ಕರೋನಾ ಮೂರನೇ ಅಲೆ (Corona Third Wave) ಹಾಗೂ ಒಮಿಕ್ರಾನ್ (Omicron) ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಆದರೆ ಇದರಿಂದ ತಮ್ಮ ವ್ಯಾಪಾರ- ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿರುವ ಹೋಟೆಲ್ ಮಾಲೀಕರು.
ಕರೋನಾ ರೂಪಾಂತರಿ ಒಮಿಕ್ರಾನ್ (Omicron) ಸೋಂಕಿಗೆ ತುತ್ತಾದ ಬಹುತೇಕ ಮಂದಿ ಆಕ್ಸಿಜನ್ ಅಥವಾ ಐಸಿಯು ಬೆಡ್ ಗಳ ಮೇಲೆ ಅವಲಂಬಿತರಾಗದೆ ಹೋಂ ಐಸೋಲೇಷನ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ ಕರೋನಾವೈರಸ್ (Coronavirus) ಅನ್ನು ತಡೆಗಟ್ಟಲು ಯಾವ ರಾಜ್ಯಗಳಲ್ಲಿ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ.
Covid-19 Update - ಬೆಂಗಳೂರಿನಲ್ಲಿ ಕೊರೊನಾ ಮೂರನೆ ಅಲೆಯ (Corona Third Wave) ಆರ್ಭಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ದಿನ ನಿತ್ಯ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.
Omicron Variant: ಕರೋನಾ ವೈರಸ್ನ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಆತಂಕದ ಮೋಡ ಕವಿದಿದೆ. ಈ ಮಧ್ಯೆ ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಆರೋಗ್ಯ ತಜ್ಞರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕರೋನಾವೈರಸ್ ಶೀಘ್ರದಲ್ಲೇ ಸಾಮಾನ್ಯ ಕಾಯಿಲೆಗಳಂತೆ ಅಂದರೆ ಜ್ವರ, ಕೆಮ್ಮು, ನೆಗಡಿಯಂತೆ ಆಗುತ್ತದೆ. ಏಕೆಂದರೆ ಈಗ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಜನರಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಅನಾರೋಗ್ಯ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಯಿಂದ ಜೀವಕ್ಕೆ ಅಪಾಯವನ್ನು ಎದುರಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
Corona Third Wave - ತನ್ನ ಕಂಪನಿಯ ಕೊವಿಡ್-19 ಲಸಿಕೆ 5 ರಿಂದ 11 ವರ್ಷದೊಳಗಿನ ಮಕ್ಕಳ ಮೇಲೂ ಪರಿಣಾಮಕಾರಿಯಾಗಿದೆ ಎಂದು Pfizer ಹೇಳಿಕೊಂಡಿದೆ. ಕಂಪನಿ ಈ ತಿಂಗಳಾಂತ್ಯದೊಳಗೆ ಆಹಾರ ಮತ್ತು ಔಷಧ ಆಡಳಿತಕ್ಕೆ ಲಸಿಕೆಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ.
ಲಕ್ನೋದ ಸರ್ಕಾರಿ ಆಸ್ಪತ್ರೆಗಳ ಒಪಿಡಿಗಳಲ್ಲಿ ಶೇಕಡಾ 20 ಕ್ಕಿಂತ ಹೆಚ್ಚು ರೋಗಿಗಳು ಜ್ವರ, ಶೀತ ಮತ್ತು ದಟ್ಟಣೆಯ ಬಗ್ಗೆ ದೂರು ನೀಡುತ್ತಿದ್ದಾರೆ. ವೈದ್ಯರು, ಇದನ್ನು ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುವ ಕಾಲೋಚಿತ ಜ್ವರ ಎಂದು ವಿವರಿಸುತ್ತಿದ್ದರೆ, ರೋಗಿಗಳಲ್ಲಿ ಭೀತಿ ಹರಡುತ್ತಿದೆ. ಇದು ಕರೋನಾದ ಮೂರನೇ ತರಂಗದ (Coronavirus Third Wave) ಆರಂಭವಾಗಬಹುದೆಂದು ಎಂದು ಸಾರ್ವಜನಿಕರಲ್ಲಿ ಭೀತಿ ಉಂಟಾಗಿದೆ.
Corona Third Wave: ಕೇರಳದಲ್ಲಿ ವೇಗವಾಗಿ ಹೆಚ್ಚಾಗುತ್ತಿರುವ ಕರೋನಾ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ, ಸಿಎಂ ಪಿಣರಾಯಿ ವಿಜಯನ್ ರಾತ್ರಿ ಕರ್ಫ್ಯೂ ವಿಧಿಸುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಕೇರಳ ಸರ್ಕಾರವನ್ನು ಕೋರೋನಾ ಸಾಂಕ್ರಾಮಿಕ ರೋಗ ತಡೆಗಟ್ಟಲು ರಾತ್ರಿ ಕರ್ಫ್ಯೂ ಹೇರುವ ಬಗ್ಗೆ ಪರಿಗಣಿಸುವಂತೆ ಸಲಹೆ ನೀಡಿತ್ತು.
Coronavirus In India - ಕೊರೊನಾ ವೈರಸ್ ಎರಡನೆಯ ಅಲೆ (Corona Second Wave)ಬಳಿಕ ದೀರ್ಘಕಾಲದವರೆಗೆ ಇನ್ನೇನು ಕೊರೊನಾದಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಇದೀಗ ಮತ್ತೊಮ್ಮೆ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಕೇವಲ ಒಂದು ದಿನದಲ್ಲಿ 40 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ ಕೊರೊನಾವೈರಸ್ನ ಮೂರನೇ ತರಂಗದ ಭಯದ ನಡುವೆ, ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕಿನ ಒತ್ತಡವು ಆತಂಕವನ್ನು ಹೆಚ್ಚಿಸಿದೆ ಮತ್ತು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ.
ಭಾರತದ ಔಷಧ ನಿಯಂತ್ರಕರು ಶುಕ್ರವಾರ ಜೈಡಸ್ ಕ್ಯಾಡಿಲಾ ಕಂಪನಿಯ ಮೂರು ಡೋಸ್ ಕೋವಿಡ್ -19 ಡಿಎನ್ಎ ಲಸಿಕೆಯನ್ನು ಅನುಮೋದಿಸಿದ್ದಾರೆ. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ಮಕ್ಕಳ ಮೇಲೆ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.
Mumbai Local Train: ಮುಂಬೈ ಸ್ಥಳೀಯ ರೈಲು ಸೇವೆಗಳು ಆಗಸ್ಟ್ 15 ರಿಂದ ಆರಂಭವಾಗಲಿವೆ. ಆರಂಭದಲ್ಲಿ, ಎರಡೂ ಡೋಸ್ ಕರೋನಾ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುವುದು. ರೈಲಿನಲ್ಲಿ ಪ್ರಯಾಣಿಸಲು, ಮೊದಲು ಬಿಎಂಸಿ ಅಥವಾ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಕೊರೊನಾವೈರಸ್ನ ಎರಡನೇ ತರಂಗ (Coronavirus Second Wave) ಇಳಿಮುಖವಾಗಿರುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅನ್ಲಾಕ್ 8 ರ ಅಡಿಯಲ್ಲಿ ದೆಹಲಿ ಮೆಟ್ರೋ ಮತ್ತು ಡಿಟಿಸಿ ಬಸ್ಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಓಡಿಸಲು ಅನುಮತಿಸಲಾಗಿದೆ. ಇದರೊಂದಿಗೆ, ಮಲ್ಟಿಪ್ಲೆಕ್ಸ್ಗಳು, ಸಿನೆಮಾ ಹಾಲ್ಗಳು ಮತ್ತು ಸ್ಪಾಗಳನ್ನು ಸಹ ತೆರೆಯಲು ಅನುಮತಿಸಲಾಗಿದೆ, ಆದರೆ ಕೆಲವು ನಿರ್ಬಂಧಗಳನ್ನು ಮುಂದುವರೆಸಲಾಗಿದೆ.
Coronavirus third wave in India: ಭಾರತವು ಆಗಸ್ಟ್ನಿಂದ ಕರೋನವೈರಸ್ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ನೋಡಬಹುದು ಮತ್ತು ಇದು ಸೆಪ್ಟೆಂಬರ್ನಲ್ಲಿ ಉತ್ತುಂಗಕ್ಕೇರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿ ಮಾಡಿದೆ. "ಕೋವಿಡ್ -19: ರೇಸ್ ಟು ಫಿನಿಶಿಂಗ್ ಲೈನ್" ಎಂಬ ವರದಿಯನ್ನು ಎಸ್ಬಿಐ ರಿಸರ್ಚ್ ಸಿದ್ಧಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.