ಸೌತ್ ಆಫ್ರಿಕಾ ವಿರುದ್ಧ ಸೋತ ಪಾಕಿಸ್ತಾನಕ್ಕೆ ಹರ್ಭಜನ್ ಸಿಂಗ್ ಬೆಂಬಲ! ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ?

Harbhajan Singh on ICC Rules and DRS: ಐಸಿಸಿಯ ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮಗಳಿಂದ ಪಾಕಿಸ್ತಾನ ಸೋತಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Written by - Bhavishya Shetty | Last Updated : Oct 28, 2023, 07:18 PM IST
    • ಐಸಿಸಿಯ ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮಗಳಿಂದ ಪಾಕಿಸ್ತಾನ ಸೋತಿದೆ
    • ಐಸಿಸಿ ಈ ನಿಯಮವನ್ನು ಬದಲಾಯಿಸಬೇಕಾಗಿದೆ ಎಂದ ಹರ್ಭಜನ್ ಸಿಂಗ್
    • ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್’ಗೆ ಸೋಲು
ಸೌತ್ ಆಫ್ರಿಕಾ ವಿರುದ್ಧ ಸೋತ ಪಾಕಿಸ್ತಾನಕ್ಕೆ ಹರ್ಭಜನ್ ಸಿಂಗ್ ಬೆಂಬಲ! ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ?  title=
harbhajan singh

Harbhajan Singh: ಅಕ್ಟೋಬರ್ 27ರಂದು ನಡೆದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕ್ ಸೋಲು ಕಂಡಿದೆ. ಆದರೆ ಈ ಸೋಲಿನ ಬಳಿಕ ಭಾರತದ ಮಾಜಿ ಬೌಲರ್ ಹರ್ಭಜನ್ ಸಿಂಗ್ ಐಸಿಸಿ ನಿಯಮ ಮತ್ತು ಅಂಪೈರಿಂಗ್’ನ್ನು ಕಟುವಾಗಿ ಟೀಕಿಸಿದ್ದಾರೆ. ಐಸಿಸಿಯ ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮಗಳಿಂದ ಪಾಕಿಸ್ತಾನ ಸೋತಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ: ಸಿರಾಜ್ ಸ್ಥಾನದಲ್ಲಿ ಈ ಸ್ಪಿನ್ನರ್’ಗೆ ಅವಕಾಶ

ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌’ನ 46 ನೇ ಓವರ್‌’ನ ಕೊನೆಯ ಎಸೆತದಲ್ಲಿ ತಬ್ರೇಜ್ ಶಮ್ಸಿ ಎಲ್‌ಬಿಡಬ್ಲ್ಯೂ ಆಗಿ ಡಿಕ್ಲೇರ್ ಮಾಡಲು ಸಾಕಷ್ಟು ಮನವಿ ಮಾಡಲಾಗಿತ್ತು. ಅಂಪೈರ್ ಶಮ್ಸಿ ಔಟ್ ಅಲ್ಲ ಎಂದು ಹೇಳಿದಾಗ, ಪಾಕ್ ನಾಯಕ ಬಾಬರ್ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲಿ ಚೆಂಡು ಲೆಗ್ ಸ್ಟಂಪ್‌’ಗೆ ಸ್ವಲ್ಪ ಬಡಿಯುತ್ತಿರುವುದು ಕಂಡುಬಂದಿದೆ. ಅಂದರೆ ಇಲ್ಲಿ ಅಂಪೈರ್ ಕಾಲ್ ನೀಡಲಾಯಿತು. ಆಗ ಫೀಲ್ಡ್ ಅಂಪೈರ್ ನಿರ್ಧಾರವು ನಾಟ್ ಔಟ್ ಆಗಿದ್ದರಿಂದ ದಕ್ಷಿಣ ಆಫ್ರಿಕಾಗೆ ಜೀವದಾನ ಸಿಕ್ಕಿದಂತಾಯಿತು.

ಈ ವಿಕೆಟ್ ಸಿಕ್ಕಿದ್ದರೆ ಇಲ್ಲಿಗೆ ಪಂದ್ಯ ಮುಕ್ತಾಯವಾಗುತ್ತಿತ್ತು ಮತ್ತು ಪಾಕಿಸ್ತಾನ ತಂಡ 7 ರನ್‌’ಗಳಿಂದ ಪಂದ್ಯ ಗೆಲ್ಲುತ್ತಿತ್ತು. ಏಕೆಂದರೆ ಈ ವೇಳೆಗೆ ದಕ್ಷಿಣ ಆಫ್ರಿಕಾ 9 ವಿಕೆಟ್ ಕಳೆದುಕೊಂಡು 263 ರನ್ ಗಳಿಸಿತ್ತು.

ಇದನ್ನೂ ಓದಿ: ಅಕ್ಟೋಬರ್ 31ರವರೆಗೆ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ: ಭಾರೀ ಗುಡುಗು-ಮಿಂಚು ಸಹಿತ ಬಿರುಗಾಳಿ

ಹರ್ಭಜನ್ ಹೇಳಿದ್ದೇನು?

ಹರ್ಭಜನ್ ತಮ್ಮ ಟ್ವೀಟ್’ನಲ್ಲಿ, 'ಕೆಟ್ಟ ಅಂಪೈರಿಂಗ್ ಮತ್ತು ಕೆಟ್ಟ ನಿಯಮಗಳು ಪಾಕಿಸ್ತಾನಕ್ಕೆ ಸಂಕಷ್ಟ ತಂದಿದೆ. ಐಸಿಸಿ ಈ ನಿಯಮವನ್ನು ಬದಲಾಯಿಸಬೇಕಾಗಿದೆ. ಚೆಂಡು ಸ್ಟಂಪ್‌’ಗೆ ತಗುಲಿದರೆ ಮುಗಿಯಿತು. ಮೈದಾನದಲ್ಲಿರುವ ಅಂಪೈರ್ ಔಟ್ ನೀಡಿದರೂ ನೀಡದಿದ್ದರೂ ಅದನ್ನು ಔಟ್ ಎಂದು ಪರಿಗಣಿಸಬೇಕು. ಹಾಗಾಗದಿದ್ದರೆ ತಂತ್ರಜ್ಞಾನದ ಪ್ರಯೋಜನವೇನು?” ಎಂದು ಕಿಡಿಕಾರಿದ್ದಾರೆ. ಈ ಸೋಲಿನ ನಂತರ ಪಾಕಿಸ್ತಾನ ತಂಡವು 2023 ರ ವಿಶ್ವಕಪ್‌’ನಲ್ಲಿ ಸೆಮಿಫೈನಲ್‌’ನ ರೇಸ್‌’ನಿಂದ ಬಹುತೇಕ ಹೊರಗುಳಿದಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News