“ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆ” ಎಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶೋಯೆಬ್ ಅಕ್ತರ್

Asia Cup 2023 Super-4 Match: ಶೋಯೆಬ್ ಅಖ್ತರ್ ಅವರು ಸಹ ಇದೇ ಪಂದ್ಯದ ಸಂದರ್ಭದಲ್ಲಿ ವೈರಲ್ ಆದ ಮೀಮ್ಸ್’ಗಳ ಬಗ್ಗೆ ಮತ್ತು ಭಾರತದ ಮೇಲೆ ಹೊರಿಸಲಾದ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಮಾತನಾಡಿದ್ದಾರೆ.

Written by - Bhavishya Shetty | Last Updated : Sep 14, 2023, 12:20 PM IST
    • ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಸೆಪ್ಟೆಂಬರ್ 12 ರಂದು ನಡೆದಿತು
    • ಶೋಯೆಬ್ ಅಖ್ತರ್ ಅವರ ಈ ವೈರಲ್ ವಿಡಿಯೋ ಇದೇ ಪಂದ್ಯದ ಕುರಿತಾಗಿದೆ.
    • ಮ್ಯಾಚ್ ಫಿಕ್ಸಿಂಗ್ ಬಗ್ಗೆ ಕೆಲವೊಂದು ಮೀಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭವಾಗಿದ್ದವು.
“ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆ” ಎಂದವರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರ ಕೊಟ್ಟ ಶೋಯೆಬ್ ಅಕ್ತರ್  title=
Shoaib Akhtar

Asia Cup 2023 Super-4 Match: ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಏಷ್ಯಾಕಪ್‌’ನ ಸೂಪರ್-4ರಲ್ಲಿ ಫೈನಲ್ ತಲುಪಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮತ್ತು ಎರಡನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿತು.

ಇದನ್ನೂ ಓದಿ:  ನಿವೃತ್ತಿ ಹಿಂಪಡೆದ ಸ್ಟಾರ್ ಕ್ರಿಕೆಟರ್ ಸಿಡಿಸಿದ ಭರ್ಜರಿ ಶತಕ! ಈತ ಕೊಹ್ಲಿಯ ನೆಚ್ಚಿನ ಕ್ರಿಕೆಟಿಗ

ಒಂದು ವೇಳೆ ಎರಡನೇ ಪಂದ್ಯದಲ್ಲಿ ಭಾರತ ಸೋತಿದ್ದರೆ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇತ್ತು. ಇದೀಗ ಈ ಪಂದ್ಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ ಈ ಪಂದ್ಯ ಸೆಪ್ಟೆಂಬರ್ 12 ರಂದು ನಡೆದಿತ್ತು. ಇನ್ನು ಶೋಯೆಬ್ ಅಖ್ತರ್ ಅವರು ಸಹ ಇದೇ ಪಂದ್ಯದ ಸಂದರ್ಭದಲ್ಲಿ ವೈರಲ್ ಆದ ಮೀಮ್ಸ್’ಗಳ ಬಗ್ಗೆ ಮತ್ತು ಭಾರತದ ಮೇಲೆ ಹೊರಿಸಲಾದ ಮ್ಯಾಚ್ ಫಿಕ್ಸಿಂಗ್ ಆರೋಪದ ಬಗ್ಗೆ ಮಾತನಾಡಿದ್ದಾರೆ.

ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿದೆಯಾ?

ಇನ್ನು ಶೋಯೆಬ್ ಅಖ್ತರ್ ಮೀಮ್ಸ್ ಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌’ನಲ್ಲಿ ಮಾತನಾಡಿದ್ದು, “ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. ಭಾರತ ಪಂದ್ಯವನ್ನು ಫಿಕ್ಸ್ ಮಾಡಿದೆ ಎಂದು ನನಗೆ ಮೀಮ್ಸ್ ಮತ್ತು ಸಂದೇಶಗಳು ಬರುತ್ತಿವೆ. ಅವರು ಉದ್ದೇಶಪೂರ್ವಕವಾಗಿ ಪಾಕಿಸ್ತಾನವನ್ನು ಹೊರಹಾಕಲು ಸೋಲುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ಆದ್ರೆ ನೀವೆಲ್ಲಾ ಚೆನ್ನಾಗಿದ್ದೀರಾ? ಅವರು (ಭಾರತ) ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ವೆಲ್ಲಲಾಗೆ ಮತ್ತು ಅಸಲಂಕಾ ಉತ್ತಮ ಬೌಲಿಂಗ್ ಮಾಡಿದ್ದಾರೆ. ಆ 20 ವರ್ಷದ ಮಗು (ವೆಲ್ಲಲಾಗೆ)ವನ್ನು ನೋಡಿದ್ದೀರಾ? ಆತ ರನ್ ಕೂಡ ಗಳಿಸಿದ್ದಾನೆ. ಆದರೆ ನನಗೆ ಉದ್ದೇಶಪೂರ್ವಕವಾಗಿ ಅವರು ಮ್ಯಾಚ್ ಸೋಲುತ್ತಿದ್ದಾರೆ, ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದೆಲ್ಲಾ ಫೋನ್ ಬರುತ್ತಿದೆ” ಎಂದು ಸಿಟ್ಟಿನಿಂದ ಹೇಳಿದ್ದಾರೆ.

ಇದನ್ನೂ ಓದಿ: ಗೃಹಪ್ರವೇಶಕ್ಕೆ ಬರಬೇಕಿತ್ತು ಮೇಜರ್ !  ಹೊಸ ಮನೆ ತಲುಪಿದ್ದು ಮಾತ್ರ  ಪಾರ್ಥಿವ ಶರೀರ 

ಶೋಯೆಬ್ ಅಖ್ತರ್ ಮಾತು ಮುಂದುವರೆಸಿ, ”ಅವರು (ಭಾರತ) ಯಾಕೆ ಸೋಲುತ್ತಾರೆ, ಹೇಳಿ? ಅವರಿಗೆ ಫೈನಲ್‌’ಗೆ ಹೋಗಲು ಆಸೆಯಿದೆ. ವಿನಾಕಾರಣ ಮೀಮ್ಸ್ ಮಾಡುತ್ತಿದ್ದೀರಿ. ಇದು ಭಾರತದ ಉತ್ತಮ ಹೋರಾಟವಾಗಿತ್ತು. ಕುಲದೀಪ್ ಆಡಿದ ರೀತಿ ಅದ್ಭುತವಾಗಿತ್ತು. ಜಸ್ಪ್ರೀತ್ ಬುಮ್ರಾ ಅವರನ್ನು ನೋಡಿ” ಎನ್ನುತ್ತಾ ಮುಟ್ಟಿನೋಡಿಕೊಳ್ಳುವಂತೆ ಹೇಳಿಕೆ ಕೊಟ್ಟಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News