ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮಗೆ ಈ ಕನಸುಗಳು ಬಿದ್ರೆ ಅಷ್ಟೈಶ್ವರ್ಯ ಪ್ರಾಪ್ತಿ..!

ಆಭರಣಗಳ ಕನಸು: ನಿಮಗೆ ದಿಪಾವಳಿ ಸಮಯದಲ್ಲಿ ಅಭರಣಗಳ ಕನಸು ಬಿದ್ದರೆ ಅದು ಬಹಳ ಶುಭ ಸಂಕೇತವಾಗಿರುತ್ತದೆ. ಇದರರ್ಥ ನೀವು ಶೀಘ್ರದಲ್ಲೇ ಎಲ್ಲಿಂದಲಾದರೂ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಬಹುಶಃ ನೀವು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದ ಕೆಲಸವನ್ನು ಈಗ ಪೂರ್ಣಗೊಳಿಸಬಹುದು.

Last Updated : Nov 7, 2020, 05:54 PM IST
  • ಕನಸಿನಲ್ಲಿ ಅಮೃತ ಕಲಾಶ ಕೈಯಲ್ಲಿ ಹಿಡಿದ ಧನ್ವಂತರಿ ವೈದ್ಯರನ್ನ ನೋಡಿದರೆ ತಾಯಿ ಲಕ್ಷ್ಮಿಯ ರಕ್ಷಣೆಯಲ್ಲಿರುತ್ತೀರಿ
  • ಸ್ವಸ್ಥಿಕ್ ಕನಸು ಕಂಡರೆ ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ
  • ಕನಸಿನಲ್ಲಿ ಕುಲದೇವತೆ ದರ್ಶನ, ನಿಮಗೆ ಸಾಧನೆಯ ಸಂಕೇತವಾಗಿರುತ್ತದೆ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮಗೆ ಈ ಕನಸುಗಳು ಬಿದ್ರೆ ಅಷ್ಟೈಶ್ವರ್ಯ ಪ್ರಾಪ್ತಿ..! title=

ದೀಪಾವಳಿಯ ಶುಭ ಸಂದರ್ಭದಲ್ಲಿ, ನಿಮ್ಮ ಕನಸಿನಲ್ಲಿ ಅಮೃತ ಕಲಾಶವನ್ನು ಕೈಯಲ್ಲಿ ಹಿಡಿದ ಧನ್ವಂತರಿ ವೈದ್ಯರನ್ನು ನೋಡಿದರೆ, ಈ ಕನಸನ್ನು ಅತ್ಯಂತ ಶುಭ ಕನಸೆಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಶೀಘ್ರದಲ್ಲೇ ಅವರ ಆರೋಗ್ಯದ ತೊಂದರೆಗಳು ನಿವಾರಣೆಯಾಗುತ್ತವೆ ಮತ್ತು ನೀವು ತಾಯಿ ಲಕ್ಷ್ಮಿಯ ರಕ್ಷಣೆಯಲ್ಲಿರುತ್ತೀರಿ.

ಫಸಲಿನ ಕನಸು: ನಿಮ್ಮ ಕನಸಿನಲ್ಲಿ ಗೋಧಿ ಮತ್ತು ಭತ್ತದ ಬೆಳೆಯ ಫಸಲನ್ನು ನೀವು ನೋಡಿದರೆ, ಅದನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಇದರರ್ಥ ಮುಂಬರುವ ಸಮಯದಲ್ಲಿ ನೀವು ಶೀಘ್ರದಲ್ಲೇ ಹಣವನ್ನು ಪಡೆಯುತ್ತೀರಿ ಮತ್ತು ಅದು ಎಲ್ಲಿಂದಲಾದರೂ ಸರಿ ಹಣವು ನಿಮ್ಮ ಕೈಸೇರುತ್ತದೆ. ಈ ಹಣದಿಂದ, ನೀವು ಅನೇಕ ಕಾರ್ಯಗಳನ್ನು ಸುಲಭವಾಗಿ ಮಾಡುತ್ತೀರಿ. 

ಆಭರಣಗಳ ಕನಸು: ನಿಮಗೆ ದೀಪಾವಳಿ (Diwali) ಸಮಯದಲ್ಲಿ ಅಭರಣಗಳ ಕನಸು ಬಿದ್ದರೆ ಅದು ಬಹಳ ಶುಭ ಸಂಕೇತವಾಗಿರುತ್ತದೆ. ಇದರರ್ಥ ನೀವು ಶೀಘ್ರದಲ್ಲೇ ಎಲ್ಲಿಂದಲಾದರೂ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಬಹುಶಃ ನೀವು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದ ಕೆಲಸವನ್ನು ಈಗ ಪೂರ್ಣಗೊಳಿಸಬಹುದು. 

ಕಮಲದ ಹೂವಿನ ಕನಸು: ನೀವು ಉದ್ಯಮಿ ಅಥವಾ ನೌಕರಿಯಾಗಿದ್ದರೆ ನಿಮ್ಮ ಕನಸಿನಲ್ಲಿ ತಾವರೆ ಹೂವು ಕಾಣಿಸಿಕೊಳ್ಳುವುದು ನಿಮಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಕೈಯಲ್ಲಿ ಕಮಲದ ಹೂವಿ ಇರುವಂತೆ ಕನಸು ಬೀಳುವುದು ನಿಮ್ಮ ಕೈಯಲ್ಲಿ ಹಣವನ್ನು ತೆಗೆದುಕೊಳ್ಳುವುದಕ್ಕೆ ಸಮ. ಇದು ನಿಮಗೆ ದೊಡ್ಡ ಲಾಭವನ್ನು ಸೂಚಿಸುತ್ತದೆ ಎನ್ನುವ ನಂ ಬಿಕೆಯಿದೆ. ಮತ್ತು ಇದು ಉದ್ಯೋಗದಲ್ಲಿರುವವರಿಗೆ ಪದೋನ್ನತಿಯನ್ನು ಕೂಡ ಸೂಚಿಸುತ್ತದೆ. 

ಕನಸಿನಲ್ಲಿ ಕುಲದೇವತೆ ದರ್ಶನ: ನಿಮ್ಮ ಕನಸಿನಲ್ಲಿ (Dream) ನೀವು ನಿಮ್ಮ ಕುಲದೇವತೆಯ ದರ್ಶನಗಳನ್ನು ಪಡೆಯುತ್ತಿದ್ದರೆ ಅದು ನಿಮ್ಮ ಬಯಕೆಯ ಯಾವುದೇ ಆಸೆ ಶೀಘ್ರದಲ್ಲೇ ಈಡೇರಲಿದೆ ಎಂಬುದನ್ನು ಸೂಚಿಸುತ್ತದೆ. ಮೊದಲನೇಯದಾಗಿ ನೀವು ಶೀಘ್ರದಲ್ಲೇ ಉತ್ತಮ ಕೆಲಸವನ್ನು ಪಡೆಯಲಿದ್ದೀರಿ ಅಥವಾ ಶೀಘ್ರದಲ್ಲೇ ನೀವು ನೆಚ್ಚಿನ ಜೀವನ ಸಂಗಾತಿಯನ್ನು ಪಡೆಯಬಹುದು. ಕುಲದೇವತೆಯ ಕನಸು ನಿಮಗೆ ಸಾಧನೆಯ ಸಂಕೇತವನ್ನು ನೀಡುತ್ತದೆ.

ಹಾಲು ಕರೆಯುತ್ತಿರುವ ಕನಸು: ಕನಸಿನಲ್ಲಿ ತನ್ನ ಕರು ಜೊತೆ ಹಸುವನ್ನು ನೋಡುವುದು ಅಥವಾ ಯಾರಾದರೂ ಹಾಲುಕರೆಯುವ ಹಸುವನ್ನು ನೋಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಹಸುವಿನ ಕನಸು ನಿಮ್ಮ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಸೂಚಿಸುತ್ತದೆ. ಕನಸಿನಲ್ಲಿ ಹಸುವಿನ ಹಾಲು ಕರೆಯುವುದನ್ನು ಯಾರಾದರೂ ನೋಡಿದರೆ, ಅದು ನಿಮ್ಮ ಮನೆಯಲ್ಲಿ ಹಣದ ಅಭಿವೃದ್ಧಿಯನ್ನು ಸೂಚಿಸುತ್ತದೆ. 

ಗುಲಾಬಿ ಹೂವಿನ ಕನಸು: ಯಾರಾದರೂ ಕನಸಿನಲ್ಲಿ ಗುಲಾಬಿ ಹೂವನ್ನು ನೋಡಿದರೆ, ಮಾಲಕ್ಷ್ಮಿ ಅವರಿಗೆ ದಯೆ ತೋರಿಸುತ್ತಾಳೆ ಮತ್ತು ಆಕೆಯು ಆಶೀರ್ವಾದವನ್ನು ನೀಡುತ್ತಾಳೆ. ಯಾಕೆಂದರೆ ತಾಯಿ ಲಕ್ಷ್ಮಿಯನ್ನು ಗುಲಾಬಿ ಹೂ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ನಿಮ್ಮ ಕನಸಿನಲ್ಲಿ ಗುಲಾಬಿಯನ್ನು ನೋಡುವುದು ಆಸೆಯ ನೆರವೇರಿಕೆಯನ್ನು ಸೂಚಿಸುತ್ತದೆ.

ದೇವಾಲಯಕ್ಕೆ ಭೇಟಿ ನೀಡಿದ ಕನಸು: ನಿಮ್ಮ ಕನಸಿನಲ್ಲಿ ಯಾವುದೋ ದೇವಾಲಯದ (Temple) ದೃಶ್ಯ ಕಂಡರೆ ಅಥವಾ ನೀವು ಯಾವಯದೋ ದೇವಾಲಯಕ್ಕೆ ಭೇಟಿ ನೀಡಿದಂತೆ ಕನಸು ಕಂಡರೆ, ನೀವು ಬಹಳ ಸಮಯದಿಂದ ಮಾಡಲು ಪ್ರಯತ್ನಿಸುತ್ತಿದ್ದ ಕೆಲಸಕ್ಕೆ ಇದೀಗ ಸರಿಯಾದ ಸಮಯ ಬಂದಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕನಸಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವುದು ದೇವದರ್ಶನದಂತೆಯೇ ಇರುತ್ತದೆ.

ದೊಡ್ಡ ಬಂಗಲೆಯ ಕನಸು: ಒಬ್ಬ ವ್ಯಕ್ತಿಯು ದೊಡ್ಡ ಅರಮನೆಯ ಕನಸು ಕಂಡರೆ, ಅಥವಾ ದೊಡ್ಡ ಬಂಗಲೆಯ ಕನಸು ಕಂಡರೆ ಅವನ ದಿನಗಳು ಬದಲಾಗಲಿವೆ ಮತ್ತು ಅವನ ಬಡತನ ದೂರಾಗುತ್ತದೆ ಎಂದು ಅವನು ಅರ್ಥಮಾಡಿಕೊಳ್ಳಬೇಕು. ಅವರು ಯಾವುದೇ ವ್ಯವಹಾರದಿಂದ ದೊಡ್ಡ ಲಾಭವನ್ನು ಪಡೆಯಬಹುದು. ಅಥವಾ ಅವನು ದೊಡ್ಡ ಮೊತ್ತದ ಸಂಪತ್ತನ್ನು ಎಲ್ಲಿಂದಲಾದರೂ ಪಡೆಯಬಹುದು.

ಸ್ವಸ್ಥಿಕ್ ದ ಕನಸು: ಸ್ವಪ್ನ ಶಾಸ್ತ್ರದ ಪ್ರಕಾರ, ಸ್ವಸ್ಥಿಕವನ್ನು ಬಹಳ ಶುಭ ಮತ್ತು ಉತ್ತಮ ಚಿಹ್ನೆ ಎಂದು ಪರಿಗಣಿಸಲಾಗಿದೆ. ಸ್ವಸ್ಥಿಕಕ್ಕೆ ಭೇಟಿ ನೀಡುವುದು ನಿಮ್ಮ ಕುಟುಂಬದಲ್ಲಿ ಸಮೃದ್ಧಿಯ ಸಂಕೇತವಾಗಿದೆ. ಅಂದರೆ, ಕುಟುಂಬ ಸದಸ್ಯರ ನಡುವೆ ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ.
 

Trending News