Lulu Group: ವಿಜಯಪುರದಲ್ಲಿ ₹300 ಕೋಟಿ ಹೂಡಿಕೆ!

World Economic Forum: ಲುಲು ಗ್ರೂಪ್ ಸದ್ಯಕ್ಕೆ ಪ್ರತಿತಿಂಗಳು 250 ಟನ್ನುಗಳಷ್ಟು ಸೀಬೆ ಹಣ್ಣು, ಸಪೋಟ, ಹಸಿ ಮೆಣಸಿನಕಾಯಿ, ಬೆಂಡೇಕಾಯಿ, ಬದನೆಕಾಯಿ ಇತ್ಯಾದಿಗಳನ್ನು ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ, ದ್ರಾಕ್ಷಿ, ಹತ್ತಿ, ಕುಸುಬೆ, ಎಳ್ಳು, ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Written by - Zee Kannada News Desk | Last Updated : Jan 17, 2024, 03:55 PM IST
  • ವಿಜಯಪುರದಲ್ಲಿ ಲುಲು, ಬಿಎಲ್ ಆಗ್ರೋದಿಂದ ಭಾರೀ ಮೊತ್ತದ ಹೂಡಿಕೆ
  • ವಿಜಯಪುರದಲ್ಲಿ ₹300 ಕೋಟಿ ಹೂಡಿಕೆ ಮಾಡಲಿರುವ ಲುಲು ಗ್ರೂಪ್
  • ವಿಶ್ವ ಆರ್ಥಿಕ ಸಮಾವೇಶದಲ್ಲಿ ಹಲವು ಒಡಂಬಡಿಕೆಗೆ ಸಹಿ ಹಾಕಿದ ಎಂ.ಬಿ. ಪಾಟೀಲ್
Lulu Group: ವಿಜಯಪುರದಲ್ಲಿ ₹300 ಕೋಟಿ ಹೂಡಿಕೆ! title=
ವಿಜಯಪುರದಲ್ಲಿ ₹300 ಕೋಟಿ ಹೂಡಿಕೆ!

ದಾವೋಸ್ (ಸ್ವಿರ್ಟರ್ಲೆಂಡ್): ಗುಮ್ಮಟ ನಗರಿ ವಿಜಯಪುರದಲ್ಲಿ ಹೆಸರಾಂತ ಲುಲು ಗ್ರೂಪ್ ಮತ್ತು ಬಿಎಲ್ ಆಗ್ರೋ ಕಂಪನಿಗಳು ಆಹಾರ ಸಂಸ್ಕರಣೆ ವಲಯದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆ ಮಾಡಿಕೊಂಡಿವೆ.

ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡಿರುವ ವಿಜಯಪುರ ಜಿಲ್ಲಾ ಸಚಿವರೂ ಆಗಿರುವ ಎಂ.ಬಿ.ಪಾಟೀಲ್ ಅವರ ಸಮ್ಮುಖದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಲುಲು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಮೂಲಕ ಪಾಟೀಲ್ ಅವರು ತವರು ಜಿಲ್ಲೆಗೆ ಸಿಹಿಸುದ್ದಿ ನೀಡಿದ್ದಾರೆ.

ಇದನ್ನೂ ಓದಿ: ಪ್ರಮಾಣಪತ್ರ ಸಲ್ಲಿಸುವಾಗ ಕ್ರಿಮಿನಲ್‌ ಕೇಸ್‌ಗಳ ಮಾಹಿತಿ ನೀಡಬೇಕು: ಹೈಕೋರ್ಟ್

'ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಈಜಿಪ್ಟ್‍ನಲ್ಲಿ ಹೆಸರು ಮಾಡಿರುವ ಲುಲು ಗ್ರೂಪ್ 250 ಮಾಲ್‍ಗಳನ್ನು ಹೊಂದಿದೆ. ಈಗ ಈ  ಕಂಪನಿಯು ವಿಜಯಪುರದಲ್ಲಿ 300 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ಹೇಳಿದರು.

ಲುಲು ಗ್ರೂಪ್ ಸದ್ಯಕ್ಕೆ ಪ್ರತಿತಿಂಗಳು 250 ಟನ್ನುಗಳಷ್ಟು ಸೀಬೆ ಹಣ್ಣು, ಸಪೋಟ, ಹಸಿ ಮೆಣಸಿನಕಾಯಿ, ಬೆಂಡೇಕಾಯಿ, ಬದನೆಕಾಯಿ ಇತ್ಯಾದಿಗಳನ್ನು ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ, ದ್ರಾಕ್ಷಿ, ಹತ್ತಿ, ಕುಸುಬೆ, ಎಳ್ಳು, ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಇದನ್ನೂ ಓದಿ: ನಕಲಿ ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಕರ ಜತೆ ಬಿಜೆಪಿ ನಂಟು: ಪ್ರಿಯಾಂಕ್ ಖರ್ಗೆ ಆರೋಪ

ವಿಜಯಪುರದಲ್ಲಿ ಜಮೀನು, ನೀರು, ವಿದ್ಯುತ್ ಕೊರತೆ ಇಲ್ಲ. ಸದ್ಯದಲ್ಲೇ ವಿಮಾನ ನಿಲ್ದಾಣವೂ ಉದ್ಘಾಟನೆ ಆಗಲಿದೆ. ಇವೆಲ್ಲವನ್ನೂ ಪರಿಗಣಿಸಿ ವಿಜಯಪುರದಲ್ಲೇ ಹೂಡಿಕೆ ಮಾಡುವಂತೆ ಸಮೂಹದ ಮುಖ್ಯಸ್ಥ ಯೂಸುಫ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ ಮೂಲದ ಬಿಎಲ್ ಗ್ರೂಪ್ ಕಂಪನಿಯು ದಕ್ಷಿಣ ಭಾರತದಲ್ಲಿ ತನ್ನ ಆಹಾರ ಸಂಸ್ಕರಣ ಘಟಕ ತೆರೆಯಲು ತೀರ್ಮಾನಿಸಿದೆ. ಇದಕ್ಕಾಗಿ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ. ಈ ಸಂಬಂಧ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಪಾಟೀಲ್ ಅವರು ವಿವರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News