World Cup 2023: ವಿಶ್ವಕಪ್ ಟೂರ್ನಿಯಿಂದ ಈ ಭಾರತೀಯ ಬೌಲರ್ ಔಟ್..?

ICC World Cup 2023: ಏಷ್ಯಾಕಪ್ ಟೂರ್ನಿಯಿಂದ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿರುವ ವಿಚಾರವಾಗಿ ಮೌನ ಮುರಿದಿರುವ ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ.

Written by - Puttaraj K Alur | Last Updated : Sep 14, 2023, 09:47 PM IST
  • ಏಷ್ಯಾಕಪ್ ಟೂರ್ನಿಯಿಂದ ಮೊಹಮ್ಮದ್ ಶಮಿ ಕೈಬಿಟ್ಟಿರುವ ವಿಚಾರ
  • ಮೊಹಮ್ಮದ್ ಶಮಿಯಂತಹ ಬೌಲರ್‍ನನ್ನು ಕೈಬಿಡುವುದು ಸುಲಭವಲ್ಲ
  • ಮೌನ ಮುರಿದ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ
World Cup 2023: ವಿಶ್ವಕಪ್ ಟೂರ್ನಿಯಿಂದ ಈ ಭಾರತೀಯ ಬೌಲರ್ ಔಟ್..? title=
World Cup 2023

ನವದೆಹಲಿ: ಜಸ್ಪ್ರೀತ್ ಬುಮ್ರಾ ಮರಳುವಿಕೆಯಿಂದ ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗಿದೆ. ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್‌ಗೆ ನಾಲ್ವರು ಸಂಪೂರ್ಣ ಫಿಟ್ ಆಗಿರುವ ವೇಗದ ಬೌಲರ್‌ಗಳನ್ನು ಹೊಂದುವುದು ತಂಡಕ್ಕೆ ಉತ್ತಮವೆಂದು ಭಾರತದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಗುರುವಾರ ಹೇಳಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಇತ್ತೀಚಿನ ಐರ್ಲೆಂಡ್ ಪ್ರವಾಸದ ಸಮಯದಲ್ಲಿ ಸುದೀರ್ಘ ಗಾಯದ ನಂತರ ಪುನರಾಗಮನ ಮಾಡಿದರು. ನಂತರ ಏಷ್ಯಾಕಪ್‌ನಲ್ಲಿ ಅವರು ತಮ್ಮ ಬೌಲಿಂಗ್ ಕೈಚಳಕ ತೋರಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಭಾರತದ ಅಂತಿಮ 'ಸೂಪರ್ ಫೋರ್' ಪಂದ್ಯಕ್ಕೂ ಮೊದಲು ಮಾತನಾಡಿರುವ ಪಾರಸ್ ಮಾಂಬ್ರೆ, ‘ನಾವು ಬುಮ್ರಾ ಅವರ ಪ್ರಗತಿಯನ್ನು ಗಮನಿಸುತ್ತಿದ್ದೇವೆ. NCA (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಮತ್ತು ಅವರ ವರದಿಯಿಂದ ಸಂತೋಷಪಡುತ್ತೇವೆ’ ಎಂದು ಹೇಳಿದ್ದಾರೆ.

ತಂಡದಿಂದ ಈ ಬೌಲರ್ ಔಟ್..!

‘ಈಗ ನಮ್ಮಲ್ಲಿ ನಾಲ್ವರು ಅತ್ಯುತ್ತಮ ಬೌಲರ್‌ಗಳಿದ್ದಾರೆ. ಇಂತಹ ಆಯ್ಕೆಗಳನ್ನು ಹೊಂದಿರುವುದು ಯಾವಾಗಲೂ ಒಳ್ಳೆಯದು. ಭಾರತದ ಮೊದಲ ಆಯ್ಕೆಯ ವೇಗದ ಬೌಲಿಂಗ್ ದಾಳಿಯಲ್ಲಿ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ. ಇದರಿಂದ ಟೀಂ ಇಂಡಿಯಾ ಮ್ಯಾನೇಜ್‍ಮೆಂಟ್ ಆಡುವ 11ರಿಂದ ಮೊಹಮ್ಮದ್ ಶಮಿಯನ್ನು ಬೆಂಚ್‌ನಲ್ಲಿರಿಸಲು ಒತ್ತಾಯಿಸಲ್ಪಟ್ಟಿದೆ. ಶಮಿಯಂತಹ ಬೌಲರ್ ಅನ್ನು ತಂಡದಿಂದ ಹೊರಗಿಡುವುದು ಅಷ್ಟು ಸುಲಭವಲ್ಲ’ವೆಂದು ಮಾಂಬ್ರೆ ಹೇಳಿದ್ದಾರೆ. ಶಮಿ ಹೊಂದಿರುವ ಅನುಭವ ಮತ್ತು ದೇಶಕ್ಕಾಗಿ ಅವರು ತೋರಿರುವ ಪ್ರದರ್ಶನಗಳು ಅದ್ಭುತವಾಗಿವೆ. ಹೀಗಾಗಿ ಅವರನ್ನು ತಂಡದಿಂದ ಹೊರಗಿಡುವುದು ಸುಲಭವಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: SL vs PAK: ಪಂದ್ಯ ಆಡದೆಯೇ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿ ಪಾಕ್ ! ಯಾವ ಲೆಕ್ಕಾಚಾರದಲ್ಲಿ ಇಲ್ಲಿದೆ ನೋಡಿ

ಕೋಚ್ ಹೇಳಿಕೆ ಇದ್ದಕ್ಕಿದ್ದಂತೆ ಕೋಲಾಹಲ ಸೃಷ್ಟಿಸಿದೆ!

ಇದು ಕಷ್ಟದ ವಿಚಾರ, ಆದರೆ ತಂಡದ ನಿರ್ಧಾರದ ಬಗ್ಗೆ ಸಂಬಂಧಪಟ್ಟ ಆಟಗಾರನಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಹೇಳಿದ್ದಾರೆ. ‘ನಾವು ಆಟಗಾರನಿಗೆ ಅದರ ಬಗ್ಗೆ ಹೇಳುವಲ್ಲಿ ತುಂಬಾ ಸ್ಪಷ್ಟವಾಗಿರುತ್ತೇವೆ. ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಆಟಗಾರರಿಗೆ ಅರಿವಿದೆ. ಇದು ತಂಡದ ಲಾಭಕ್ಕಾಗಿ ಮಾತ್ರವೆಂದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬೌಲರ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ಕಂಡು ಮಾಂಬ್ರೆ ತುಂಬಾ ಸಂತೋಷಪಟ್ಟಿದ್ದಾರೆ. ಹಾರ್ದಿಕ್ ಮುನ್ನಡೆಯುತ್ತಿರುವ ರೀತಿ ನನಗೆ ತುಂಬಾ ಖುಷಿ ತಂದಿದೆ ಎಂದಿದ್ದಾರೆ. ನಾವು ಅವರ ಕೆಲಸದ ಹೊರೆಯನ್ನು ನೋಡುತ್ತಿದ್ದೇವೆ ಮತ್ತು ಅವರು ಫಿಟ್ ಆಗಿ ಉಳಿದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಒಮ್ಮೆ ಅವರು ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದರೆ, ಅವರು ವಿಭಿನ್ನ ರೀತಿಯ ಬೌಲರ್ ಆಗಲಿದ್ದು, ತಂಡಕ್ಕೆ ಬಲ ತುಂಬಲಿದ್ದಾರೆ. ಏಷ್ಯಾಕಪ್ ಟೂರ್ನಿಯಿಂದ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿರುವ ವಿಚಾರವಾಗಿ ಮೌನ ಮುರಿದಿರುವ ಮಾಂಬ್ರೆ ಹೇಳಿಕೆ ಇದೀಗ ಕೋಲಾಹಲ ಸೃಷ್ಟಿಸಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್: ಗಾಯದ ಸಮಸ್ಯೆಯಿಂದ ಕ್ರಿಕೆಟ್’ನಿಂದ ದೂರ ಉಳಿಯಲಿದ್ದಾರೆ ಈ ಆಟಗಾರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News