪಿತೂರಿ ನಡೆಯುತ್ತಿದೆ-ಸಿಎಂ ಉದ್ಧವ್ ಠಾಕ್ರೆ

ನಾಗ್ಪುರದಲ್ಲಿ ವಿಎಚ್‌ಪಿ ಕಾರ್ಯಕರ್ತರು 11 ದೇವಾಲಯಗಳ ಹೊರಗೆ ಪ್ರದರ್ಶನಗಳನ್ನು ನಡೆಸಿದರು ಎಂದು ಸಂಘಟನೆಯ ಪದಾಧಿಕಾರಿ ಗೋವಿಂದ್ ಶೆಂಡೆ ತಿಳಿಸಿದ್ದಾರೆ.ನೀವು ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಮದ್ಯದಂಗಡಿಗಳನ್ನು ಸಹ ತೆರೆದಿದ್ದೀರಿ. ದೇವಾಲಯಗಳನ್ನು ತೆರೆಯಲು ಸಮಸ್ಯೆ ಏನು?" ಎಂದು ಅವರು ಪ್ರಶ್ನಿಸಿದ್ದಾರೆ.

ವಿಎಚ್‌ಪಿ ರಾಜ್ಯದಲ್ಲಿ ದೇವಾಲಯಗಳನ್ನು ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ವಿಫಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಬೆದರಿಕೆ ಹಾಕಿದೆ. ಶೀಘ್ರದಲ್ಲೇ ಸಾರ್ವಜನಿಕರಿಗೆ ಬಾಗಿಲು ತೆರೆಯದಿದ್ದರೆ ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಬೀಗಗಳನ್ನು ಮುರಿಯುವುದಾಗಿ ಹಿಂದೂ ಸಂಘಟನೆ ಎಚ್ಚರಿಸಿದೆ.

Trending News